Tirupati: ತಿರುಪತಿಗೆ ಹೋಗಲು ಇದೇ ಸರಿಯಾದ ಸಮಯ.. ತುಂಬಾ ಕಡಿಮೆ ಜನ... 3 ಗಂಟೆಯಲ್ಲಿ ನೇರ ಉಚಿತ ದರ್ಶನ!
ತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಸದ್ಯ ನವರಾತ್ರಿ ಬ್ರಹ್ಮೋತ್ಸವ ನಡೆಯುತ್ತಿದೆ. ಈ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು ದೂರದೂರುಗಳಿಂದ ಬರುವ ಭಕ್ತರು ಬಹುಬೇಗ ತಿಮ್ಮಪ್ಪನ ದರ್ಶನ ಪಡೆದು ಸಂತೋಷಗೊಳ್ಳುತ್ತಿದ್ದಾರೆ.
ಹೌದು.. ಈ ಬಾರಿ ನವರಾತ್ರಿ ಬ್ರಹ್ಮೋತ್ಸವಕ್ಕೆ ಭಕ್ತರ ಸಂಖ್ಯೆ ಕಡಿಮೆಯಾಗಿದ್ದು ಬಹುಬೇಗ ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ನವರಾತ್ರಿ ಆರಂಭದಲ್ಲಿ ಶ್ರೀವಾರಿ ದರ್ಶನ ಪಡೆಯುವ ಭಕ್ತರು ಸುಮಾರು 30 ರಿಂದ 40 ಗಂಟೆಗಳವರೆಗೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕಾಗಿ ಕಾಯಬೇಕಾಗುತ್ತದೆ. ಅದರಲ್ಲೂ ಸಾಲು ಸಾಲು ರಜಾ ದಿನಗಳು ಬಂದು ಬಿಟ್ಟರೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತದೆ. ಆದರೀಗ 3 ಗಂಟೆಯಲ್ಲಿ ನೇರ ಉಚಿತ ದರ್ಶನ ಪಡೆಯಬಹುದಾಗಿದೆ.

ತಿರುಪತಿ ಬ್ರಹ್ಮೋತ್ಸವ
ಅಕ್ಟೋಬರ್ 15ರಂದು ತಿರುಪತಿ ದೇವಸ್ಥಾನದಲ್ಲಿ ನವರಾತ್ರಿ ಬ್ರಹ್ಮೋತ್ಸವ ಆರಂಭವಾಗಿದೆ. 9 ದಿನಗಳ ಕಾಲ ನಡೆಯಲಿರುವ ಈ ಬ್ರಹ್ಮೋತ್ಸವ ಇದೇ 23ರಂದು ಮುಕ್ತಾಯವಾಗಲಿದೆ. ಬ್ರಹ್ಮೋತ್ಸವದ ನಿಮಿತ್ತ ತಿರುಮಲವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ಕಡಿಮೆ ಜನಸಂದಣಿ
ಹೀಗಾಗಿ ಅನೇಕ ಭಕ್ತರು ತಿರುಪತಿಗೆ ಭೇಟಿ ನೀಡುವ ಮೂಲಕ ತಿಮ್ಮಪ್ಪನ ಆಶೀರ್ವಾದ ಪಡೆಯುತ್ತಿದ್ದಾರೆ. ಬ್ರಹ್ಮೋತ್ಸವದ ನಿಮಿತ್ತ ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಪುದುಚೇರಿಯ ಕಲಾವಿದರಿಂದ ನೃತ್ಯ ಪ್ರದರ್ಶನವೂ ನಡೆಯುತ್ತಿದೆ. ಅನೇಕ ಭಕ್ತರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಆದರೀಗ ತಿರುಮಲದಲ್ಲಿ ಶ್ರೀವಾರಿ ದರ್ಶನಕ್ಕೆ ಸದ್ಯ ಭಕ್ತರ ಸಂಖ್ಯೆ ಕಡಿಮೆಯಾಗಿದೆ.
ಸಾಮಾನ್ಯವಾಗಿ ಹೆಚ್ಚು
ನವರಾತ್ರಿಯ ಸಮಯದಲ್ಲಿ ತಿರುಮಲಕ್ಕೆ ನಿತ್ಯವೂ ಭಕ್ತರ ದಂಡೇ ಇರುತ್ತದೆ. ಈ ಬಾರಿ ದಸರಾ ರಜೆಯೂ ಸೇರಿರುವುದರಿಂದ ಭಕ್ತರ ಸಂಖ್ಯೆ ಹೆಚ್ಚಾಗಲಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಭವಿಷ್ಯ ನುಡಿದಿದೆ. ಆದರೆ ದೇವಸ್ಥಾನದ ಭವಿಷ್ಯ ಈಗ ಸುಳ್ಳಾಗಿದೆ. ತಿರುಮಲದಲ್ಲಿ ಭಕ್ತರ ಸಂಖ್ಯೆ ಸಾಮಾನ್ಯಕ್ಕಿಂತ ಕಡಿಮೆಯಾಗಿದೆ.

