Tirupati: ಹೈದರಾಬಾದ್ ದಮ್ ಬಿರಿಯಾನಿ ತಿಂದ.. ದುಬಾರಿ ಕಾರು ಗೆದ್ದ..!
ಬಟ್ಟೆ, ಆಭರಣ ಮಳಿಗೆಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು ಗ್ರಾಹಕರನ್ನು ಆಕರ್ಷಿಸಲು ಮತ್ತು ವ್ಯಾಪಾರವನ್ನು ಹೆಚ್ಚಿಸಲು ವಿವಿಧ ಯೋಜನೆಗಳು ಮತ್ತು ಲಕ್ಕಿ ಡ್ರಾಗಳನ್ನು ನಡೆಸುತ್ತವೆ. ಅಂತಹ ಸಂದರ್ಭಗಳಲ್ಲಿ ಕೆಲವರಿಗೆ ಮಾತ್ರ ಅದೃಷ್ಟದ ದೇವತೆ ಆಶೀರ್ವದಿಸುತ್ತಾಳೆ. ಅಂಥವರು ಕಾರುಗಳು ಮತ್ತು ದುಬಾರಿ ವಸ್ತುಗಳನ್ನು ಗೆಲ್ಲುತ್ತಾರೆ.
ಹೀಗೆ ಹೊಟೇಲ್ನಲ್ಲಿ ಬಿರಿಯಾನಿ ತಿಂದ ಅದೃಷ್ಟಶಾಲಿಯೊಬ್ಬ ಲಕ್ಷ ಬೆಲೆ ಬಾಳುವ ಕಾರು ಗೆದ್ದಿದ್ದಾನೆ. ತಿರುಪತಿ ನಗರದ ರೋಬೋ ಹೋಟೆಲ್ ನಲ್ಲಿ ನಡೆದ ಬಿರಿಯಾನಿ ಲಕ್ಕಿ ಡ್ರಾದಲ್ಲಿ ರಾಹುಲ್ ಎಂಬ ವ್ಯಕ್ತಿ ನಿಸ್ಸಾನ್ ಮ್ಯಾಗ್ನೇಟ್ ಕಾರು ಗೆದ್ದಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ರೋಬೋ ಹೋಟೆಲ್ ವಿನೂತನ ಯೋಜನೆಯನ್ನು ಪರಿಚಯಿಸಿತ್ತು.

ಇಲ್ಲಿ ಹೈದರಾಬಾದ್ ದಮ್ ಬಿರಿಯಾನಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪ್ರತಿ ಬಿರಿಯಾನಿ 275 ರೂ.ಗೆ ಮಾರಾಟವಾಗಿತ್ತು. ತಮ್ಮ ಹೋಟೆಲ್ ನಲ್ಲಿ ಬಿರಿಯಾನಿ ತಿಂದರೆ ಕಾರು ಗೆಲ್ಲಬಹುದು ಎಂದು ಘೋಷಿಸಿತ್ತು. ಇದರಿಂದಾಗಿ ಜನರು ಹೋಟೆಲ್ನಲ್ಲಿ ಸರತಿ ಸಾಲಿನಲ್ಲಿ ನಿಂತು ಬಿರಿಯಾನಿ ತಿಂದಿದ್ದರು. ಬಿರಿಯಾನಿ ತಿಂದ ಎಲ್ಲರಿಗೂ ಕೂಪನ್ ನೀಡಲಾಗಿತ್ತು. 23,000ಕ್ಕೂ ಹೆಚ್ಚು ಕೂಪನ್ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಗಿತ್ತು. ಹೊಸ ವರ್ಷ ಆಚರಣೆ ವೇಲೆ ಭಾನುವಾರ ರಾತ್ರಿ ಡ್ರಾ ನಡೆಸಲಾಯಿತು.
ಹೋಟೆಲ್ ಮುಖ್ಯಸ್ಥ ಭರತ್ ಕುಮಾರ್ ರೆಡ್ಡಿ ಮತ್ತು ನೀಲಿಮಾ ದಂಪತಿ ಹೋಟೆಲ್ ಆವರಣದಲ್ಲಿ ಆಯೋಜಿಸಿದ್ದ ಲಕ್ಕಿ ಡಿಪ್ ನಲ್ಲಿ ತಿರುಪತಿಯ ಯುವಕ ರಾಹುಲ್ ವಿಜೇತರಾದರು. ಅವರು ನಿಸ್ಸಾನ್ ಮ್ಯಾಗ್ನೆಟ್ ಕಾರನ್ನು ಬಹುಮಾನವಾಗಿ ಗೆದ್ದಿದ್ದಾರೆ.
ಸ್ವತಃ ಹೋಟೆಲ್ ಮುಖ್ಯಸ್ಥ ಭರತ್ ಕುಮಾರ್ ರೆಡ್ಡಿ ವಿಜೇತ ರಾಹುಲ್ ಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಭರತ್ ಕುಮಾರ್ ರೆಡ್ಡಿ, ನಗರವಾಸಿಗಳನ್ನು ತಲುಪುವ ಉದ್ದೇಶದಿಂದ ಈ ವಿನೂತನ ಯೋಜನೆ ಜಾರಿಗೆ ತರಲಾಗಿದೆ. ರೋಬೋ ಹೋಟೆಲ್ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಖಾದ್ಯಗಳನ್ನು ನೀಡುತ್ತಿದ್ದು, ಮುಂದೆಯೂ ಇಂತಹ ವಿನೂತನ ಯೋಜನೆಗಳನ್ನು ಮಾಡಲಿದೆ ಎಂದು ಭರತ್ ಕುಮಾರ್ ರೆಡ್ಡಿ ಹೇಳಿದರು. ಹೋಟೆಲ್ ಆರಂಭವಾಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications