Get Updates
Get notified of breaking news, exclusive insights, and must-see stories!

Tirupati: ಒಂದು ದಿನದ ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೊತ್ತ ಹೆಚ್ಚಿಸಿದ ತಿರುಮಲ ತಿರುಪತಿ ದೇವಸ್ಥಾನ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಒಂದು ದಿನದ ಅನ್ನಪ್ರಸಾದ ಯೋಜನೆಗೆ ದೇಣಿಗೆ ಮೊತ್ತವನ್ನು ಹೆಚ್ಚಿಸಲಾಗಿದೆ. ಆಹಾರ ಪದಾರ್ಥಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅನ್ನಪ್ರಸಾದ ಯೋಜನೆಗೆ ಪ್ರಸ್ತುತ ಒಂದು ದಿನಕ್ಕೆ 33 ಲಕ್ಷದಿಂದ 38 ಲಕ್ಷ ರೂಪಾಯಿ ಮೊತ್ತವನ್ನು ಹೆಚ್ಚಿಸಿದೆ.

ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಪ್ರತಿನಿತ್ಯ ದರ್ಶನಕ್ಕೆ ಬರುವ ಸಾವಿರಾರು ಭಕ್ತರಿಗೆ ಟಿಟಿಡಿಯ ಅನ್ನ ಪ್ರಸಾದ ವಿಭಾಗ ಉಚಿತ ಆಹಾರವನ್ನು ಒದಗಿಸುತ್ತದೆ. ಟಿಟಿಡಿಯಲ್ಲಿರುವ ವೆಂಕಟೇಶ್ವರ ಅನ್ನ ಪ್ರಸಾದ ಟ್ರಸ್ಟ್ ಈ ಉದ್ದೇಶಕ್ಕಾಗಿ ನಗದು ಮತ್ತು ವಸ್ತು ಎರಡರಲ್ಲೂ ಗಣನೀಯ ದೇಣಿಗೆಗಳನ್ನು ಸ್ವೀಕರಿಸುತ್ತದೆ.

tirumala-tirupati-devasthanams-hikes-donation

ಪರಿಷ್ಕೃತ ದರಗಳ ಪ್ರಕಾರ, ಒಂದು ದಿನದ ಟಿಟಿಡಿಯ ಬೆಳಗಿನ ಉಪಹಾರ ಸೇವೆಗೆ ದಾನ ಮಾಡುವ ದಾನಿಗಳಿಗೆ 6 ಲಕ್ಷದ ಬದಲು 8 ಲಕ್ಷ ಹೆಚ್ಚಿಸಲಾಗಿದೆ. ಮಧ್ಯಾಹ್ನ ಮತ್ತು ರಾತ್ರಿಯ ಎರಡೂ ಸೇವೆಗಳಿಗೆ 10 ಲಕ್ಷದ ಬದಲು ತಲಾ 15 ಲಕ್ಷ ಹೆಚ್ಚಾಗಿದೆ. ಯೋಜನೆಗಳಿಗೆ ದೇಣಿಗೆ ನೀಡುವ ಜನರ ಹೆಸರನ್ನು ಈಗ ತಿರುಮಲದಲ್ಲಿರುವ ಅನ್ನಪ್ರಸಾದ ಸಂಕೀರ್ಣದಲ್ಲಿ ಪ್ರದರ್ಶಿಸಲಾಗುತ್ತದೆ. ಅಂದು ದೇವಸ್ಥಾನಕ್ಕೆ ಭೇಟಿ ನೀಡುವ ಪ್ರತಿ ಯಾತ್ರಾರ್ಥಿಗಳಿಗೆ ದಾನಿಗಳು ಆಹಾರ ಪದಾರ್ಥಗಳನ್ನು ಪೂರೈಸುತ್ತಾರೆ.

ದೇಣಿಗೆಗಳನ್ನು ಯಾವುದೇ ಬ್ಯಾಂಕ್‌ನಲ್ಲಿ ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ನೀಡಬಹುದು. ಜೊತೆಗೆ ತಿರುಮಲದಲ್ಲಿರುವ ಮಾತೃಶ್ರೀ ತಾರಿಗೊಂಡ ವೆಂಗಮಾಂಬ ಅನ್ನ ಪ್ರಸಾದ ಭವನದಲ್ಲಿ ವೈಯಕ್ತಿಕವಾಗಿಯೂ ದೇಣಿಗೆ ನೀಡಬಹುದು.

ಟಿಟಿಡಿ ಮೂಲಗಳ ಪ್ರಕಾರ, 1985 ರಲ್ಲಿ ಟ್ರಸ್ಟ್‌ ದೇಣಿಗೆ ಸಂಗ್ರಹ ಪ್ರಾರಂಭವಾದಾಗಿನಿಂದ ಅತೀ ಹೆಚ್ಚು ಅಂದರೆ 1,500 ಕೋಟಿ ದೇಣಿಗೆ ಸಂಗ್ರಹಿಸಿದೆ. ಈಗ ಅನ್ನಪ್ರಸಾದ ಯೋಜನೆಯು ಟಿಟಿಡಿ ಇದುವರೆಗೆ ನಡೆಸುತ್ತಿರುವ ದೊಡ್ಡ ಯೋಜನೆಗಳಲ್ಲಿ ಒಂದಾಗಿದೆ.

ಬೆಳಿಗ್ಗೆ 9:00 ರಿಂದ 10.30 ರ ನಡುವೆ ಬೆಳಗಿನ ದಿನದ ಅನ್ನ ಪ್ರಸಾದದಲ್ಲಿ ಉಪ್ಮಾ, ಪೊಂಗಲ್ ಮತ್ತು ವೆರ್ಮಿಸೆಲ್ಲಿ ಉಪ್ಮಾ ಸೇರಿದಂತೆ ಉಪಹಾರ ಪ್ರಾರಂಭವಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಪೊಂಗಲ್, ಕರಿ, ಚಟ್ನಿ, ಅನ್ನ, ಸಾಂಬಾರ್, ರಸಂ ಮತ್ತು ಮಜ್ಜಿಗೆ ಇತರ ಆಹಾರವನ್ನು ಬೆಳಿಗ್ಗೆ 10:30 ರಿಂದ ಸಂಜೆ 4:00 ರವರೆಗೆ ನೀಡಲಾಗುತ್ತದೆ. ಮೇಲಿನ ಆಹಾರ ಪದಾರ್ಥಗಳೊಂದಿಗೆ ರಾತ್ರಿಯ ಊಟವನ್ನು ಪ್ರತಿದಿನ ಸಂಜೆ 5:00 ರಿಂದ ರಾತ್ರಿ 10.30 ರವರೆಗೆ ನೀಡಲಾಗುತ್ತದೆ.

ಈಗ ಅನ್ನ ಪ್ರಸಾದ ಸಂಕೀರ್ಣವನ್ನು ಹೊರತುಪಡಿಸಿ ಆಹಾರ ಪದಾರ್ಥಗಳನ್ನು ವೈಕುಂಟಂ ಕ್ಯೂ ಕಾಂಪ್ಲೆಕ್ಸ್ - I & II, 'ಕ್ಯೂ' ಲೈನ್‌ಗಳ ಹೊರಗೆ (ಭಾರೀ ರಷ್ ಇದ್ದಾಗಲೆಲ್ಲಾ), PAC - II, ಗಾಳಿಗೋಪರಂ (ಫುಟ್‌ಪಾತ್) ಮತ್ತು ವಿವಿಧ ಆಹಾರ ಕೌಂಟರ್‌ಗಳಲ್ಲಿ ನೀಡಲಾಗುತ್ತದೆ. ತಿರುಮಲದಲ್ಲಿ ಶ್ರೀನಿವಾಸಂ ಕಾಂಪ್ಲೆಕ್ಸ್, ವಿಷ್ಣು ನಿವಾಸಂ ಕಾಂಪ್ಲೆಕ್ಸ್, ಸರ್ಕಾರಿ ಮತ್ತು ಟಿಟಿಡಿ ಆಸ್ಪತ್ರೆಗಳು, ತಿರುಚನೂರಿನಲ್ಲಿರುವ II N.C, III N.C ಮತ್ತು SV ಅನ್ನಪ್ರಸಾದ ನೀಡಲಾಗುತ್ತದೆ.

ಅಂದಾಜಿನ ಪ್ರಕಾರ, ಟಿಟಿಡಿ ವಾರದ ದಿನಗಳಲ್ಲಿ ಒಟ್ಟು 1,59,500 ಭಕ್ತರಿಗೆ ಮತ್ತು ವಾರಾಂತ್ಯದಲ್ಲಿ 2,05,000 ಯಾತ್ರಿಕರಿಗೆ ಉಚಿತ ಆಹಾರವನ್ನು ಒದಗಿಸುತ್ತದೆ. ಆಹಾರ ಪದಾರ್ಥಗಳನ್ನು ತಯಾರಿಸಲು ಪ್ರತಿದಿನ 14 ರಿಂದ 16.5 ಟನ್ ಅಕ್ಕಿ ಮತ್ತು 6.5 ರಿಂದ 7.5 ಟನ್ ತರಕಾರಿಗಳನ್ನು ಬಳಸಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+