ಸೆ.16: ದೇಶ, ವಿದೇಶ ಸುದ್ದಿಗಳ ಹೆಡ್ ಲೈನ್ಸ್
ಬೆಂಗಳೂರು, ಸೆ.16: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
6.30: ಪಶ್ಚಿಮ ಬಂಗಾಳದ ಇತಿಹಾಸ ಪ್ರಸಿದ್ಧ ವಿಶ್ವಭಾರತಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿಯೊಬ್ಬರು ತಮ್ಮ ಮೇಲೆ ಶಿಕ್ಷಕರೊಬ್ಬರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳವಾಗಿದೆ ಎಂದು ಆರೋಪಿಸಿದ್ದಾರೆ. ಶಿಕ್ಷಕನ ಮೇಲೆ ದೂರು ದಾಖಲಿಸಲಾಗಿದ್ದು, ಪೊಲೀಸರು ಎಫ್ ಐಆರ್ ಹಾಕಿದ್ದಾರೆ.
6.00: ಶಾರದಾ ಚಿಟ್ ಫಂದ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾದ ಪ್ರಮುಖ ಫುಟ್ಬಾಲ್ ಕ್ಲಬ್ ಗಳಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.
5.40: 9 ಜನ ಪಕ್ಷೇತರ ಶಾಸಕರು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಸಮ್ಮುಖದಲ್ಲಿ ಎನ್ ಸಿಪಿಗೆ ಸೇರ್ಪಡೆಗೊಂಡಿದ್ದಾರೆ
10.05:
ಬಿಜೆಪಿ
ಹಿರಿಯ
ನಾಯಕ
ಎಲ್
ಕೆ
ಅಡ್ವಾಣಿ
ಅವರಿಗೆ
ಕೊನೆಗೂ
ಒಂದು
ಸ್ಥಾನವನ್ನು
ಕಲ್ಪಿಸಲಾಗಿದೆ.
ಲೋಕಸಭೆ
ಶಿಷ್ಟಾಚಾರ
ಆಯೋಗಕ್ಕೆ
ಚೇರ್ಮನ್
ಮಾಡಲಾಗಿದೆ.
9.55:
ಗೃಹ
ಸಚಿವ
ರಾಜನಾಥ್
ಸಿಂಗ್
ಅವರು
ಹರ್ಯಾಣದ
ಮನೇಸರ್
ನಲ್ಲಿರುವ
ಎನ್
ಎಸ್
ಜಿ
ತರಬೇತಿ
ಕೇಂದ್ರಕ್ಕೆ
ಇಂದು
ಭೇಟಿ
ನೀಡಲಿದ್ದಾರೆ.
9.45: 9 ರಾಜ್ಯಗಳ 3 ಲೋಕಸಭೆ ಹಾಗೂ 33 ಅಸೆಂಬ್ಲಿ ಚುನಾವಣೆಗಳ ಫಲಿತಾಂಶ ಮಂಗಳವಾರ ಹೊರಬೀಳಲಿದೆ.
9.30: ಜಪಾನ್ ನ ಟೋಕಿಯೋದಲ್ಲಿ ಭೂಕಂಪ ಸಂಭವಿಸಿದೆ. ರಿಕ್ಚರ್ ಮಾಪಕದಲ್ಲಿ ಪ್ರಮಾಣ 5.6 ನಷ್ಟಿದೆ.
9.15: ಸಿರಿಯಾ, ಗಾಜಾದಲ್ಲಿ ಸುಮಾರು 300,000 ವಿದ್ಯಾರ್ಥಿಗಳು ಮತ್ತೆ ಶಾಲೆ ಕಡೆಗೆ ಮುಖ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ.