ಚಿತ್ರಸುದ್ದಿ: ಹೋಳಿಯ ರಂಗು, ಸಚಿನ್ ಗೆ ಲತಾ ಗುಂಗು

ಬೆಂಗಳೂರು, ಮಾ.10: ರಂಗು ರಂಗಿನ ಹಬ್ಬ ಹೋಳಿ ಹತ್ತಿರವಾಗುತ್ತಿದ್ದಂತೆ ಉತ್ತರಪ್ರದೇಶದ ಮಥುರಾದಲ್ಲಿ ಶ್ರೀಕೃಷ್ಣನ ಆರಾಧನೆ ಜೋರಾಗುತ್ತಿದೆ. ಬರ್ಸಾನಾಗೆ ಸೇರಿದ ನಂದಗಾಂವ್ ನಲ್ಲಿ ರಾಧಾಕೃಷ್ಣನ ಪೂಜೆ ಜತೆಗೆ ಬಣ್ಣದೋಕುಳಿ ಆರಂಭವಾಗಿದೆ. ರಾಧೆಯ ಮೂಲ ಊರು ಎನ್ನಲಾದ ಇಲ್ಲಿ ಲಾಥ್ ಮಾರ್ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಉಳಿದಂತೆ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಭಾರತರತ್ನ ಲತಾ ಮಂಗೇಷ್ಕರ್ ಅವರನ್ನು ಖಾಸಗಿ ಸಮಾರಂಭವೊಂದರಲ್ಲಿ ಭೇಟಿ ಮಾಡಿದ್ದಾರೆ. ಲತಾ ಜೀ ಅವರ ಹಾಡುಗಳನ್ನು ಕೇಳುತ್ತಾ ಬೆಳೆದ ಅವರ ಅಪ್ಪಟ ಅಭಿಮಾನಿ ಸಚಿನ್ ಅವರು ಪತ್ನಿ ಅಂಜಲಿ ಜತೆ ಫೋಟೊ ಪೋಸ್ ಕೊಟ್ಟಿದ್ದಾರೆ.

ದೆಹಲಿಯಲ್ಲಿ ಸೆರೆ ಸಿಕ್ಕಿ ಸೂರಕ್ಕಿ(sun bird) ಚಿತ್ರ, ಢಾಕಾದಲ್ಲಿ ಲಂಕನ್ನರ ವಿಜಯೋತ್ಸವ, ಮಹಾರಾಷ್ಟ್ರದಲ್ಲಿ ಸಿಕ್ಕ ಆಲಿಕಲ್ಲು, ಹೈದರಾಬಾದಿನಲ್ಲಿ ನಮೋ ಚಹಾ ಚರ್ಚೆ, ಚಿಕ್ಕಮಗಳೂರಿನಲ್ಲಿ ಟೀ ಫ್ಯಾಕ್ಟರಿಗೆ ಬೆಂಕಿ, ಕೇರಳದ ಕಂಬಳ, ಲಾಲೂ ವಿರುದ್ಧ ತಿರುಗಿ ಬಿದ್ದ ಮುಸ್ಲಿಂ ಮಹಿಳೆಯರು ಮುಂತಾದ ಚಿತ್ರಗಳಿವೆ ತಪ್ಪದೇ ನೋಡಿ...

ರಂಗು ರಂಗಿನ ಹಬ್ಬ ಹೋಳಿ

ರಂಗು ರಂಗಿನ ಹಬ್ಬ ಹೋಳಿ

ರಂಗು ರಂಗಿನ ಹಬ್ಬ ಹೋಳಿ ಹತ್ತಿರವಾಗುತ್ತಿದ್ದಂತೆ ಉತ್ತರಪ್ರದೇಶದ ಮಥುರಾದಲ್ಲಿ ಶ್ರೀಕೃಷ್ಣನ ಆರಾಧನೆ ಜೋರಾಗುತ್ತಿದೆ. ಬರ್ಸಾನಾಗೆ ಸೇರಿದ ನಂದಗಾಂವ್ ನಲ್ಲಿ ರಾಧಾಕೃಷ್ಣನ ಪೂಜೆ ಜತೆಗೆ ಬಣ್ಣದೋಕುಳಿ ಆರಂಭವಾಗಿದೆ. ರಾಧೆಯ ಮೂಲ ಊರು ಎನ್ನಲಾದ ಇಲ್ಲಿ ಲಾಥ್ ಮಾರ್ ಹೋಳಿ ಹಬ್ಬದ ಸಂಭ್ರಮ ಮನೆ ಮಾಡಿದೆ.

