Get Updates
Get notified of breaking news, exclusive insights, and must-see stories!

Tirumala Laddu Row: ತಿರುಪತಿ ತುಪ್ಪದ ವಿವಾದ: ಭಕ್ತರ ಸಂಖ್ಯೆ ಇಳಿಕೆ- ತಿರುಮಲ ಶ್ರೀವಾರಿಯ ದರ್ಶನ ಸುಗಮ

ದೇಶದ ಶ್ರೀಮಂತ ದೇವರುಗಳಲ್ಲಿ ಒಬ್ಬನಾದ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಇತ್ತೀಚೆಗೆ ತುಂಬಾ ಕಡಿಮೆಯಾಗಿದೆ. ಏಳು ಬೆಟ್ಟಗಳ ಒಡೆಯನ ದರ್ಶನಕ್ಕೆ ನಿತ್ಯ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದ ಭಕ್ತರು ಸದ್ಯಕ್ಕೆ ವಿರಾಮ ತೆಗೆದುಕೊಂಡಂತೆ ಕಾಣಿಸುತ್ತಿದೆ. ಹೀಗಾಗಿ ತಿರುಪತಿಯಲ್ಲಿ ದೇವರ ದರ್ಶನ ತುಂಬಾ ಸುಲಭವಾಗಿದ್ದು ನೇರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ.

ಹೌದು... ಆಂಧ್ರಪ್ರದೇಶದ ತಿರುಪತಿಗೆ ಬರುವ ಭಕ್ತರ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗಿದೆ. ಇದಕ್ಕೆ ಕಾರಣ ತುಪ್ಪದ ವಿವಾದ ಎನ್ನಲಾಗುತ್ತಿದೆ. ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಡಳಿತ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಿಕೊಬ್ಬು ಬಳಕೆ ಮಾಡಲಾಗಿದೆ ಎಂದು ಸಿಎಂ ಚಂದ್ರಬಾಬು ನಾಯ್ಡು ಆರೋಪ ಮಾಡಿದ್ದರು. ಇದು ಪರೀಕ್ಷಾ ವರದಿಯಿಂದಲೂ ದೃಢಪಟ್ಟಿದೆ.

tirupati laddu row decrease in number of devotees in tirumala - direct opportunity for darshan

ಹೀಗಾಗಿ ದೇವಸ್ಥಾನದಲ್ಲಿ ತಯಾರಾಗುವ ಪ್ರಸಿದ್ಧ ಪ್ರಸಾದದ ಗುಣಮಟ್ಟದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೆ ಈ ಘಟನೆ ಲಕ್ಷಾಂತರ ಭಕ್ತರ ಧಾರ್ಮಿಕ ಭಾವನೆಗಳಿಗೆ ಘಾಸಿಯನ್ನುಂಟು ಮಾಡಿದೆ. ಈ ಆರೋಪ ಕೇಳಿ ಬಂದ ನಂತರ ತಿರುಪತಿ ದೇವಸ್ಥಾನವನ್ನು ಪ್ರಧಾನ ಅರ್ಚಕರ ನೇತೃತ್ವದಲ್ಲಿ ಹೋಮ ಹವನ ಮಾಡುವ ಮೂಲಕ ದೇವಸ್ಥಾನದ ಶುದ್ಧೀಕರಣ ಮಾಡಲಾಯಿತು. ಈ ಹೋಮ ಕಾರ್ಯಕ್ರಮದಲ್ಲಿ ಇಒ ಶ್ಯಾಮಲಾ ರಾವ್, ಹೆಚ್ಚುವರಿ ಇಒ ವೆಂಕಯ್ಯ ಚೌಧರಿ ಭಾಗವಹಿಸಿದ್ದರು. ಬೆಳಿಗ್ಗೆ 6 ಗಂಟೆಗೆ ಆರಂಭವಾದ ಹೋಮವು 10 ಗಂಟೆಯವರೆಗೆ ನಡೆಯಿತು.

ತಿರುಮಲ ದೇವಸ್ಥಾನದಲ್ಲಿ ಪ್ರತಿ ವರ್ಷ ನಾನಾ ಉತ್ಸವಗಳು ನಡೆಯುತ್ತವೆ. ಅಂದರೆ ತಿರುಮಲದಲ್ಲಿ ವರ್ಷವಿಡೀ ದೇವಾಲಯದಲ್ಲಿ ನಡೆಯುವ ಅರ್ಚನೆಗಳು ಮತ್ತು ಉತ್ಸವಗಳಲ್ಲಿ ಯಾತ್ರಿಕರು ಹಾಗೂ ಸಿಬ್ಬಂದಿಗಳಿಂದ ಕೆಲವು ತಪ್ಪುಗಳನ್ನು ಮಾಡಲಾಗುತ್ತದೆ. ಈ ದೋಷಗಳಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ಇದಕ್ಕೆ ಆಗಮ ಶಾಸ್ತ್ರದ ಪ್ರಕಾರ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳು ನಡೆಯುತ್ತವೆ.

