ಡ್ರೀಂ ಗರ್ಲ್ ಹೇಮಾ ಮಾಲಿನಿಗೆ ಡ್ರೀಂ ಡೀಲ್ ಏನಿದು?
ಮುಂಬೈ, ಜ. 29: ಬಾಲಿವುಡ್ ನಟಿ, ಸಂಸದೆ ಹೇಮಮಾಲಿನಿ ಅವರ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿ ಬಂದಿದೆ. ನೃತ್ಯ ಅಕಾಡೆಮಿ ಆರಂಭಿಸಲು ಹೇಮಮಾಲಿನಿ ಅವರು ಮುಂಬೈನ ಅಂಧೇರಿಯಲ್ಲಿ ಪಡೆದುಕೊಂಡ ಜಾಗ ಈಗ ವಿವಾದಕ್ಕೆ ಕಾರಣವಾಗಿದೆ.
ಕೋಟ್ಯಂತರ ರುಪಾಯಿ ಬೆಲೆ ಬಾಳುವ ಭೂಮಿಯನ್ನು ಸಾವಿರಾರು ರುಪಾಯಿಗೆ ಪಡೆದುಕೊಂಡ ಆರೋಪ ಹೇಮಮಾಲಿನಿ ಮೇಲೆ ಹೊರೆಸಲಾಗಿದೆ.
ಓಶಿವಾರ ಪ್ರದೇಶದಲ್ಲಿರುವ ಸುಮಾರು 2,000 ಚದರ ಮೀಟರ್ ವಿಸ್ತ್ರೀರ್ಣದ ಭೂಮಿಯನ್ನು ಸಂಸದೆ ಹೇಮಮಾಲಿನಿಗೆ ಮಂಜೂರು ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾಯಿದೆ ಮೂಲಕ ಕಾರ್ಯಕರ್ತ ಅನಿಲ್ ಗಲಗಳಿ ಆವರು ಬಹಿರಂಗ ಪಡಿಸಿದ್ದಾರೆ. ಕೋಟ್ಯಂತರ ಬೆಲೆ(40 ಕೋಟಿ ರು ಎಂದು ಅಂದಾಜಿಸಲಾಗಿದೆ) ಬಾಳುವ ಈ ಭೂ ಪ್ರದೇಶ ಕೇವಲ 70,000 ರುಗಳಿಗೆ ಹೇಮ ಮಾಲಿನಿ ಅವರ ವಶವಾಗಿದೆ.
ಇದಕ್ಕೂ ಮುನ್ನ 1977ರಲ್ಲೂ ಅಂದಿನ ಶಿವಸೇನಾ-ಬಿಜೆಪಿ ಸರ್ಕಾರ ಹೇಮಮಾಲಿನಿಗೆ ಸಿಆರ್ ಜಡ್ಜ್(Coastal Regulation Zone) ನಲ್ಲಿದ್ದ ಪ್ರದೇಶವನ್ನು ಕಡಿಮೆ ದರಕ್ಕೆ ಮಂಜೂರು ಮಾಡಿತ್ತು. ಈ ಎರಡು ಮಂಜೂರಾದ ಜಾಗವನ್ನು ಸಂಸದೆಯಾದ ಮೇಲೂ ಹೇಮಮಾಲಿನಿ ಅವರು ಹಿಂತಿರುಗಿಸಿಲ್ಲ ಎಂದು ಆರ್ ಟಿಐ ಕಾರ್ಯಕರ್ತ ಅನಿಲ್ ಆಪಾದಿಸಿದ್ದಾರೆ.
ಸರ್ಕಾರದಿಂದ ಮಂಜೂರಾದ ಜಾಗದಲ್ಲಿ ಸುಮಾರು 18.49 ಕೋಟಿ ರು ವೆಚ್ಚದಲ್ಲಿ ಹೇಮಮಾಲಿನಿ ಅವರು ನೃತ್ಯ ಅಕಾಡೆಮಿಯನ್ನು ಸ್ಥಾಪಿಸಲಿದ್ದಾರೆ. ಮಂಜೂರಾದ ಭೂಮಿಯ ಮೌಲ್ಯದ ಶೇ 25ರಷ್ಟು ಕಂತನ್ನು ಕೂಡಾ ಸರ್ಕಾರಕ್ಕೆ ಕಟ್ಟಿಲ್ಲ ಎಂದು ಅನಿಲ್ ಹೇಳಿದ್ದಾರೆ.

ಹೇಮಮಾಲಿನಿರಿಂದ ಭೂ ಕಬಳಿಕೆ ಇದೇ ಮೊದಲಲ್ಲ
ಇದಕ್ಕೂ ಮುನ್ನ 1977ರಲ್ಲೂ ಅಂದಿನ ಶಿವಸೇನಾ-ಬಿಜೆಪಿ ಸರ್ಕಾರ ಹೇಮಮಾಲಿನಿಗೆ ಸಿಆರ್ ಜಡ್ಜ್(Coastal Regulation Zone) ನಲ್ಲಿದ್ದ ಪ್ರದೇಶವನ್ನು ಕಡಿಮೆ ದರಕ್ಕೆ ಮಂಜೂರು ಮಾಡಿತ್ತು.
|
ಡ್ರೀಂ ಗರ್ಲ್ ಗೆ ಡ್ರೀಮ್ ಡೀಲ್ ಎಂದ ರಾಜ್ ದೀಪ್
ಡ್ರೀಂ ಗರ್ಲ್ ಗೆ ಡ್ರೀಮ್ ಡೀಲ್ ಎಂದು ಟೈಟಲ್ ಕೊಟ್ಟ ರಾಜ್ ದೀಪ್ ಸರ್ದೇಸಾಯಿ. ನಾನು ಕೂಡಾ ಹೇಮಮಾಲಿನಿ ಅಭಿಮಾನಿ ಆದರೆ, ಭೂ ಕಬಳಿಕೆಯಾಗಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
|
ಚದರ ಮೀಟರ್ ಗೆ 140 ರು ನಂತೆ ಮಾರಾಟ
2000 ಚದರ ಮೀಟರ್ ಪ್ರದೇಶವನ್ನು ಪ್ರತಿ ಚ.ಮೀಗೆ 140 ರು ನಂತೆ ಮಾರಾಟ ಮಾಡಲಾಗಿದೆ ಎಂದ ಆರ್ ಟಿಐ ಕಾರ್ಯಕರ್ತ ಅನಿಲ್
|
ಇದಕ್ಕಿಂತ ಬ್ರೇಕಿಂಗ್ ನ್ಯೂಸ್ ಇಲ್ಲಿದೆ ನೋಡಿ
ಇದಕ್ಕಿಂತ ಬ್ರೇಕಿಂಗ್ ನ್ಯೂಸ್ ಇಲ್ಲಿದೆ ನೋಡಿ, ವಾಧ್ರಾ ಅವರು ಹೇಮಮಾಲಿನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರಂತೆ!
|
ಅನ್ ರಿಯಲ್ ಟೈಮ್ಸ್ ನಿಂದ ಫೇಕ್ ಫೇಸ್ ಬುಕ್ ವಾಲ್
ಅನ್ ರಿಯಲ್ ಟೈಮ್ಸ್ ನಿಂದ ಫೇಕ್ ಫೇಸ್ ಬುಕ್ ವಾಲ್ ನಲ್ಲಿ ಬಂದಿರುವ ಸಂದೇಶಗಳು ಹೀಗಿವೆ ಓದಿ ಆನಂದಿಸಿ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications