ಪತ್ನಿಯ ಮನೆಗೆಲಸ: ಸುಪ್ರೀಂಕೋರ್ಟ್ ಮಹತ್ವದ ರೂಲಿಂಗ್
ನವದೆಹಲಿ, ಜ 7: ಏಳು ವರ್ಷದ ಹಿಂದಿನ ಅಪಘಾತದ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿದ್ದ ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ಪತ್ನಿಯ ಮನೆಗೆಲಸವೂ ಪತಿಯ ಕೆಲಸದಷ್ಟೇ ಮುಖ್ಯ ಎನ್ನುವ ಅಭಿಮತವನ್ನು ವ್ಯಕ್ತಪಡಿಸಿದೆ.
ನ್ಯಾ.ಎನ್.ವಿ.ರಮಣ ಮತ್ತು ಸೂರ್ಯಕಾಂತ ಅವರ ನ್ಯಾಯಪೀಠ, "ಪತಿಯ ಕಚೇರಿಯ ಕೆಲಸ ಎಷ್ಟು ಮುಖ್ಯವೋ, ಪತ್ನಿಯ ಮನೆಗೆಲಸವೂ ಅಷ್ಟೇ ಪ್ರಾಮಖ್ಯತೆಯನ್ನು ಹೊಂದಿದೆ. ಇದನ್ನು ಕಡೆಗಣಿಸುವಂತಿಲ್ಲ"ಎನ್ನುವ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ವ್ಯಕ್ತಪಡಿಸಿದೆ.
ಇಪ್ಪತ್ತು ವರ್ಷದ ಹಿಂದಿನ ಲತಾ ವಾಧ್ವಾ ಪ್ರಕರಣವನ್ನು ಉಲ್ಲೇಖಿಸಿ ನಾ.ರಮಣ ಅವರು ತಮ್ಮ ತೀರ್ಪನ್ನು ಸಮರ್ಥಿಸಿಕೊಂಡಿದ್ದಾರೆ. ಜನಗಣತಿಯ ವೇಳೆ 15.99 ಮಹಿಳೆಯರು ತಮ್ಮ ಕೆಲಸವನ್ನು 'ಮನೆಗೆಲಸ' ಎಂದು ನಮೂದಿಸಿಕೊಂಡಿರುತ್ತಾರೆ. ಈ ರೀತಿ ನಮೂದಿಸಿಕೊಂಡಿರುವ ಪುರುಷರ ಸಂಖ್ಯೆ 57.9 ಲಕ್ಷ ಮಾತ್ರ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

2014ರಲ್ಲಿ ನವದೆಹಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಅಪಘಾತ ಸಂಭವಿಸಿ ದಂಪತಿಗಳು ಮೃತ ಪಟ್ಟಿದ್ದರು. ಈ ದಂಪತಿಗಳನ್ನು ಅವಲಂಬಿಸಿಕೊಂಡಿದ್ದ ತಂದೆಗೆ 11.20ಲಕ್ಷ ರೂಪಾಯಿ ಪರಿಹಾರ ನೀಡಲು ವಿಮಾ ಕಂಪೆನಿ ನಿರ್ಧರಿಸಿತ್ತು.
ಆದರೆ, ಪತಿಯ ಕೆಲದಷ್ಟೇ ಪತ್ನಿಯ ಮನೆ ಕೆಲಸವೂ ಮುಖ್ಯ ಎಂದು ಪರಿಹಾರದ ಮೊತ್ತವನ್ನು ಮೇ, 2014ಕ್ಕೆ ಪೂರ್ವಾನ್ವಯವಾಗುವಂತೆ ಬಡ್ಡಿ ಸಮೇತ 33.20 ಲಕ್ಷ ರೂಪಾಯಿ ನೀಡಬೇಕೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ನೀಡಿದೆ.
ಪ್ರತೀದಿನ ಮಹಿಳೆ 134 ಮತ್ತು ಪುರುಷರು 76 ನಿಮಿಷವನ್ನು ಮನೆಗೆಲಸ ಮಾಡಲು ಸಮಯ ನಿಯೋಗಿಸುತ್ತಾರೆ. ಹಾಗಾಗಿ, ಮಹಿಳೆಯ ಮನೆಗೆಲಸವೂ ಕಚೇರಿಗೆ ಹೋಗುವ ಪತಿಯ ಕೆಲಸದಷ್ಟೇ ಮುಖ್ಯವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ!











Click it and Unblock the Notifications