Tirupati: ಆಗಸ್ಟ್ ತಿಂಗಳಲ್ಲಿ ತಿರುಪತಿ ಶ್ರೀವಾರಿ ಹುಂಡಿಯಲ್ಲಿ ದಾಖಲೆಯ ಹಣ ಸಂಗ್ರಹ!
ಪ್ರತೀ ತಿಂಗಳು ತಿರುಪತಿ ತಿರುಮಲ ಶ್ರೀವಾರಿಯ ಆದಾಯ ಹೆಚ್ಚಾಗುತ್ತಲೇ ಇದೆ. ಬೇಡಿದ ವರವನ್ನು ನೀಡುವ ತಿಮ್ಮಪ್ಪನಿಗೆ ಹಣ, ವಸ್ತು, ಚಿನ್ನಾಭರಣದ ರೂಪದಲ್ಲಿ ನಿತ್ಯ ಆದಾಯ ಸಂಗ್ರಹವಾಗುತ್ತದೆ. ಏಳು ಬೆಟ್ಟಗಳ ಒಡೆಯನಿಗೆ ಲಕ್ಷಾಂತರ ಜನ ನಿತ್ಯ ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಾರೆ. ಸದ್ಯ ಆಗಸ್ಟ್ ತಿಂಗಳ ತಿರುಪತಿ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು ಎಂದಿಗಿಂತ ಆದಾಯ ಹೆಚ್ಚಾಗಿರುವುದು ಕಂಡುಬಂದಿದೆ.
ಈ ವರ್ಷದ ಮೊದಲ 7 ತಿಂಗಳಲ್ಲಿ ತಿರುಪತಿ ಹುಂಡಿಯಲ್ಲಿ 795.35 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಆಗಸ್ಟ್ ತಿಂಗಳಿನಲ್ಲೇ ತಿರುಮಲ ತಿಮ್ಮಪ್ಪನ ಆದಾಯ 125.67 ಕೋಟಿ ರೂಪಾಯಿ ಇದೆ. ಹೀಗಾಗಿ ತಿರುಮಲ ಶ್ರೀಗಳ 8 ತಿಂಗಳ ಆದಾಯ 921.02 ಕೋಟಿ ಆಗಿದೆ.

ಇತ್ತೀಚಿನ ದಿನಗಳಲ್ಲಿ ಸ್ವಾಮಿಯ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಆ ಪ್ರಕಾರ ಹುಂಡಿಯ ಆದಾಯವೂ ದಾಖಲೆ ಮಟ್ಟದಲ್ಲಿ ದಾಖಲಾಗುತ್ತಿದೆ. ಭಕ್ತರು ತಿರುಪತಿ ಶ್ರೀವಾರಿಗೆ ಬೃಹತ್ ಕಾಣಿಕೆಗಳನ್ನು ಅರ್ಪಿಸುತ್ತಾರೆ. ಹೀಗೆ ಕಾಣಿಕೆ ನೀಡಿ ಪ್ರತೀ ತಿಂಗಳು ತಿರುಮಲೇಶನ ಆಸ್ತಿಗಳ ಮೌಲ್ಯವನ್ನು ಹೆಚ್ಚಿಸುತ್ತಿದ್ದಾರೆ. ಇದರಿಂದ ತಿರುಪತಿ ತಿಮ್ಮಪ್ಪ ಎಷ್ಟು ಶಕ್ತಿಶಾಲಿ ದೇವರು ಎನ್ನುವುದು ಸ್ಪಷ್ಟವಾಗುತ್ತದೆ.
ಬೆಲೆ ಬಾಳುವ ವಜ್ರ, ಚಿನ್ನಾಭರಣಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡುತ್ತಾರೆ. ಈ ವರ್ಷದ ಮೊದಲ 7 ತಿಂಗಳ ಹುಂಡಿಯ ಆದಾಯ ಶ್ರೀವಾರಿಯ ಖಾತೆಗೆ 795.35 ಕೋಟಿ ಜಮಾ ಆಗಿದೆ. ಅಲ್ಲದೆ ಈ ವರ್ಷ ಜನವರಿಯಲ್ಲಿ 116.46 ಕೋಟಿ ರೂ., ಫೆಬ್ರವರಿ 111.71 ಕೋಟಿ ರೂ., ಮಾರ್ಚ್ 118.49 ಕೋಟಿ ರೂ., ಏಪ್ರಿಲ್ 101.63 ಕೋಟಿ ರೂ., ಮೇ 108.28 ಕೋಟಿ ರೂ., ಜೂನ್ 113.64 ಕೋಟಿ ರೂ., ಜುಲೈ 125.35 ಕೋಟಿ ರೂ., ಆಗಸ್ಟ್ 125.67 ಕೋಟಿ ರೂಪಾಯಿ ಶ್ರೀವರಿಯ ಹುಂಡಿಯಲ್ಲಿ ಹಣ ಸಂಗ್ರಹವಾಗಿದೆ.

ತಿರುಮಲ ಅನ್ನಮಯ್ಯ ಭವನದಲ್ಲಿ ನಡೆದ ಡಯಲ್ ಯುವರ್ ಈವೋ ಕಾರ್ಯಕ್ರಮದಲ್ಲಿ ಟಿಟಿಡಿ ಇಒ ಶ್ಯಾಮಲಾ ರಾವ್ ಅವರು ಆಗಸ್ಟ್ ತಿಂಗಳಲ್ಲಿ ಶ್ರೀಗಳ ದರ್ಶನಕ್ಕೆ ಬಂದ ಭಕ್ತರು ಮತ್ತು ಭಕ್ತರು ನೀಡಿದ ಕಾಣಿಕೆಗಳ ವಿವರವನ್ನು ಬಹಿರಂಗಪಡಿಸಿದರು.
ಆಗಸ್ಟ್ ತಿಂಗಳಲ್ಲಿ 22.42 ಲಕ್ಷ ಭಕ್ತರು ಶ್ರೀಗಳ ದರ್ಶನ ಪಡೆದಿದ್ದಾರೆ. ಶ್ರೀವಾರಿ ಹುಂಡಿಯ ಆದಾಯ 125.67 ಕೋಟಿ ಸಂಗ್ರಹವಾಗಿದೆ ಎಂದು ಇಒ ಪ್ರಕಟಿಸಿದರು. ಜೊತೆಗೆ ಈ ತಿಂಗಳಲ್ಲಿ 1.06 ಲಕ್ಷ ಲಡ್ಡೂಗಳು ಮಾರಾಟವಾಗಿದ್ದು, 24.33 ಲಕ್ಷ ಜನರು ಪ್ರಸಾದ ಸ್ವೀಕರಿಸಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ 9.49 ಲಕ್ಷ ಭಕ್ತರು ಹರಕೆ ಅರ್ಪಿಸಿದ್ದಾರೆ. ಕಳೆದ ವಾರದಲ್ಲಿ 75 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನು ವಿವಿಧ ದೇವಸ್ಥಾನಗಳಿಗೆ ರವಾನಿಸಲಾಗಿದೆ. ಇದಲ್ಲದೆ ಇನ್ಮುಂದೆ ಶ್ರೀವಾರಿ ಲಡ್ಡು ಗುಣಮಟ್ಟ ವೃದ್ಧಿಯಾಗಲಿದ್ದು ಇದಕ್ಕಾಗಿ ತುಪ್ಪದ ಗುಣಮಟ್ಟವನ್ನು ಹೆಚ್ಚಿಸಲಾಗಿದೆ ಎಂದು ಶ್ಯಾಮಲಾ ರಾವ್ ಅವರು ಹೇಳಿದರು.
ಸಾವಯವ ಕೃಷಿ ಅಕ್ಕಿಯಲ್ಲಿ ಹಲವು ಬಗೆಯ ಅಕ್ಕಿಗಳಿವೆ ಎಂದು ಕಾರ್ಮಿಕರು ತಮ್ಮ ಗಮನಕ್ಕೆ ತಂದಿದ್ದಾರೆ. ಸ್ವಾಮಿಯ ಪ್ರಸಾದದ ಕುರಿತು ಸಮಿತಿಯನ್ನು ನೇಮಿಸಲಾಗಿದೆ. ಅಕ್ಕಿಯ ಗುಣಮಟ್ಟ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಅಕ್ಟೋಬರ್ನಲ್ಲಿ ನಡೆಯಲಿರುವ ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.












Click it and Unblock the Notifications