ಉತ್ತರಾಖಂಡ: ಕಾಂಗ್ರೆಸ್ 53 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಡೆಹ್ರಾಡೂನ್, ಜನವರಿ 23: ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಉತ್ತರಾಖಂಡದಲ್ಲಿ ಸುಮಾರು 14 ದಿನಗಳ ಕಾಲ ಮಂಥನ ನಡೆಸಿದ ಕಾಂಗ್ರೆಸ್ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ 11 ಬ್ರಾಹ್ಮಣರು, 22 ಠಾಕೂರರು, 3 ಮಹಿಳೆಯರು, 2 ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕಿದೆ. ಉತ್ತರಾಖಂಡದ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್ ಶ್ರೀನಗರ ಕ್ಷೇತ್ರದಿಂದ ಮತ್ತು ಪ್ರೀತಮ್ ಸಿಂಗ್ ಚಕ್ರತಾ (ಎಸ್ಟಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆದರೆ ಶುಕ್ರವಾರವಷ್ಟೇ ಪಕ್ಷಕ್ಕೆ ಸೇರ್ಪಡೆಗೊಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಮತ್ತು ಹರಕ್ ಸಿಂಗ್ ರಾವತ್ ಅವರ ಹೆಸರು ಪಕ್ಷದ ಮೊದಲ ಅಭ್ಯರ್ಥಿ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಸ್ಪರ್ಧಿಸುವ ಬಗ್ಗೆ ಸಸ್ಪೆನ್ಸ್ ಆಗಿ ಉಳಿದಿದೆ. ಹರೀಶ್ ರಾವತ್ ಅವರು ಎರಡೂ ಸ್ಥಾನಗಳಿಗೆ ಹಕ್ಕು ಸಾಧಿಸುತ್ತಿದ್ದಾರೆ. ಹೀಗಿರುವಾಗ ವಿವಾದದ ಹಿನ್ನೆಲೆಯಲ್ಲಿ ಹೈಕಮಾಂಡ್ ಎರಡೂ ಸ್ಥಾನಗಳನ್ನು ತಡೆಹಿಡಿದಿದೆ. ಹರಿದ್ವಾರದ ಮೂರು ಸ್ಥಾನಗಳಲ್ಲಿ ಒಂದರಿಂದ ಹರೀಶ್ ರಾವತ್ ಅವರ ಪುತ್ರಿ ಅನುಪಮಾ ರಾವತ್ ಮತ್ತು ಖಾನ್ಪುರದಿಂದ ಮಗ ವೀರೇಂದ್ರ ರಾವತ್ ಟಿಕೆಟ್ ಬಯಸಿದ್ದಾರೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಹರಕ್ ಸಿಂಗ್ ರಾವತ್ ಮತ್ತು ಸೊಸೆ ಅನುಕೀರ್ತಿ ಗುನ್ಸೈ ಅವರ ಟಿಕೆಟ್ ಕೂಡ ತಡೆಹಿಡಿಯಲಾಗಿದೆ. ಹರಕ್ ಸಿಂಗ್ ಅವರನ್ನು ದೋಯಿವಾಲಾ ಅಥವಾ ಚೌಬಟ್ಟಖಾಲ್ನಿಂದ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ. ಸೊಸೆ ಅನುಕ್ರೀತಿ ಗುನ್ಸೈ ಅವರನ್ನು ಲ್ಯಾನ್ಸ್ಡೌನ್ ಸ್ಪರ್ಧಿ ಎಂದು ಪರಿಗಣಿಸಲಾಗಿದೆ. ಇನ್ನೂ ಕೌಟುಂಬಿಕ ಸಮಸ್ಯೆಗಳ ಬಗ್ಗೆ ಕಾಂಗ್ರೆಸ್ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ.

ಫೆಬ್ರವರಿ 14 ರಂದು ಚುನಾವಣೆ
ಬಿಜೆಪಿ ತೊರೆದು ಇತ್ತೀಚೆಗೆ ಕಾಂಗ್ರೆಸ್ಗೆ ಸೇರಿದ್ದ ರಾಜ್ಯ ವಿಧಾನಸಭೆಯ ಮಾಜಿ ಸ್ಪೀಕರ್ ಯಶ್ಪಾಲ್ ಆರ್ಯ ಅವರು ತಮ್ಮ ಬಾಜ್ಪುರ-ಎಸ್ಸಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಆರ್ಯ ಅವರ ಪುತ್ರ ಸಂಜೀವ್ ಆರ್ಯ ಕೂಡ ನೈನಿತಾಲ್ (SC) ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ, ಅವರು ತಮ್ಮ ತಂದೆಯೊಂದಿಗೆ ಬಿಜೆಪಿಗೆ ರಾಜೀನಾಮೆ ನೀಡಿದರು. ಕಳೆದ ವರ್ಷ ಜೂನ್ನಲ್ಲಿ ನಿಧನರಾದ ಹಿರಿಯ ಕಾಂಗ್ರೆಸ್ ನಾಯಕಿ ಇಂದಿರಾ ಹೃದಯೇಶ್ ಅವರ ಪುತ್ರ ಸುಮಿತ್ ಹೃದಯೇಶ್ ಅವರು ಹಲ್ದ್ವಾನಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಉತ್ತರಾಖಂಡದ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 14 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಹಿಮಾಲಯ ತಪ್ಪಲಿನ ರಾಜ್ಯದಲ್ಲಿ ಬಿಜೆಪಿಯಿಂದ ಮತ್ತೆ ಅಧಿಕಾರ ಹಿಡಿಯಲು ಕಾಂಗ್ರೆಸ್ ಹವಣಿಸುತ್ತಿದೆ.

Recommended Video
ಜೀತ್ ರಾಮ್ ಅವರು 2017 ರ ಚುನಾವಣೆಯಲ್ಲಿ ಸೋತ ಥರಾಲಿ (SC) ಸ್ಥಾನದಿಂದ ಕಣಕ್ಕಿಳಿದಿದ್ದಾರೆ. 2017 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ನಲ್ಲಿ ಸೋತಿದ್ದ ಮಲ್ಚಂದ್ ಅವರು ಈ ಬಾರಿ ಅದೇ ಪುರೋಲಾ (ಎಸ್ಸಿ) ಕ್ಷೇತ್ರದಿಂದ ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. 2017ರ ವಿಧಾನಸಭಾ ಚುನಾವಣೆಯಲ್ಲಿ ಗಂಗೋತ್ರಿ ಕ್ಷೇತ್ರದಿಂದ ಸೋತಿದ್ದ ವಿಜಯಪಾಲ್ ಸಿಂಗ್ ಸಜ್ವಾನ್ ಈ ಬಾರಿ ಅದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.












Click it and Unblock the Notifications