Trains: ಮೇ ತಿಂಗಳಲ್ಲಿ ಸಂಚರಿಸುವ ರೈಲು ಪ್ರಯಾಣಿಕರೇ ಗಮನಿಸಿ! ರೈಲುಗಳ ಸಂಚಾರ ಬಿಗ್ ಅಪ್ಡೇಟ್

ಬೆಂಗಳೂರು, ಮೇ 02: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂನಲ್ಲಿ ಎಂಕ್ಷನ್ ಹಂತ-II ಯಾರ್ಡ್ ಮಾರ್ಪಾಡು, ಆಧನೀಕರಣ ಸಂಬಂಧಿಸಿದ ಕಾಮಗಾರಿಗಳಿಗೆ ನಡೆಯುತ್ತಿವೆ. ಈ ಕಾರಣದಿಂದಾಗಿ ದಕ್ಷಿಣ ಮಧ್ಯ ರೈಲ್ವೆಯು ಮೇ ತಿಂಗಳಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲು ಸೇವೆ ರದ್ದಗೊಳಿಸಲಾಗಿದೆ. ಅಲ್ಲದೇ ಹಲವು ರೈಲುಗಳ ಮಾರ್ಗ ಬದಲಾವಣೆ, ನಿಯಂತ್ರಣ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆಯು ಮಾಹಿತಿ ನೀಡಿದೆ. ಮೇ ತಿಂಗಳಲ್ಲಿ ಓಡಾಡುವ ಪ್ರಯಾಣಿಕರು ಗಮನಿಸಬೇಕಿದೆ.

ಮೇ ತಿಂಗಳಲ್ಲಿ ರದ್ದಗೊಂಡು 09 ರೈಲುಗಳ ಪಟ್ಟಿ

* ಕೆಎಸ್ಆರ್ ಬೆಂಗಳೂರು-ಧರ್ಮಾವರಂ-ಕೆಎಸ್ಆರ್ ಬೆಂಗಳೂರು ಮೆಮು ವಿಶೇಷ ರೈಲು (06595/06596) ಮೇ 5 ರಿಂದ 17ರರೆಗೆ ರದ್ದುಗೊಳಿಸಲಾಗಿದೆ.

* ಗುಂತಕಲ್-ಹಿಂದೂಪುರ ಡೆಮು ರೈಲು (ಸಂಖ್ಯೆ 77213) ಮೇ 4 ರಿಂದ 17ರವರೆಗೆ ರದ್ದು ಮಾಡಲಾಗಿದೆ.

* ಹಿಂದೂಪುರ-ಗುಂತಕಲ್ ಡೆಮು ರೈಲು (77214) ಮೇ 5 ರಿಂದ 18ರವರೆಗೆ ಸೇವೆ ಸ್ಥಗಿತಗೊಳಿಸಿದೆ.

* ಯಶವಂತಪುರ-ಬೀದರ್ ಎಕ್ಸ್‌ಪ್ರೆಸ್ ರೈಲು (16571) ಇದೇ ಮೇ 11, 12, 13 ಮತ್ತು 15 ರಂದು ಕಾರ್ಯಾಚರಣೆ ಮಾಡುವುದಿಲ್ಲ.

* ಇದೇ ಮೇ 12, 13, 14 ಮತ್ತು 16, 2025 ರಂದು ಪ್ರಯಾಣ ಆರಂಭಿಸುವ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16572) ರದ್ದಗೊಳಿಸಲಾಗಿದೆ.

* ಯಶವಂತಪುರ-ಲಾತೂರ್ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16583) ಮೇ 10, 14, 16 ಮತ್ತು 17, 2025 ರಂದು ಕಾರ್ಯಾಚರಣೆ ನಡೆಸದೇ ಸ್ಥಗಿತಗೊಳ್ಳಲಿದೆ.

* ಮೇ 11, 15, 17 ಮತ್ತು 18, 2025 ರಂದು ಪ್ರಯಾಣ ಆರಂಭಿಸಬೇಕಿದ್ದ ಲಾತೂರ್-ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16584) ಸಂಚಾರ ನಿಲ್ಲಿಸಲಿದೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.

* ಸೋಲ್ಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11311) ಮೇ 11 ರಿಂದ 16 ರವರೆಗೆ ಸಂಚಾರ ಸೇವೆ ಲಭ್ಯ ಇರುವುದಿಲ್ಲ.

* ಹಾಸನ-ಸೋಲಾಪುರ ಎಕ್ಸ್‌ಪ್ರೆಸ್ ರೈಲು (11312) ಮೇ 12 ರಿಂದ 17 ವರೆಗೆ ಪ್ರಯಾಣ ರದ್ದುಗೊಳಿಸಲಾಗಿದೆ.

Train Cancellation Diversion and Delays Announced by South Central Railway from May 4 to 18

04 ರೈಲುಗಳ ನಿಯಂತ್ರಣ

* ಮೇ 4 ರಿಂದ 16, 2025 ರವರೆಗೆ ಲೋಕಮಾನ್ಯ ತಿಲಕ್ ಟರ್ಮಿನಲ್‌ನಿಂದ ಸಂಚರಿಸುವ 'ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್ ರೈಲು' (11013), ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 60 ನಿಮಿಷಗಳ ಕಾಲ ನಿಯಂತ್ರಣದಲ್ಲಿರಲಿದೆ.

* ಟುಟಿಕೋರಿನ್-ಓಖಾ ವಿವೇಕ್ ಎಕ್ಸ್‌ಪ್ರೆಸ್ ರೈಲು (19567) ಮೇ 4 ಮತ್ತು 11 ರಂದು ಟುಟಿಕೋರಿನ್‌ನಿಂದ ಹೊರಡಲಿದ್ದು, ಮಾರ್ಗ ಮಧ್ಯದ ನಿಲ್ದಾಣಗಳಲ್ಲಿ 150 ನಿಮಿಷಗಳ ಕಾಲ ನಿಲ್ಲಲಿದೆ.

* ಮೈಸೂರು-ಜೈಪುರ ದ್ವೈ-ವಾರಕ್ಕೊಮ್ಮೆ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12975) ಮೇ 8, 10, 15 ಮತ್ತು 17 ರಂದು ಮೈಸೂರಿನಿಂದ ಹೊರಡಲಿದ್ದು, ಮಾರ್ಗ ಮಧ್ಯೆ 90 ನಿಮಿಷಗಳ ಕಾಲ ನಿಲ್ಲಲಿದೆ.

* ಪುರಿಯಿಂದ ಹೊರಡಲಿರುವ 'ಪುರಿ-ಯಶವಂತಪುರ ಗರೀಬ್ ರಥ ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22883) ಮೇ 9 ಮತ್ತು 16ರಂದು ಮಾರ್ಗದ ನಿಲ್ದಾಣಗಳಲ್ಲಿ 90 ನಿಮಿಷಗಳ ಕಾಲ ನಿಲ್ಲಿಸಲಾಗುತ್ತಿದೆ ಎಂದು ದಕ್ಷಿಣ ರೈಲು ತಿಳಿಸಿದೆ.

Train Cancellation Diversion and Delays Announced by South Central Railway from May 4 to 18

13 ರೈಲುಗಳ ಮಾರ್ಗ ಬದಲಾವಣೆ

* ಮೇ 11 ರಿಂದ 17 ರವರೆಗೆ ಪ್ರಯಾಣ ಆರಂಭಿಸುವ ರೈಲು (ಸಂಖ್ಯೆ 16591) ಎಸ್‌ಎಸ್‌ಎಸ್ ಹುಬ್ಬಳ್ಳಿ-ಮೈಸೂರು ಹಂಪಿ ಎಕ್ಸ್‌ಪ್ರೆಸ್ ಅನ್ನು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮೂಲಕ ಸಂಚರಿಸಲಿದೆ. ಗುಂತಕಲ್ ಮತ್ತು ಯಲಹಂಕ ನಡುವಿನ ನಿಯಮಿತ ನಿಗದಿತ ನಿಲ್ದಾಣಗಳಲ್ಲಿ ನಿಲುಗಡೆ ನೀಡಲ್ಲ.

* ಮೈಸೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಹಂಪಿ ಎಕ್ಸ್‌ಪ್ರೆಸ್ ರೈಲು (16592) ಮೇ 11 ರಿಂದ 17 ರವರೆಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ ಮೂಲಕ ಸಾಗಲಿದೆ. ಯಲಹಂಕ ಮತ್ತು ಗುಂತಕಲ್ ನಡುವಿನ ನಿಲ್ದಾಣಗಳಲ್ಲಿ ನಿಲುಗಡೆ ನೀಡುವುದಿಲ್ಲ.