ಲತಾ ಮಂಗೇಷ್ಕರ್ -ಸಚಿನ್ ತೆಂಡೂಲ್ಕರ್

ಲತಾ ಮಂಗೇಷ್ಕರ್ -ಸಚಿನ್ ತೆಂಡೂಲ್ಕರ್

ಉಳಿದಂತೆ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಅವರು ಕುಟುಂಬ ಸಮೇತ ಭಾರತರತ್ನ ಲತಾ ಮಂಗೇಷ್ಕರ್ ಅವರನ್ನು ಖಾಸಗಿ ಸಮಾರಂಭವೊಂದರಲ್ಲಿ ಭೇಟಿ ಮಾಡಿದ್ದಾರೆ.

ದೆಹಲಿಯಲ್ಲಿ ಸೆರೆ ಸಿಕ್ಕಿ ಸೂರಕ್ಕಿ(sun bird) ಚಿತ್ರ

ದೆಹಲಿಯಲ್ಲಿ ಸೆರೆ ಸಿಕ್ಕಿ ಸೂರಕ್ಕಿ(sun bird) ಚಿತ್ರ

ನವದೆಹಲಿಯಲ್ಲಿ ಸೆರೆ ಸಿಕ್ಕಿ ಸೂರಕ್ಕಿ(purple sun bird) ಚಿತ್ರ. PTI Photo by Kamal Kishore

ಲಂಕನ್ಸ್ ಏಷ್ಯನ್ ಚಾಂಪಿಯನ್ಸ್

ಲಂಕನ್ಸ್ ಏಷ್ಯನ್ ಚಾಂಪಿಯನ್ಸ್

ಬಾಂಗ್ಲಾದೇಶದಲ್ಲಿ ನಡೆದ ಏಷ್ಯಾಕಪ್ 2014 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನ ಸೋಲಿಸಿ ಕಪ್ ಎತ್ತಿದ ಶ್ರೀಲಂಕಾ ತಂಡ

ಕೃಷಿ ಹಬ್ಬದಲ್ಲಿ ಕಂಬಳ

ಕೃಷಿ ಹಬ್ಬದಲ್ಲಿ ಕಂಬಳ

ಏರ್ನಾಕುಲಂ: ಕಕ್ಕೂರಿನ ಕಲವಯಾಲ್ ಕೃಷಿ ಹಬ್ಬದಲ್ಲಿ ಕಂಬಳ

ಮೋದಿ ಜತೆ ಚಹಾ ಸೇವಿಸಿದ ಮಹಿಳೆಯರು

ಮೋದಿ ಜತೆ ಚಹಾ ಸೇವಿಸಿದ ಮಹಿಳೆಯರು

ನವದೆಹಲಿಯಲ್ಲಿ ಚಹಾದೊಂದಿಗೆ ಚರ್ಚಾ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಮಹಿಳೆಯರು. PTI Photo by Shahbaz Khan

ಚಿಕ್ಕಮಗಳೂರು ಚಹಾ ಪ್ಲಾಂಟೇಷನ್ ಗೆ ಬೆಂಕಿ

ಚಿಕ್ಕಮಗಳೂರು ಚಹಾ ಪ್ಲಾಂಟೇಷನ್ ಗೆ ಬೆಂಕಿ

ಚಿಕ್ಕಮಗಳೂರು: ಕರಡಿಹಿತ್ತಲು ಗ್ರಾಮದ ಮೈಸೂರು ಟೀ ಪ್ಲಾಂಟೇಷನ್ ಫ್ಯಾಕ್ಟರಿಗೆ ಬೆಂಕಿ ಬಿದ್ದ ದೃಶ್ಯ PTI Photo

ಮಹಾರಾಷ್ಟ್ರದಲ್ಲಿ ಆಲಿಕಲ್ಲು ಹೆಕ್ಕುತ್ತಿದ್ದಾರೆ

ಮಹಾರಾಷ್ಟ್ರದಲ್ಲಿ ಆಲಿಕಲ್ಲು ಹೆಕ್ಕುತ್ತಿದ್ದಾರೆ

ಶ್ರೀರಾಮ್ ಪುರ್: ಮಹಾರಾಷ್ಟ್ರದ ಶಿರಡಿಯಿಂದ 35 ಕಿ.ಮೀ ದೂರದಲ್ಲಿ ಬಿದ್ದ ಭಾರಿ ಆಲಿ ಕಲ್ಲು ಮಳೆ ನಂತರದ ಚಿತ್ರ

ಹೈದ್ರಾಬಾದಿನಲ್ಲಿ ಬಿಜೆಪಿ ಚಹಾ ಅಂಗಡಿ

ಹೈದ್ರಾಬಾದಿನಲ್ಲಿ ಬಿಜೆಪಿ ಚಹಾ ಅಂಗಡಿ

ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರು ಚಹಾ ಚರ್ಚೆಯಲ್ಲಿ ತೊಡಗಿರುವಾಗ ಹೈದರಾಬಾದಿನಲ್ಲಿ ನಮೋ ಚಹಾ ಅಂಗಡಿ ಸ್ಥಾಪಿಸಿ ಚಹಾ ವಿತರಿಸಲಾಯಿತು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+