Get Updates
Get notified of breaking news, exclusive insights, and must-see stories!

ರಾಮಾಯಣ ಮ್ಯೂಸಿಯಂಗೆ ಇದ್ದ ಅಡಚಣೆ ನಿವಾರಿಸಿದ ಯೋಗಿ

ಮ್ಯೂಸಿಯಂಗಾಗಿ 25 ಎಕರೆ ಜಾಗ ಗುರುತಿಸಿ ವರ್ಷಗಳೇ ಕಳೆದಿದ್ದರೂ, ಸಮಾಜವಾದಿ ಪಕ್ಷವು ಜಾಗ ಹಸ್ತಾಂತರಕ್ಕೆ ಮನಸ್ಸು ಮಾಡಿರಲಿಲ್ಲ. ಈಗ ಯೋಗಿ ಆದಿತ್ಯನಾಥ್ ಸಿಎಂ ಆದ ಮೇಲೆ ಮ್ಯೂಸಿಯಂ ಯೋಜನೆಗೆ ಮತ್ತೆ ಚಾಲನೆ ಸಿಕ್ಕಿದೆ.

ಲಕ್ನೋ, ಮಾರ್ಚ್ 21: ಅಯೋಧ್ಯೆಯಲ್ಲಿ ರಾಮಾಯಣ ವಸ್ತುಸಂಗ್ರಹಾಲಯ ಕಟ್ಟಬೇಕೆಂಬ ಕೇಂದ್ರ ಸರ್ಕಾರದ ಬಹು ದಿನಗಳ ಆಕಾಂಕ್ಷೆ ಈಡೇರಿಕೆಗೆ ಈಗ ಕಾಲ ಕೂಡಿಬಂದಿದೆ.

ವಸ್ತು ಸಂಗ್ರಹಾಲಕ್ಕಾಗಿ ಗುರುತಿಸಿದ್ದ ಜಾಗಕ್ಕೆ ಇದ್ದ ಅಡಚಣೆಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿರುವ ಉತ್ತರ ಪ್ರದೇಶದ ನೂತನ ಸಿಎಂ ಯೋಗಿ ಆದಿತ್ಯನಾಥ್, ಮ್ಯೂಸಿಯಂ ಕಟ್ಟಲು ಬೇಕಿದ್ದ 25 ಎಕರೆ ಭೂಮಿಗೆ ಹಸಿರು ನಿಶಾನೆ ನೀಡಿದ್ದಾರೆ.[ಯುಪಿ ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ]

UP CM Yogi Adityanath clears land for Ramayana museum in Ayodhya

ಈ ವಾರಾಂತ್ಯಕ್ಕೆ ಅದು ಮ್ಯೂಸಿಯಂ ನಿರ್ಮಾಣ ಸಮಿತಿಗೆ ಅದು ಹಸ್ತಾಂತರವಾಗಲಿದೆ. ಈ ಜಾಗದಲ್ಲಿ ರಾಮಾಯಣದಲ್ಲಿ ಶ್ರೀ ರಾಮನನ್ನು ಯಾವ ರೀತಿಯಲ್ಲಿ ನಿರೂಪಿಸಲಾಗಿದೆಯೋ ಅದೇ ರೀತಿಯಲ್ಲಿ ಮ್ಯೂಸಿಯಂನಲ್ಲೂ ಶ್ರೀರಾಮನನ್ನು ನಿರೂಪಿಸಲಾಗುತ್ತದೆ ಎಂದು ಹೇಳಲಾಗಿದೆ.[ರಾಮ ಜನ್ಮಭೂಮಿ ವಿವಾದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ]

ಮ್ಯೂಸಿಯಂಗೆ ನಿರ್ಮಾಣಕ್ಕಾಗಿ ಜಾಗ ಗುರುತಿಸಿ ಕೆಲ ವರ್ಷಗಳು ಕಳೆದಿದ್ದರೂ, ಆ ಭೂಮಿಯ ಹಸ್ತಾಂತರ ಸಾಧ್ಯವಾಗಿರಲಿಲ್ಲ. ಉತ್ತರ ಪ್ರದೇಶದಲ್ಲಿ ಈ ಹಿಂದಿದ್ದ ಸಮಾಜವಾದಿ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ.[ಆ ಒಂದು ಘಟನೆಯೇ ಯೋಗಿ ಸಿಎಂ ಆಗಲು ಮೂಲ ಕಾರಣ!]

ಈಗ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಇದಕ್ಕೆ ಕಾಯಕಲ್ಪ ನೀಡಿದೆ. ಸಮಾಜವಾದಿ ಸರ್ಕಾರದಲ್ಲಿ ಧೂಳು ತಿನ್ನುತ್ತಿದ್ದ ಭೂಮಿ ಹಸ್ತಾಂತರ ಫೈಲ್ ಗೆ ಪುನಃ ಹೊರತೆಗೆಸಿ, ಭೂಮಿ ಹಸ್ತಾಂತರಕ್ಕೆ ಅಸ್ತು ಎಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+