Tirupati: ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ದಾಖಲೆ ಬರೆದ ಭಕ್ತ
ತಿರುಪತಿ ಶ್ರೀವಾರಿಯ ಮೇಲೆ ಅಪಾರ ಭಕ್ತಿ ಹೊಂದಿದ್ದ ಭಕ್ತರೊಬ್ಬರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ. ಅಷ್ಟಕ್ಕೂ ಆ ಭಕ್ತ ಮಾಡಿದ ಸಾಧನೆ ಏನು ಅಂತ ತಿಳಿದರೆ ನೀವು ಕೂಡ ಅಚ್ಚರಿಪಡುವಿರಿ. ಹಾಗಾದರೆ ತಿಮ್ಮಪ್ಪನ ಭಕ್ತನ ಸಾಧನೆ ಏನೆಂದು ತಿಳಿಯೋಣ.
ಮಹಂತಿ ಶ್ರೀನಿವಾಸ ರಾವ್ ಶ್ರೀಕಾಕುಳಂ ಮೂಲದವರು. ಇವರು ತಿರುಪತಿ ತಿಮ್ಮಪ್ಪನ ಪರಮ ಭಕ್ತರು. ಇವರು ಆಯುರ್ವೇದ ಔಷಧಿ ಅಂಗಡಿ ನಡೆಸುತ್ತಿದ್ದಾರೆ. ಇವರಿಗೆ ಏಳು ಪರ್ವತಗಳ ಒಡೆಯನ ದರ್ಶನ ಪಡೆಯುವುದು ಅಂದರೆ ತುಂಬಾ ಇಷ್ಟ. ಹೀಗಾಗಿ ಈವರೆಗೆ 449 ಬಾರಿ ತಿರುಪತಿಗೆ ಪಾದಯಾತ್ರೆ ಮೂಲಕ ಸಾಗಿ ತಿರುಪತಿ ತಿರುಮಲನ ದರ್ಶನ ಪಡೆದು ದಾಖಲೆ ಬರೆದಿದ್ದಾರೆ.

ಪ್ರತಿ ಬಾರಿಯೂ ಮೆಟ್ಟಿಲು ಹತ್ತಿ ದರ್ಶನ ಪಡೆಯುತ್ತಿದ್ದರಿಂದ ಅವರಿಗೆ ಈ ಮನ್ನಣೆ ಸಿಕ್ಕಿದೆ. ಇದಲ್ಲದೆ ಅವರು ಪ್ರತಿದಿನ 2 ಗಂಟೆಗಳ ಕಾಲ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕೆಲಸ ಕೂಡ ಮಾಡುತ್ತಾರೆ. ಶ್ರೀನಿವಾಸ ರಾವ್ ಅವರು 1997 ರಲ್ಲಿ ತಿರುಪತಿಗೆ ತಮ್ಮ ಮೊದಲ ಕಾಲ್ನಡಿಗೆಯನ್ನು ಪ್ರಾರಂಭಿಸಿದರು.
ಅಂದಿನಿಂದ ಅವರು 26 ಜುಲೈ 2018 ರವರೆಗೆ 175 ಬಾರಿ ಶ್ರೀವಾರಿ ದರ್ಶನವನ್ನು ಪಡೆದಿದ್ದಾರೆ. 1997 ರಿಂದ 2004 ರವರೆಗೆ ಒಮ್ಮೆ ಮಾತ್ರ ಭೇಟಿ ನೀಡಿದ್ದರು. 2004 ರಿಂದ 2009 ರವರೆಗೆ ಅವರು 28 ಬಾರಿ ಏಳು ಬೆಟ್ಟಗಳ ಒಡೆಯನ ದರ್ಶನ ಪಡೆದಿದ್ದಾರೆ.
