Tirupati trains cancelled: ತಿರುಮಲಕ್ಕೆ ಹೋಗುವ ಭಕ್ತರಿಗೆ ಬ್ಯಾಡ್ ನ್ಯೂಸ್.. ಈ ಎಲ್ಲಾ ರೈಲುಗಳು ರದ್ದು
ತಿರುಮಲಕ್ಕೆ ತೆರಳುವ ಭಕ್ತಾದಿಗಳಿಗೆ ರೈಲ್ವೆ ಇಲಾಖೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ನೀವೇನಾದರೂ ಈ ತಿಂಗಳು ತಿರುಪತಿಗೆ ರೈಲು ಮೂಲಕ ಪ್ರಯಾಣ ಮಾಡಬೇಕು ಅಂದುಕೊಂಡಿದ್ದರೆ ಕೆಲ ರದ್ದಾದ ರೈಲುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ. ರೈಲ್ವೆ ಇಲಾಖೆ ರದ್ದಾದ ರೈಲುಗಳ ಪಟ್ಟಿಯನ್ನು ಹಂಚಿಕೊಂಡಿದೆ.
ತಿರುಮಲ ಎಕ್ಸ್ಪ್ರೆಸ್ ರೈಲನ್ನು ಇದೇ ತಿಂಗಳ 11ರವರೆಗೆ ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶಾಖಪಟ್ಟಣದಿಂದ ಕಡಪ ನಡುವೆ ಸಂಚರಿಸುವ ರೈಲು (17488) ಇದೇ 5ರಿಂದ 10ರವರೆಗೆ ಮತ್ತು ಕಡಪದಿಂದ ವಿಶಾಖಪಟ್ಟಣಕ್ಕೆ (17487) ಹಿಂದಿರುಗುವ ಪ್ರಯಾಣವನ್ನು ಇದೇ 6ರಿಂದ 11ರವರೆಗೆ ರದ್ದುಗೊಳಿಸಲಾಗಿದೆ.

ಮತ್ತೊಂದೆಡೆ, ವಿಜಯವಾಡ ಮತ್ತು ಚೆನ್ನೈ ನಡುವೆ ಸಂಚರಿಸುವ ಪಿನಾಕಿನಿ ಎಕ್ಸ್ಪ್ರೆಸ್ ರೈಲನ್ನು (12711/12712) ಇದೇ ತಿಂಗಳ 10 ರವರೆಗೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ವಿಜಯವಾಡ ವಿಭಾಗದಲ್ಲಿ ನಿರ್ವಹಣಾ ಕಾಮಗಾರಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಕುರಿತು ವಿಜಯವಾಡ ರೈಲ್ವೆ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಹಾಗೆಯೇ ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ವಿಜಯವಾಡ (12077) ಮತ್ತು ವಿಜಯವಾಡ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ (12078) ಜನಶತಾಬ್ದಿ ಎಕ್ಸ್ಪ್ರೆಸ್ ಅನ್ನು ಆಗಸ್ಟ್ 5 ರಿಂದ 10 ರವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಪ್ರಾಧಿಕಾರ ತಿಳಿಸಿದೆ. ಜೊತೆಗೆ ಬಿಟ್ರಗುಂಟಾ-ಚೆನ್ನೈ ಸೆಂಟ್ರಲ್ (17237) ಮತ್ತು ಚೆನ್ನೈ ಸೆಂಟ್ರಲ್-ಬಿಟ್ರಗುಂಟಾ ಎಕ್ಸ್ಪ್ರೆಸ್ (17238) ಅನ್ನು ಆಗಸ್ಟ್ 4 ರಿಂದ 11 ರವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ವಾರಂಗಲ್, ಮಹಬೂಬಾಬಾದ್, ಡೋರ್ನಕಲ್, ಖಮ್ಮಮ್ ಮತ್ತು ವಿಜಯವಾಡಕ್ಕೆ ಹೋಗುವ ಬದಲು, ಹೈದರಾಬಾದ್ನಿಂದ ತಾಂಬರಂಗೆ ಸಂಜೆ 6 ಗಂಟೆಗೆ ಎಕ್ಸ್ಪ್ರೆಸ್ ರೈಲನ್ನು (12760) ಆಗಸ್ಟ್ 2 ರಿಂದ 10 ರವರೆಗೆ ಪಗಿಡಿಪಲ್ಲಿ, ಗುಂಟೂರು ಮತ್ತು ತೆನಾಲಿ ಮೂಲಕ ತಿರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲಿಗೆ ನಲ್ಗೊಂಡ ಮತ್ತು ಗುಂಟೂರಿನಲ್ಲಿ ಹೆಚ್ಚುವರಿ ನಿಲುಗಡೆ ಇದೆ.

