UP: ಜಗಳ ಬಿಡಿಸಲು ಹೋದ ಬಿಜೆಪಿ ಮುಖಂಡನಿಗೆ ಚಪ್ಪಲಿಯಿಂದ ಥಳಿತ

ಲಕ್ನೋ ಸೆಪ್ಟೆಂಬರ್ 14: ಬಿಜೆಪಿ ಮುಖಂಡನಿಗೆ ಸ್ಥಳೀಯ ಮಹಿಳೆಯರು ಚಪ್ಪಲಿಯಿಂದ ಥಳಿಸಿದ ಘಟನೆ ಫಿರೋಜಾಬಾದ್‌ನಲ್ಲಿ ನಡೆದಿದೆ. ಧರ್ಮಶಾಲಾ ವಿವಾದದಲ್ಲಿ ಮಧ್ಯಪ್ರವೇಶಿಸಲು ಬಂದಿದ್ದಕ್ಕೆ ಬಿಜೆಪಿ ಮುಖಂಡನಿಗೆ ಥಳಿಸಲಾಗಿದೆ.

ಮಹಿಳೆಯರು ಬಿಜೆಪಿ ಮುಖಂಡನ ಬಟ್ಟೆ ಹರಿದು ಕತ್ತು ಹಿಸುಕಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿ ಮುಖಂಡನ ಬೆಂಬಲಿಗರ ದೂರಿನ ಮೇರೆಗೆ 10 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಬಿಜೆಪಿ ನಾಯಕನಿಗೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

UP: BJP leader who went to settle a fight was beaten up

ತುಂಡ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿ ಒಂದು ಧರ್ಮಶಾಲೆ ಇದೆ. ಸ್ಟೇಷನ್ ರಸ್ತೆಯಲ್ಲಿರುವ ಈ ಧರ್ಮಶಾಲೆಯ ಆವರಣದಲ್ಲಿ ಬೆಲೆಬಾಳುವ ಜಮೀನಿದೆ. ತುಂಡಲಿ ನಿವಾಸಿ ಯುವಕನೊಬ್ಬ ಕೆಲವರ ಹೆಸರಿನಲ್ಲಿ ಇದನ್ನು ಅಗ್ರಿಮೆಂಟ್ ಮಾಡಿಕೊಂಡಿದ್ದಾನೆ. ಇದನ್ನು ತುಂಡಲಿ ನಿವಾಸಿ ರೋಷನ್‌ಲಾಲ್‌ ಅವರ ಪುತ್ರ ನವಲ್‌ ಕಿಶೋರ್‌ ವಿರೋಧಿಸುತ್ತಿದ್ದಾರೆ. ಯಾಕೆಂದರೆ ನವಲ್‌ ಕಿಶೋರ್‌ ಈ ಜಮೀನು ತಮ್ಮದೆಂದು ವಾದಿಸಿದ್ದಾರೆ.

ಬುಧವಾರ ಬೆಳಗ್ಗೆ ನವಲ್ ಕಿಶೋರ್ ಈ ಮೈದಾನಕ್ಕೆ ಆಗಮಿಸಿದ್ದ ವೇಳೆ ಯೋಜಿತ ರೀತಿಯಲ್ಲಿ ಅಲ್ಲಿ ಕುಳಿತಿದ್ದ ಹತ್ತಾರು ಪುರುಷರು ಮತ್ತು ಮಹಿಳೆಯರು ನವಲ್ ನನ್ನು ಹಿಡಿದು ಥಳಿಸಿದ್ದಾರೆ.

ಆಗಲೇ ಹೊಂಚು ಹಾಕಿ ಕಾಯುತ್ತಿದ್ದ ಜನರಿಂದ ದಾಳಿ

ನವಲ್ ಕಿಶೋರ್ ತನ್ನ ಕುಟುಂಬ ಧರ್ಮಶಾಲಾವನ್ನು ಹೊಂದಿದ್ದು, ಅದನ್ನು ಕುಟುಂಬದ ಕೆಲವು ಸದಸ್ಯರು ಮಾರಾಟ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದಂತೆ ವಿವಾದ ನಡೆಯುತ್ತಿದೆ.

