ಕಪ್ಪುಹಣ ಪ್ರಕರಣ, ಸುಪ್ರೀಂಗೆ ಎರಡನೇ ವರದಿ ಸಲ್ಲಿಕೆ
ಬೆಂಗಳೂರು, ಡಿ.2: ದೇಶ, ವಿದೇಶಗಳಲ್ಲಿನ ವಿದ್ಯಮಾನಗಳ ಈ ದಿನದ ರೌಂಡ್ ಅಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ಸುದ್ದಿಗಳ ಅಸಮಗ್ರ ಸಂಗ್ರಹ ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.
18.00: ಕಪ್ಪುಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ ತನ್ನ ಎರಡನೇ ವರದಿಯನ್ನು ಸುಪ್ರೀಂಕೋರ್ಟಿಗೆ ಸಲ್ಲಿಸಿದೆ.
17.30:
ಪ್ರಧಾನಿ
ನರೇಂದ್ರ
ಮೋದಿ
ಅವರು
ಡಿ.25ರಂದು
ವಾರಣಾಸಿಯಲ್ಲಿ
ಸ್ವಚ್ಛ
ಭಾರತ
ಅಭಿಯಾನದಲ್ಲಿ
ಪಾಲ್ಗೊಳ್ಳಲಿದ್ದಾರೆ.
14.05:ಪೂರ್ವ ದೆಹಲಿಯಲ್ಲಿನ ಸಂತ ಸೆಬಾಸ್ಟಿಯನ್ ಚರ್ಚ್ ಬೆಂಕಿಗೆ ಆಹುತಿಯಾದ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ(SIT)ವನ್ನು ಪೊಲೀಸರು ರಚಿಸಿದ್ದಾರೆ.
13.30: ಪೋಲ್ಯಾಂಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಗೇ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬನನ್ನು ಮೇಯರ್ ಆಗಿ ಆಯ್ಕೆ ಮಾಡಲಾಗಿದೆ.
11.05:
ಕೇಂದ್ರ
ಸರ್ಕಾರದ
ವಿರುದ್ಧ
ಸಂಸತ್ತಿನ
ಮಹಾತ್ಮಾ
ಗಾಂಧಿಜೀ
ಪ್ರತಿಮೆ
ಬಳಿ
ಕಾಂಗ್ರೆಸ್
ನಿಂದ
ಪ್ರತಿಭಟನೆ.
10.55:
ದೆಹಲಿಯಲ್ಲಿ
ಚರ್ಚ್
ಬೆಂಕಿಗೆ
ಆಹುತಿಯಾಗಿರುವ
ಘಟನೆ
ನಂತರ
ಕ್ರೈಸ್ತ
ಸಮುದಾಯದಿಂದ
ದೆಹಲಿ
ಪೊಲೀಸ್
ಕೇಂದ್ರ
ಕಚೇರಿ
ಎದುರು
ಪ್ರತಿಭಟನೆ.
10.25: ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಿಂದ ಸಾಧ್ವಿ ನಿರಂಜನ್ ಜ್ಯೋತಿ ಹೇಳಿಕೆ ವಿರುದ್ಧ ಖಂಡನಾ ನಿರ್ಣಯ ವಾಗ್ದಂಡನೆ ವಿಧಿಸಲಾಗಿದೆ.
10.15: ಕೈಸ್ತ್ರರು, ಮುಸ್ಲಿಮರು ಶ್ರೀರಾಮಚಂದ್ರನ ಮಕ್ಕಳು, ಭಾರತೀಯರೆಲ್ಲರೂ ಹಿಂದೂಗಳು ಎಂದು ಸಾಧ್ವಿ ನಿರಂಜನ್ ಜ್ಯೋತಿ ಹೇಳಿಕೆ ನೀಡಿದ್ದರು.
10.00: ಹಿರಿಯ ನಟ ದೇವನ್ ವರ್ಮ ಪುಣೆಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.
9.30: ಜಮ್ಮು ಮತ್ತು ಕಾಶ್ಮೀರ ಹಾಗೂ ಜಾರ್ಖಂಡ್ ನಲ್ಲಿ ಎರಡನೇ ಹಂತದ ವಿಧಾನಸಭಾ ಮತದಾನ ಜಾರಿಯಲ್ಲಿದೆ.