ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಉತ್ತರಾಖಂಡ ಸಿಎಂ ಆಸ್ಪತ್ರೆಗೆ ದಾಖಲು
ಡೆಹ್ರಾಡೂನ್,
ಡಿಸೆಂಬರ್
28:
ಇತ್ತೀಚೆಗಷ್ಟೇ
ಕೊರೊನಾ
ಸೋಂಕಿಗೆ
ತುತ್ತಾಗಿದ್ದ
ಉತ್ತರಾಖಂಡ
ಮುಖ್ಯಮಂತ್ರಿ
ತ್ರಿವೇಂದ್ರ
ಸಿಂಗ್
ರಾವತ್
ಆಸ್ಪತ್ರೆಗೆ
ದಾಖಲಾಗಿದ್ದಾರೆ
ಎಂಬ
ಮಾಹಿತಿ
ಲಭ್ಯವಾಗಿದೆ.
ಆಗಸ್ಟ್ನಲ್ಲಿ
ಅಧಿಕಾರಿಗಳ
ಪೈಕಿ
ಮೂವರಿಗೆ
ಕೊರೊನಾ
ಸೋಂಕು
ದೃಢಪಟ್ಟಾಗಲೂ
ರಾವತ್
ಅವರು
ಪ್ರತ್ಯೇಕವಾಸದಲ್ಲಿದ್ದರು.
ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಡಿಸೆಂಬರ್ 18ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಮನೆಯಲ್ಲೇ ಪ್ರತ್ಯೇಕವಾಗಿದ್ದುಕೊಂಡು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಸಂಜೆ ಅವರು ಡೂನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೂಲಗಳ ಪ್ರಕಾರ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ಗೆ ಕೊರೊನಾ ಸೋಂಕು
ಉತ್ತರಾಖಂಡದಲ್ಲಿ
ಈವರೆಗೂ
89
ಸಾವಿರ
ಕೊರೊನಾ
ಪ್ರಕರಣಗಳು
ಪತ್ತೆಯಾಗಿವೆ.
1483
ಮಂದಿ
ಸಾವನ್ನಪ್ಪಿದ್ದಾರೆ.
ಡೆಹ್ರಾಡೂನ್ನಲ್ಲೇ
26,806
ಪ್ರಕರಣಗಳು
ವರದಿಯಾಗಿವೆ.
ರಾವತ್
ಅವರಿಗೆ
ಜ್ವರ
ಕಾಣಿಸಿಕೊಂಡಿದ್ದರಿಂದ
ವೈದ್ಯರ
ಸಲಹೆ
ಮೇರೆಗೆ
ಆಸ್ಪತ್ರೆಗೆ
ದಾಖಲಾಗಿದ್ದಾರೆ.
ಅವರ
ಆರೋಗ್ಯ
ಸ್ಥಿತಿ
ಸ್ಥಿರವಾಗಿದೆ.