UP: BJP leader who went to settle a fight was beaten up

ಆದರೆ ಬಲವಂತವಾಗಿ ಸ್ಥಳವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಪಡೆದ ನವಲ್ ಕಿಶೋರ್ ಅವರು ರಘುರಾಜ್ ಸಿಂಗ್, ಸುಶೀಲ್ ಸವಿತಾ, ಬ್ರಿಜ್ಮೋಹನ್, ರೋಹಿತ್ ದಯಾಳ್, ಲೋಕೇಂದ್ರ ಸಿಂಗ್ ಪೌನಿಯನ್, ಪ್ರವೀಣ್ ಸಭಸಾದ್ ಅವರನ್ನು ಕರೆಸಿದರು. ಅವರಿಗೆ ಈ ಬಗ್ಗೆ ವಿವರಿಸುತ್ತಿದ್ದ ವೇಳೆ ರಾಕೇಶ್ ಕುಮಾರ್, ಪ್ರದೀಪ್, ದಿನೇಶ್, ಸುನ್ಹರಿ ಲಾಲ್, ಅಶೋಕ್ ಕುಮಾರ್, ರಾಹುಲ್, ರಾಮಪ್ರಕಾಶ್, ಲಾಲಾ, ಬಂಟಿ, ಬಂಟಿ ಅವರ ಸಹೋದರ ಮತ್ತು ಕೆಲವು ಅಪರಿಚಿತ ಮಹಿಳೆಯರು ಮತ್ತು ಪುರುಷರು ದೊಣ್ಣೆ ಮತ್ತು ರಾಡ್‌ಗಳಿಂದ ಅವರ ಹಲ್ಲೆ ನಡೆಸಿದ್ದಾರೆ.

ಜಗಳದ ವಿಡಿಯೋ ಮಾಡುವ ವೇಳೆ ಬಿಜೆಪಿ ಮುಖಂಡನಿಗೆ ಥಳಿಸಿದ ಜನ

ಆತನನ್ನು ಕೊಲ್ಲುವ ಉದ್ದೇಶದಿಂದ ಕುತ್ತಿಗೆಗೆ ಹೊಡೆಯಲಾಗಿದೆ. ಮಹಿಳೆಯೊಬ್ಬರು ನವಲ್ ಅವರ ತಲೆಗೆ ಕಲ್ಲು ಎಸೆದಿದ್ದು, ಆತನ ತಲೆಗೆ ಗಾಯವಾಗಿದೆ. ಈ ವೇಳೆ ಬಿಜೆಪಿ ಮುಖಂಡ ಮುಖೇಶ್ ಧಾಮಾ ಅವರು ಹೊಡೆಯುತ್ತಿರುವುದನ್ನು ವಿಡಿಯೋ ಮಾಡಲು ಆರಂಭಿಸಿದರು. ಆಗ ಮಹಿಳೆಯರು ಆಕ್ರೋಶಗೊಂಡು ಬಿಜೆಪಿ ಮುಖಂಡನಿಗೆ ಚಪ್ಪಲಿಯಿಂದ ಥಳಿಸಿದ್ದಾರೆ. ಗುಂಪು ಬಿಜೆಪಿ ನಾಯಕನಿಗೆ ಥಳಿಸುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದೆ. ಬಿಜೆಪಿ ಮುಖಂಡ ಮುಖೇಶ್ ಧಾಮಾ ಅವರು ಮಾಧ್ಯಮ ಒಬಿಸಿ ಮೋರ್ಚಾದ ಸಹ-ಮುಖ್ಯಸ್ಥರಾಗಿದ್ದಾರೆ. ಬ್ರಿಜ್ ಪ್ರದೇಶ ಜಿಲ್ಲಾ ಸಹಕಾರ ಖರೀದಿ ಮತ್ತು ಮಾರಾಟ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪೊಲೀಸರು ಆಗಮಿಸಿದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಗದ್ದಲ ಉಂಟಾಗಿದೆ.

ಸ್ಥಳಕ್ಕೆ ಆಗಮಿಸಿ ಪೊಲೀಸರ ವಿಚಾರಣೆ

ಎಸ್‌ಡಿಎಂ ಸತ್ಯೇಂದ್ರ ಸಿಂಗ್, ತಹಸೀಲ್ದಾರ್ ನಿಶಾ ಶ್ರೀವಾಸ್ತವ ಕೂಡ ಆಗಮಿಸಿದರು. ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಧರ್ಮಶಾಲಾ ಜಮೀನಿಗೆ ಸಂಬಂಧಿಸಿದಂತೆ ಜಗಳ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಪ್ರದೀಪ್ ಕುಮಾರ್ ಹೇಳುತ್ತಾರೆ. ತನಿಖೆಯ ನಂತರ ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು. ಸಂತ್ರಸ್ತರು 10 ಜನರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅವರ ದೂರಿನಲ್ಲಿ ಗಾಯಾಳು ಮುಖೇಶ್ ಧಾಮಾ, ನನ್ನ ಮೇಲೆ ದಾಳಿಗೆ ಹೊಂಚು ಹಾಕಿದ್ದ ಪುರುಷರು ಮತ್ತು ಮಹಿಳೆಯರು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಬಟ್ಟೆಗಳನ್ನೂ ಹರಿದು ಹಾಕಿದ್ದಾರೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+