* ಬೆಂಗಳೂರು ಕೆಎಸ್‌ಆರ್‌-ಅಜ್ಮೀರ್ ಗರೀಬ್ ನವಾಜ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (16532) ಮೇ 16 ರಂದು ಸಂಚಾರ ಆರಂಭಿಸಲಿದೆ. ಇದನ್ನು ಯಶವಂತಪುರ, ಚಿಕ್ಕಜಾಜೂರು, ರಾಯದುರ್ಗ, ಬಲ್ಲಾರಿ ಮತ್ತು ಹುಬ್ಬಳ್ಳಿ ಮೂಲಕ ಓಡಿಸಲಲಾಗುತ್ತಿದೆ. ಹಿಂದೂಪುರ ಮತ್ತು ಗುಂತಕಲ್ ಮಧ್ಯದ ನಿಲುಗಡೆಗಳನ್ನು ಬಿಟ್ಟು ಬಿಡಲಾಗುತ್ತದೆ.

Train Cancellation Diversion and Delays Announced by South Central Railway from May 4 to 18

* ಅಜ್ಮೀರ್-ಕೆಎಸ್ಆರ್ ಬೆಂಗಳೂರು ಗರೀಬ್ ನವಾಜ್ ವೀಕ್ಲಿ ಎಕ್ಸ್‌ಪ್ರೆಸ್ ರೈಲು (16531) ಮೇ 12 ರಂದು ತನ್ನ ಪ್ರಯಾಣ ಪ್ರಾರಂಭಿಸಿದೆ. ಈ ರೈಲು ಹುಬ್ಬಳ್ಳಿ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮೂಲಕ ಸಾಗಲಿದೆ. ಗುಂತಕಲ್ ಮತ್ತು ಹಿಂದೂಪುರ ಮಧ್ಯದ ರೈಲು ನಿಲ್ದಾಣಗಳಲ್ಲಿ ಸೇವೆ ನೀಡುವುದಿಲ್ಲ.

* ಭಗತ್ ಕಿ ಕೋಠಿ-ಕೆಎಸ್‌ಆರ್ ಬೆಂಗಳೂರು ವೀಕ್ಲಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16533) ಮೇ 14ಕ್ಕೆ ಸಂಚರಿಸಲಿದೆ. ಈ ರೈಲು ಗುಂತಕಲ್ ಮತ್ತು ಹಿಂದೂಪುರ ನಡುವೆ ನಿಯಮಿತ ನಿಲುಗಡೆಗಳನ್ನು ಬಿಟ್ಟು ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮತ್ತು ಯಶವಂತಪುರ ಮಾರ್ಗವಾಗಿ ತಿರುಗಿಸಲಾಗಿದೆ. ಪ್ರಯಾಣಿಕರು ಗಮನಿಸಬೇಕೆಂದು ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.

* ಯಶವಂತಪುರ-ಗೋರಖ್‌ಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (12592) ಮೇ 12 ರಂದು ಸಂಚಾರ ನಡೆಸಲಿದೆ. ಈ ರೈಲು ಚಿಕ್ಕಜಾಜೂರು, ರಾಯದುರ್ಗ, ಬಳ್ಳಾರಿ, ಗುಂತಕಲ್ ಬೈಪಾಸ್ ಮೂಲಕ ಮಾರ್ಗವಾಗಿ ಸಾಗಲಿದೆ. ರಾಯಚೂರು, ಹಿಂದೂಪುರ ಮತ್ತು ಗುಂತಕಲ್ ನಡುವೆ ಯಾವೊಂದು ನಿಲ್ದಾಣಗಳಲ್ಲಿ ರೈಲು ನಿಲ್ಲಿಸದಿರಲು ನಿರ್ಧರಿಸಲಾಗಿದೆ.

* ಮೇ 14 ರಂದು ಪ್ರಯಾಣ ಆರಂಭಿಸಲಿರುವ ಹೌರಾ-ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (22831) ಸಚರಿಸಲಿದೆ. ಅನಂತಪುರದಿಂದ ಯಲಹಂಕವರೆಗಿನ ನಿಲ್ದಾಣಗಳನ್ನು ಬಿಟ್ಟು ಉಳಿದೆಲ್ಲ ಕಡೆಗೆ ನಿಲ್ಲಲಿದೆ. ಧೋನೆ, ಗುಂತಕಲ್, ಬಳ್ಳಾರಿ, ರಾಯದುರ್ಗ ಮತ್ತು ಚಿಕ್ಕಜಾಜೂರ್ ಮೂಲಕ ಸೇವೆ ನೀಡಲಿದೆ.