ಅಲ್ಲದೆ 2010-2014ರಲ್ಲಿ 21 ಬಾರಿ, 2015ರಲ್ಲಿ 20 ಬಾರಿ ಹಾಗೂ 2016ರಲ್ಲಿ 15 ಬಾರಿ ಶ್ರೀವಾರಿ ದರ್ಶನ ಪಡೆದಿದ್ದಾರೆ. ಅದರಂತೆ 2017ರಲ್ಲಿ ತಮ್ಮ 50ನೇ ವಯಸ್ಸಿನಲ್ಲಿ 50 ಬಾರಿ ಸ್ವಾಮಿಯ ದರ್ಶನ ಪಡೆದ ಶ್ರೀನಿವಾಸ ರಾವ್ ಅಂದಿನಿಂದ ಈ ವರ್ಷ ಜೂನ್ 26ರವರೆಗೆ 40 ಬಾರಿ ಒಟ್ಟು 449 ಬಾರಿ ಕಾಲ್ನಡಿಯ ಮೂಲಕ ತಿರುಪತಿ ತಿರುಮಲ ದರ್ಶನ ಪಡೆದಿದ್ದಾರೆ.

ಮಾತ್ರವಲ್ಲದೆ ಒಂದೇ ದಿನದಲ್ಲಿ ಒಮ್ಮೆ 3 ಬಾರಿ ಬೆಟ್ಟ ಹತ್ತಿ ಸ್ವಾಮಿಯ ದರ್ಶನ ಮಾಡಿದ್ದಾರೆ. ಈ ತೀವ್ರ ಭಕ್ತಿಗೆ ಮೆಚ್ಚಿ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಿದೆ. 27ನೇ ವಯಸ್ಸಿನಿಂದಲೂ ತಿರುಪತಿ ಬೆಟ್ಟ ಹತ್ತುತ್ತಾ ಶ್ರೀನಿವಾಸ ರಾವ್ ತಿಮ್ಮಪ್ಪನ ದರ್ಶನ ಪಡೆಯುತ್ತಿದ್ದಾರೆ. ಅವರು ವೈಕುಂಠ ಏಕಾದಶಿ ಮತ್ತು ದ್ವಾದಶಿಯಂದು ತಪ್ಪದೆ ತಿರುಪತಿಗೆ ತೆರಳುತ್ತಾರೆ.
ಈ ಬಗ್ಗೆ ಮಾತನಾಡಿದ ಶ್ರೀನಿವಾಸ ರಾವ್ ಅವರು, 'ನಾನು ಈ ಸಾಧನೆ ಮಾಡಲು ಪತ್ನಿ ಮಾಕಂತಿ ಸರಸ್ವತಿ ಹಾಗೂ ಮಗ ಮಾಕಂತಿ ಆಂಜನೇಯ ರಾಕೇಶ್ ಕಾರಣ' ಎಂದು ಹೇಳಿದ್ದಾರೆ. ನನ್ನ ದೇಹ ಸಹಕರಿಸುವವರೆಗೆ ಏಳು ಬೆಟ್ಟದ ಒಡೆಯನ ದರ್ಶನ ನಡೆದೇ ಮಾಡುತ್ತೇನೆ. ಜೊತೆಗೆ ಶ್ರೀವಾರಿಗೆ ಪೂಜೆ ಸಲ್ಲಿಸುತ್ತೇನೆ ಎಂದಿದ್ದಾರೆ.
ತಿರುಮಲ ತಿರುಪತಿಗೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅದೇ ರೀತಿ ಹಬ್ಬ ಹರಿದಿನಗಳು ಮತ್ತು ಬ್ರಹ್ಮೋತ್ಸವದ ದಿನಗಳಲ್ಲಿ ಈ ಸಂಖ್ಯೆ ಒಂದು ಲಕ್ಷವನ್ನು ಮೀರುತ್ತದೆ. ಸರ್ವ ದರ್ಶನ, ದಿವ್ಯ ದರ್ಶನ, 300 ರೂಪಾಯಿ ವಿಶೇಷ ದರದ ದರ್ಶನ ಇತ್ಯಾದಿಗಳ ಮೂಲಕ ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ತಮಗೆ ಬೇಕಾದವರು ವಸತಿಯನ್ನು ಕಾಯ್ದಿರಿಸಿ ಸ್ವಾಮಿಯ ದರ್ಶನ ಪಡೆಯುತ್ತಾರೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications