Tirumala Tirupati: ತಿರುಪತಿಯಲ್ಲಿ ಹಿಂದೆಂದೂ ನಡೆಯದ ಘಟನೆ: ಕಳಪೆ ಗುಣಮಟ್ಟದ ಪ್ರಸಾದ ನೀಡುತ್ತಿರುವ ಆರೋಪ!

ತಿರುಪತಿ ಡಿಸೆಂಬರ್ 7: ನಿತ್ಯ ಲಕ್ಷಾಂತರ ಭಕ್ತರಿಗೆ ಅನ್ನ ನೀಡುವ ತಿರುಪತಿಯಲ್ಲಿ ಹಿಂದೆಂದೂ ಕೇಳದ ಆರೋಪ ಕೇಳಿ ಬಂದಿದೆ. ದೇವಸ್ಥಾನದಲ್ಲಿ ನೀಡಲಾಗುತ್ತಿರುವ ಅನ್ನ ಪ್ರಸಾದ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ದೂರನ್ನು ಭಕ್ತರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವೇದಸ್ಥಾನ ಆಡಳಿತ ಮಂಡಳಿ ವಿವರಣೆ ನೀಡಿದೆ.

ತಿರುಪತಿ ದೇವಸ್ಥಾನಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಇದರಿಂದ ತಿರುಪತಿ ತಿರುಮಲ ಮಲಯಪ್ಪ ಸಾಮಿ ದೇವಸ್ಥಾನದಲ್ಲಿ ಪ್ರತಿದಿನ ಭಕ್ತರ ದಂಡೇ ಇರುತ್ತದೆ. ತಿರುಪತಿ ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ದೇವಸ್ಥಾನದ ಪರವಾಗಿ ಮೂರು ಬಾರಿ ಅನ್ನ ದಾನವನ್ನು ನೀಡಲಾಗುತ್ತದೆ.

Tirumala Tirupati: Allegation of poor quality prasadam has been heard in tirupati

ಅದೇ ರೀತಿ ಭಕ್ತರಿಗೆ ಹಾಲು, ಮಜ್ಜಿಗೆ ಸಹ ವ್ಯವಸ್ಥೆ ಮಾಡಲಾಗಿರುತ್ತದೆ. ಅದೂ ಅಲ್ಲದೆ ಭಕ್ತರ ಸಂಖ್ಯೆ ಹೆಚ್ಚಾದಾಗ ಜನಸಂದಣಿಗೆ ತಕ್ಕಂತೆ ಅನ್ನ ಪ್ರಸಾದ ಪ್ರಮಾಣವೂ ಹೆಚ್ಚುತ್ತದೆ. ಹಬ್ಬದ ದಿನಗಳಲ್ಲಿ ಭಕ್ತರು ಇರುವ ಸ್ಥಳದಲ್ಲಿಯೇ ವಿಶೇಷ ಶಿಬಿರಗಳನ್ನು ಏರ್ಪಡಿಸಿ ಪ್ರಸಾದ ವಿತರಿಸಲಾಗುತ್ತದೆ.

ನಿತ್ಯ ಪ್ರಸಾದಕ್ಕಾಗಿ ಖರ್ಚಾಗುವ ಹಣ

ತಿರುಪತಿ ದೇವಸ್ಥಾನ ವೆಂಕಟೇಶ್ವರ ಅನ್ನಪ್ಪ್ರಸಾದ ದೇಣಿಗೆ ಯೋಜನೆಯನ್ನು ಜಾರಿಗೊಳಿಸುತ್ತದೆ. ಇದಕ್ಕಾಗಿ ಅನೇಕ ಭಕ್ತರು ದೇಣಿಗೆ ನೀಡುತ್ತಿದ್ದಾರೆ. ಈ ಯೋಜನೆಯ ಮೂಲಕ ತಿರುಮಲದಲ್ಲಿ ಪ್ರತಿದಿನ ಸುಮಾರು 70 ಸಾವಿರದಿಂದ ಒಂದು ಲಕ್ಷ ಭಕ್ತರಿಗೆ ಉಚಿತ ಅನ್ನಸಂತರ್ಪಣೆ ನಡೆಯುತ್ತಿದೆ. ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ಬಸ್ ನಿಲ್ದಾಣ, ಮಾದವಂ, ಶ್ರೀನಿವಾಸಂ, ವಿಷ್ಣು ನಿವಾಸ ಭಕ್ತರ ವಸತಿ ನಿಲಯಗಳು, ತಿರುಚಾನೂರು ಪದ್ಮಾವತಿ ತಾಯಿ ದೇವಸ್ಥಾನ ಸೇರಿದಂತೆ ವಿವಿಧೆಡೆ ಉಚಿತ ಅನ್ನಸಂತರ್ಪಣೆ ಮಾಡಲಾಗುತ್ತದೆ.

ತಿರುಪತಿಯಲ್ಲಿ ನಿತ್ಯ ಅನ್ನಪ್ರಸಾದಕ್ಕಾಗಿ ಭಕ್ತರು ಕೋಟ್ಯಾಂತರ ರೂಪಾಯಿ ದೇಣಿಗೆಯನ್ನು ನೀಡುತ್ತಾರೆ. ಇದಕ್ಕೆ ದಿನಕ್ಕೆ ಇಂತಿಷ್ಟು ದೇಣಿಗೆಯನ್ನು ನಿಗಧಿಪಡಿಸಲಾಗಿದೆ. ದಾನಿಗಳು ಇಲ್ಲಿಯವರೆಗೆ ದಿನಕ್ಕೆ 33 ಲಕ್ಷ ರೂಪಾಯಿ ಅನ್ನಪ್ರಸಾದಕ್ಕೆ ದೇಣಿಗೆಯನ್ನು ನೀಡುತ್ತಿದ್ದರು. ಆದರೆ ಅದು ಈಗ ಹೆಚ್ಚಾಗಿದೆ. ಅಗತ್ಯ ಪದಾರ್ಥಗಳ ಬೆಲೆ ಹೆಚ್ಚಾಗಿರುವುದರಿಂದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಅನ್ನಪ್ರಸಾದಕ್ಕಾಗಿ ನಿತ್ಯ 38 ಲಕ್ಷ ರೂಪಾಯಿಯನ್ನು ಏರಿಕೆ ಮಾಡಲಾಗಿದೆ.

ಈ ಮೂಲಕ ತಿಂಡಿಗೆ 8 ಲಕ್ಷ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 15 ಲಕ್ಷದಂತೆ ಒಟ್ಟು 38 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ದೇಣಿಗೆ ನೀಡಲು ಬಯಸುವ ಭಕ್ತರು ಪ್ರತಿ ಬಾರಿ ಪ್ರತ್ಯೇಕವಾಗಿ ದಾನ ಮಾಡಬಹುದು ಎಂದು ಹೇಳಲಾಗಿದೆ. ಅನ್ನಪ್ರಸಾದಕ್ಕಾಗಿ ನಿತ್ಯ 14ರಿಂದ 16.5 ಟನ್ ಅಕ್ಕಿ, 6.5ರಿಂದ 7.5 ಟನ್ ತರಕಾರಿ ಬಳಕೆಯಾಗುತ್ತದೆ.

Tirumala Tirupati: Allegation of poor quality prasadam has been heard in tirupati

ಭಕ್ತರಿಂದ ಕಳಪೆ ಗುಣಮಟ್ಟದ ಪ್ರಸಾದ ನೀಡುತ್ತಿರುವ ಆರೋಪ

ಹೀಗಿರುವಾಗ ತಿರುಪತಿ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದ ಗುಣಮಟ್ಟ ಕಡಿಮೆಯಾಗಿದೆ ಎಂದು ಭಕ್ತರು ಅರ್ಧ ತಿಂದು ಮತ್ತರ್ಧ ಪ್ರಸಾದ ಹಾಗೇ ಬಿಟ್ಟು ಎದ್ದು ಹೋಗಿರುವುದು ಕಂಡು ಬಂದಿದೆ. ಗುಣಮಟ್ಟ ಹಾಗೂ ರುಚಿ ಇಲ್ಲದ ಕಾರಣ ಭಕ್ತರು ಎಲೆಯಲ್ಲಿ ಪ್ರಸಾದ ಹಾಗೇ ಬಿಟ್ಟು ಎದ್ದು ಹೋಗಿರುವುದು ಕಂಡು ಬಂದಿದೆ. ಜೊತೆಗೆ ತಿರುಮಲದಲ್ಲಿ ನಿತ್ಯಾನ್ನ ಪ್ರಸಾದದ ಗುಣಮಟ್ಟದ ಬಗ್ಗೆ ಭಕ್ತರು ದೂರಿದ್ದಾರೆ.

ಅನ್ನದಾನ ಪ್ರಸಾದ ಕೇಂದ್ರದಲ್ಲಿ ನೀಡುತ್ತಿರುವ ಅಕ್ಕಿಯ ಗುಣಮಟ್ಟ ಸರಿಯಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನದ ಸಿಬ್ಬಂದಿಯೊಂದಿಗೆ ಮಾತೃಶ್ರೀ ತರಿಕೊಂಡ ವೆಂಗಮಂಗ ವಾಗ್ವಾದ ನಡೆಸಿದರು. ಅನ್ನ ಬೇಯಿಸದೇ ಹಾಗೆಯೇ ಉಳಿದಿದೆ ಎಂದು ಅವರು ದೂರಿದ್ದಾರೆ. ಕೋಟಿಗಟ್ಟಲೆ ಕಾಣಿಕೆ ನೀಡಿದರೂ ಒಳ್ಳೆಯ ಊಟ ಸಿಗುತ್ತಿಲ್ಲ ಎಂದು ಭಕ್ತರು ಬೇಸರಗೊಂಡಿದ್ದಾರೆ.

ಭಕ್ತರಿಗೆ ಕ್ಷಮೆ ಕೇಳಿದ ಸಿಬ್ಬಂದಿ

ಭಕ್ತಾದಿಗಳೊಂದಿಗೆ ಮಾತುಕತೆ ನಡೆಸಿದ ದೇವಸ್ಥಾನದ ಸಿಬ್ಬಂದಿ ತಪ್ಪಿಗೆ ಕ್ಷಮೆ ಯಾಚಿಸಿ, ಶೀಘ್ರದಲ್ಲಿಯೇ ಸಮಸ್ಯೆ ನಿವಾರಿಸುವುದಾಗಿ ತಿಳಿಸಿದರು. ಈ ವೇಳೆ ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಈ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಅನ್ನದಾನ ಸರಿಯಿಲ್ಲ' ಎಂದು ಕೆಲ ಭಕ್ತರು ಹೇಳಿದ್ದಾರೆ.

'ಅಕ್ಕಿಯ ಗುಣಮಟ್ಟದ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುವುದು. ಇದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಅನ್ನಪ್ರಸಾದ ಆರಂಭಿಸಿದಾಗಿನಿಂದ ಇಲ್ಲಿಯವರೆಗೂ ಇಂತಹ ಘಟನೆ ನಡೆದಿಲ್ಲ. ತಿರುಮಲ ಅನ್ನದಾನದ ಬಗ್ಗೆ ಇದುವರೆಗೆ ಯಾವುದೇ ದೂರು ಬಂದಿಲ್ಲ. ಇದೇ ವೇಳೆ ಇನ್ನೂ 700 ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಆ ಭಕ್ತರು ಹೇಳದ ಕುಂದುಕೊರತೆಗಳನ್ನು ಇತರ ಭಕ್ತರು ಹೇಗೆ ಎದುರಿಸಿದರೋ ಗೊತ್ತಿಲ್ಲ. ಆದರೆ, ಏನೇ ಸಮಸ್ಯೆ ಇದ್ದರೂ ಸರಿಪಡಿಸಲಾಗುವುದು' ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+