* ರೈಲು ಸಂಖ್ಯೆ 22602 ಸಾಯಿನಗರ ಶಿರಡಿ-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ಮೇ 16 ರಂದು ಅನಂತಪುರದಿಂದ ಕಟ್ಪಾಡಿಗೆ ವರೆಗೆ ಸಾಗದೇ ರೇಣುಗುಂಟಾ ಮೂಲಕ ಸೇವೆ ನೀಡಲಿದೆ.

* ತಿರುವನಂತಪುರಂ ಸೆಂಟ್ರಲ್-CSMT ಮುಂಬೈ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 16332) ಮೇ 10 ಬೆಂಗಳೂರು SMVT, ಬಾಣಸವಾಡಿ, ತುಮಕೂರು, ಅರಸೀಕೆರೆ, ರಾಯದುರ್ಗ, ಬಳ್ಳಾರಿ ಮತ್ತು ಗುಂತಕಲ್, ಹಿಂದೂಪುರ ಮತ್ತು ಧರ್ಮಾವರಂನಲ್ಲಿ ನಿಲುಗಡೆ ನೀಡದೇ ಸಂಚರಿಸಲಿದೆ.

* CSMT ಮುಂಬೈ-ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು (16331) ಮೇ 4 ಮತ್ತು 11 ರಂದು ತನ್ನ ಪ್ರಯಾಣ ಪ್ರಾರಂಭಿಸಲಿದ್ದು, ಗುಂತಕಲ್, ಗೂಟಿ, ಕಡಪಾ, ರೇಣುಗುಂಟಾ, ಮೇಲ್ಪಕ್ಕಂ, ಕಟ್ಪಾಡಿ ಮತ್ತು ಜೋಲಾರ್‌ಪೇಟ್ಟೈ ಮಾರ್ಗವಾಗಿ ತಿರುಗಿಸಲಾಗಿದೆ.

* SMVT ಬೆಂಗಳೂರು-ಗುವಾಹಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 00635) ಮೇ 8 ಮತ್ತು 15 ರಂದು ತನ್ನ ಪ್ರಯಾಣವನ್ನು ಪ್ರಾರಂಭಿಸಲಿದೆ. SMVT ಬೆಂಗಳೂರು, ಜೋಲರ್‌ಪೇಟ್ಟೈ, ರೇಣುಗುಂಟಾ, ಗುಡೂರು ಮತ್ತು ವಿಜಯವಾಡ ಮಾರ್ಗವಾಗಿ ಸಾಗಲಿದೆ. ಧರ್ಮಾವರಂನಲ್ಲಿ ನಿಲುಗಡೆ ನೀಡುವುದಿಲ್ಲ.

* ಮೇ 5 ಮತ್ತು 12, 2025 ರಂದು ಸಂಚರಿಸಲಿರುವ (00636) ಗುವಾಹಟಿ -SMVT ಬೆಂಗಳೂರು ಎಕ್ಸ್‌ಪ್ರೆಸ್ ರೈಲು ವಿಜಯವಾಡ, ಗುಡೂರು, ರೇಣಿಗುಂಟ, ಜೋಲಾರ್‌ಪೆಟ್ಟೈ ಮತ್ತು SMVT ಬೆಂಗಳೂರು ಮಾರ್ಗವಾಗಿ ಸಾಗಲಿದೆ. ತಿರುಗಿಸಲಾಗುತ್ತದೆ, ಗುಂಟೂರಿನಿಂದ ಧರ್ಮಾವರಂಗೆ ನಿಲುಗಡೆ ನೀಡದಂತೆ ಮಾರ್ಗ ಬದಲಿಸಲಾಗಿದೆ.

* ತುಗಲಕಾಬಾದ್-ಯಶವಂತಪುರ ಪಾರ್ಸೆಲ್ ಎಕ್ಸ್‌ಪ್ರೆಸ್ ರೈಲು (00640) ಮೇ 13 ರಂದು ಪ್ರಯಾಣ ಆರಂಭಿಸಲಿದೆ. ಈ ರೈಲು ಗುಂಟಕಲ್ ಬೈಪಾಸ್, ಬಳ್ಳಾರಿ ಮೂಲಕ ತಿರುಗಿಸಲಾಗಿದೆ ಎಂದು ದಕ್ಷಿಣ ರೈಲ್ವೆ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+