ಆದರೆ ಶ್ರೀವಾರಿ ನೈವೇದ್ಯದಲ್ಲಿ ಕಲಬೆರಕೆ ತುಪ್ಪ ಕಂಡುಬಂದಿದ್ದರಿಂದ ಪರಿಹಾರವಾಗಿ ಶಾಂತಿ ಹೋಮ ಆಯೋಜಿಸಲು ಆಗಮ ಸಲಹಾ ಮಂಡಳಿ ನಿರ್ಧರಿಸಿತ್ತು. ಅದಕ್ಕಾಗಿಯೇ ಟಿಟಿಡಿ ಕಳೆದ ದಿನ ಶಾಂತಿ ಹೋಮವನ್ನು ಆಯೋಜಿಸಿತ್ತು. ಪಂಡಿತರು ತಿರುಮಲ ದೇವಸ್ಥಾನ, ಅನ್ನಪ್ರಸಾದ ಹಾಗೂ ಲಡ್ಡು ತಯಾರಿಕೆ ಸ್ಥಳದಲ್ಲಿ ಪಂಚಗವ್ಯ ಪ್ರೋಕ್ಷಣೆ ಮಾಡಿದರು.

tirupati laddu row decrease in number of devotees in tirumala - direct opportunity for darshan

ತಿರುಮಲಕ್ಕೆ ತೆರಳುವ ಭಕ್ತರಿಗೆ ನೆಮ್ಮದಿ..

ಈ ಸಮಯದಲ್ಲಿ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹೀಗಾಗಿ ದೇವರ ದರ್ಶನ ಬಹುಬೇಗ ಪೂರ್ಣಗೊಳ್ಳುತ್ತಿದ್ದು, ನೂಕುನುಗ್ಗಲು ಕೂಡ ಕಡಿಮೆಯಾಗಿದೆ. ಇಂದು ಬೆಳಗ್ಗೆಯಿಂದಲೇ ಭಕ್ತರಿಗೆ ನೇರವಾಗಿ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಕಳೆದ ಎರಡ್ಮೂರು ದಿನಗಳಿಗೆ ಹೋಲಿಸಿದರೆ ಭಕ್ತರು ದೇವರ ದರ್ಶನವನ್ನು ಬೇಗ ಮುಗಿಸಿದ್ದಾರೆ. ಟಿಕೆಟ್ ಇಲ್ಲದ ಭಕ್ತರ ದರ್ಶನಕ್ಕೆ 4ರಿಂದ 6 ಗಂಟೆ ಬೇಕು. ಅಲ್ಲದೆ 300 ರೂ.ಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಹೊಂದಿರುವ ಭಕ್ತರಿಗೆ 3 ಗಂಟೆಗಳಲ್ಲಿ ದರ್ಶನ ಪೂರ್ಣಗೊಳ್ಳುತ್ತದೆ.

ಆದರೆ ಸೋಮವಾರದಿಂದ ವೈಕುಂಠಂ ಸರದಿ ಸಂಕೀರ್ಣ ಖಾಲಿಯಾಗಿ ಕಾಣುತ್ತಿದೆ. ಭಾನುವಾರ 82,436 ಭಕ್ತರು ತಿರುಮಲ ದರ್ಶನಕ್ಕೆ ಭೇಟಿ ನೀಡಿದ್ದಾರೆ. 25,437 ಭಕ್ತರು ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಈ ಒಂದು ದಿನ ತಿರುಮಲ ಶ್ರೀವಾರಿ ಹುಂಡಿಯ ಆದಾಯ 4.57 ಕೋಟಿ ರೂಪಾಯಿ ಎಂದು ಟಿಟಿಡಿ ತಿಳಿಸಿದೆ. ಇನ್ನೊಂದೆಡೆ ತಿರುಮಲ ಶ್ರೀವಾರಿ ಬ್ರಹ್ಮೋತ್ಸವಕ್ಕೆ ಟಿಟಿಡಿ ಅದ್ಧೂರಿ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+