ಆಗಸ್ಟ್ 2 ರಿಂದ 10 ರವರೆಗೆ ತಾಂಬರಂನಿಂದ ಹೈದರಾಬಾದ್ಗೆ ಸಂಜೆ 5.30 ಕ್ಕೆ ಎಕ್ಸ್ಪ್ರೆಸ್ ರೈಲನ್ನು (12759) ತೆನಾಲಿ, ಗುಂಟೂರು ಮತ್ತು ಪಡಿಗಿಪಲ್ಲಿ ಬದಲಿಗೆ ವಿಜಯವಾಡ, ಖಮ್ಮಂ, ಡೋರ್ನಕಲ್, ಮಹಬಬಾಬಾದ್ ವಾರಂಗಲ್, ಖಾಜಿಪೇಟೆ ಮೂಲಕ ತಿರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲು ಗುಂಟೂರು ಮತ್ತು ನಲ್ಗೊಂಡದಲ್ಲಿ ಹೆಚ್ಚುವರಿ ನಿಲುಗಡೆಗಳನ್ನು ಹೊಂದಿದೆ.
ತಿರುಮಲ ಮದುವೆಯಲ್ಲಿ ಟ್ವಿಸ್ಟ್..
ತಿರುಮಲದಲ್ಲಿ ಎರಡನೇ ಮದುವೆ ವಿವಾದ ಸಂಚಲನ ಮೂಡಿಸಿದೆ. ಬೆಟ್ಟದ ಮೇಲಿರುವ ಗೋಗರ್ಭಮ್ ಅಣೆಕಟ್ಟಿನ ಬಳಿ ಇರುವ ಮಠದಲ್ಲಿ ರಾಕೇಶ್ ಎಂಬ ವ್ಯಕ್ತಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದ. ಗಂಡನ ಎರಡನೇ ಮದುವೆ ವಿಚಾರ ಕೇಳಿ ಮೊದಲ ಪತ್ನಿ ಸಂಧ್ಯಾ ತಿರುಮಲಕ್ಕೆ ಬಂದಿದ್ದರು. ಆಕೆಯನ್ನು ನೋಡಿದ ವರ ಕಲ್ಯಾಣ ಮಂಟಪದಿಂದ ಓಡಿ ಹೋಗಿದ್ದಾನೆ. ಸಂಧ್ಯಾ ಕುಟುಂಬಸ್ಥರು ಅಲ್ಲಿದ್ದ ಕೆಲವರನ್ನು ಹಿಡಿದು ತಿರುಮಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ.. ರಂಗಾರೆಡ್ಡಿ ಜಿಲ್ಲೆ ಕುತ್ಬುಳ್ಳಾಪುರ ಮಂಡಲದ ದೂಲಪಲ್ಲಿಯ ಗಂಗವೊಳ್ಳ ರಾಕೇಶ್ ಎಂಬುವರು ಎಂಟು ವರ್ಷಗಳ ಹಿಂದೆ ಧರ್ಮಸಾಗರ ಮಂಡಲದ ಹನ್ಮಕೊಂಡ ಜಿಲ್ಲೆಯ ಪೆದ್ದ ಪೆಂಡ್ಯ ಮೂಲದ ಸಂಧ್ಯಾ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ 7 ವರ್ಷದ ಮಗಳೂ ಇದ್ದಾಳೆ..

2021ರಿಂದ ಗಂಡ-ಹೆಂಡತಿ ನಡುವೆ ಜಗಳ ಶುರುವಾಗಿತ್ತು. ಈ ಜಗಳ ಪಂಚಾಯ್ತಿ ನ್ಯಾಯಾಲಯದ ಮೆಟ್ಟಿಲೇರಿತ್ತು.. ಹನ್ಮಕೊಂಡ ನ್ಯಾಯಾಲಯದಲ್ಲೂ ಪ್ರಕರಣ ನಡೆಯುತ್ತಿದೆ. ಆದರೆ ಈ ನಡುವೆ ರಾಕೇಶ್ ಎರಡನೇ ಮದುವೆಗೆ ಗುಟ್ಟಾಗಿ ತಯಾರಿ ನಡೆಸುತ್ತಿದ್ದರಿಂದ ಮೊದಲ ಪತ್ನಿ ಸಂಧ್ಯಾಗೆ ಈ ವಿಷಯ ತಿಳಿಯಿತು. ತಿರುಮಲದ ಸಿದ್ಧೇಶ್ವರ ಮಠದಲ್ಲಿ ನಡೆಯುತ್ತಿದ್ದ ಎರಡನೇ ಮದುವೆಗೆ ಹೋದಾಗ ಪತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಪತ್ನಿ ಬರುತ್ತಿದ್ದಂತೆ ಪತಿ ರಾಯ ಎಸ್ಕೇಪ್ ಆಗಿದ್ದಾನೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications