ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಮ್ಯೂನಿಸ್ಟರು ರಾಜಕೀಯ ಕೊಲೆಗಳನ್ನು ನಿಲ್ಲಿಸಬೇಕು : ಆದಿತ್ಯನಾಥ್

By Sachhidananda Acharya
|
Google Oneindia Kannada News

ಕಣ್ಣೂರು, ಅಕ್ಟೋಬರ್ 4: ಕೇರಳ ರಾಜ್ಯ ಬಿಜೆಪಿ ಘಟಕದ ವತಿಯಿಂದ ನಡೆಯುತ್ತಿರುವ ಜನರಕ್ಷಾ ಯಾತ್ರೆಯಲ್ಲಿ ಇಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಂಡಿದ್ದಾರೆ.

ಮಧ್ಯರಾತ್ರಿ ಮಂಗಳೂರಿಗೆ ಬಂದು ಕೇರಳಕ್ಕೆ ಹೋದ ಯೋಗಿ ಆದಿತ್ಯನಾಥ್ಮಧ್ಯರಾತ್ರಿ ಮಂಗಳೂರಿಗೆ ಬಂದು ಕೇರಳಕ್ಕೆ ಹೋದ ಯೋಗಿ ಆದಿತ್ಯನಾಥ್

ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಕೊಲೆ ಖಂಡಿಸಿ ಈ ಜನರಕ್ಷಾ ಪಾದಯಾತ್ರೆ ನಡೆಯುತ್ತಿದೆ. ಇದರಲ್ಲಿ ಕೇಚೇರಿಯಿಂದ ಕಣ್ಣೂರುವರೆಗಿನ ಪಾದಯಾತ್ರೆಯ ನೇತೃತ್ವವನ್ನು ಯೋಗಿ ವಹಿಸಿದ್ದಾರೆ.

UP CM Yogi Adityanath takes part in Jana Raksha Yatra in Kannur

ನಿನ್ನೆ ರಾತ್ರಿ ಲಕ್ನೋದಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿ ನಂತರ ರಸ್ತೆ ಮಾರ್ಗವಾಗಿ ಕೇರಳಕ್ಕೆ ತೆರಳಿದ ಯೋಗಿ ಆದಿತ್ಯನಾಥ್ ಇಂದು ಬೆಳಿಗ್ಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಪಾದಯಾತ್ರೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, "ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರಾದಲ್ಲಿರುವ ಕಮ್ಯೂನಿಸ್ಟ್ ಸರಕಾರಗಳಿಗೆ ಈ ಯಾತ್ರೆ ಕನ್ನಡಿ ಹಿಡಿದಂತಿದೆ. ಅವರು ರಾಜಕೀಯ ಹತ್ಯೆಗಳಿಗೆ ಕೊನೆ ಹಾಡಲೇಬೇಕಾಗಿದೆ," ಎಂದು ಕಮ್ಯೂನಿಸ್ಟರನ್ನು ಒತ್ತಾಯಿಸಿದರು.

"ಪ್ರಜಾಪ್ರಭುತ್ವದಲ್ಲಿ ಹಿಂಸೆಗೆ ಅವಕಾಶವಿಲ್ಲ. ಆದರೆ ಇಲ್ಲಿ ರಾಜಕೀಯ ಕೊಲೆಗಳು ಮುಂದುವರಿದಿವೆ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೇಚೇರಿಯಿಂದ ಆರಂಭವಾದ ಪಾದಯಾತ್ರೆ ಇದೀಗ ಕಣ್ಣೂರಿನತ್ತ ಹೊರಟಿದೆ. ಇನ್ನು ನಿನ್ನೆ ಪಯ್ಯನೂರಿನಲ್ಲಿ ಪಾದಯಾತ್ರೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಿದ್ದರು. 15 ದಿನಗಳ ಕಾಲ ನಡೆಯಲಿರುವ ಪಾದಯಾತ್ರೆ ಅಕ್ಟೋಬರ್ 17ರಂದು ಕಣ್ಣೂರಿನಲ್ಲಿ ಸಮಾರೋಪಗೊಳ್ಳಲಿದೆ.

English summary
Kerala: Uttar Pradesh Chief minister Yogi Adityanath takes part in Jana Raksha Yatra in Kannur over killing of BJP and RSS workers in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X