ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉತ್ತರಾಖಂಡದಲ್ಲಿ ಭಾರಿ ಕುಸಿತ, ಅಪಾಯದಲ್ಲಿ 15,000ಜನ
ಬದರೀನಾಥ್ ಗೆ ತೆರಳುವ ದಾರಿಯಲ್ಲಿ ವಿಷ್ಣುಪ್ರಯಾಗದ ಸಮೀಪ ಈ ಭೂಕುಸಿತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 15,000 ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.
ಉತ್ತರಾಖಂಡ, ಮೇ 19: ಉತ್ತರಾಖಂಡದಲ್ಲಿ ಮತ್ತೆ ಭಾರೀ ಕುಸಿತ ಸಂಭವಿಸಿದೆ. ಪರಿಣಾಮ ಸಾವಿರಾರು ಜನ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.
ಬದರೀನಾಥ್ ಗೆ ತೆರಳುವ ದಾರಿಯಲ್ಲಿ ವಿಷ್ಣುಪ್ರಯಾಗದ ಸಮೀಪ ಈ ಭೂಕುಸಿತ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಸುಮಾರು 15,000 ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ.
ಭೂಕುಸಿತದಿಂದ ಬದರೀನಾಥ್ ಗೆ ಪ್ರಯಾಣಿಸುವ ರಸ್ತೆ ಸಂಪರ್ಕ ಕಳೆದುಕೊಂಡಿದೆ. ಹಲವಾರು ಪ್ರಯಾಣಿಕರು ರಸ್ತೆ ಮಧ್ಯದಲ್ಲೇ ಸಿಲುಕಿದ್ದಾರೆ.
ಭೂಕುಸಿತಕ್ಕೆ ಕಾರಣ ಮತ್ತು ರಕ್ಷಣಾ ಕಾರ್ಯಾಚರಣೆ ಬಗ್ಗೆ ಯಾವುದೇ ವಿವರಗಳು ತಿಳಿದು ಬಂದಿಲ್ಲ.
ಇನ್ನು ಸಂಕಷ್ಟದಲ್ಲಿ ಸಿಲುಕಿರುವವರ ನೆರವಿಗಾಗಿ ಹೆಲ್ಪ್ ಲೈನ್ ಸಂಖ್ಯೆಗಳು ಇಲ್ಲಿವೆ.
Comments
English summary
Uttarakhand: Landslide near Vishnuprayag on Badrinath route; Almost 15,000 tourists stranded.