ಸರಿಯಾದ ಸಮಯ
ಬ್ರಹ್ಮೋತ್ಸವದಲ್ಲಿ ಭಕ್ತರ ಸಂಖ್ಯೆ ಕಡಿಮೆಯಾಗಿರುವುದು ಅಚ್ಚರಿ ಮೂಡಿಸಿದೆ. ಜನಸಂದಣಿ ಕಡಿಮೆ ಇರುವ ಕಾರಣ ಶೀಘ್ರದಲ್ಲೇ ಉಚಿತ ನೇರ ದರ್ಶನದಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಹೀಗಾಗಿ ಇದೀಗ ಏಳು ಪರ್ವತಗಳ ದರ್ಶನ ಬಯಸುವ ಭಕ್ತರು ತಮ್ಮ ಪ್ರಯಾಣದ ಯೋಜನೆ ರೂಪಿಸಿಕೊಳ್ಳಬಹುದು.
3 ಗಂಟೆಯಲ್ಲಿ ದರ್ಶನ
ಮಂಗಳವಾರ ಭಕ್ತರಿಗೆ ತಿಮ್ಮಪ್ಪನ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಕೇವಲ ಮೂರು ಗಂಟೆಯಲ್ಲಿ ಸರ್ವ ದರ್ಶನ ಮಾಡಲು ಸಾಧ್ಯವಾಯಿತು. ಬುಧವಾರ 72,123 ಭಕ್ತರು ಏಳು ಪರ್ವತ ದೇವರ ದರ್ಶನ ಪಡೆದರು. ಧನಸಹಾಯವಾಗಿ 3.01 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. 26,054 ಭಕ್ತರು ಕ್ಷೌರ ಮಾಡಿ ಮುಡಿಯನ್ನು ಅರ್ಪಿಸಿದ್ದಾರೆ.
ಗರುಡ ಸೇವೆ
ಬ್ರಹ್ಮೋತ್ಸವದ ದಿನಗಳಲ್ಲಿ ವಿಶೇಷ ದರ್ಶನ ರದ್ದಾಗಿರುವುದರಿಂದ ಭಕ್ತರು ದರ್ಶನಕ್ಕೆ ದೌಡಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂದು ನಡೆಯುವ ಗರುಡ ಸೇವೆಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ತಿರುಮಲಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಹೆಚ್ಚುವರಿ ರಕ್ಷಣೆ
ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಹಾಗೂ ದೇವಸ್ತಾನದಿಂದ ವಿಜಿಲೆನ್ಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಲ್ಲದೆ ಗರುಡ ಸೇವೆಯ ನಿಮಿತ್ತ ಇಂದು ಸಂಜೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ತಿರುಮಲದಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ತಮಿಳುನಾಡಿನ ಭಕ್ತರು ಗರುಡ ಸೇವೆಯನ್ನು ಆನಂದಿಸಲು ಅನುಕೂಲವಾಗುವಂತೆ ಚೆನ್ನೈ, ವೆಲ್ಲೂರು, ತಿರುಚ್ಚಿ, ಕೊಯಮತ್ತೂರು ಮತ್ತು ಮಧುರೈ ಜಿಲ್ಲೆಗಳಿಂದ ಹೆಚ್ಚುವರಿ ಬಸ್ಗಳನ್ನು ಓಡಿಸಲಾಗುತ್ತಿದೆ.












Click it and Unblock the Notifications