ಕೊರೊನಾ ಸೋಂಕು ಯುವಕರಿಗೆ ಹೆಚ್ಚು ತಗುಲಿದೆ :ಊಹೆ ತಳ್ಳಿ ಹಾಕಿದ ಕೇಂದ್ರ
ನವದೆಹಲಿ, ಜೂನ್ 16: ಕೊರೊನಾ ಮೊದಲ ಅಲೆಯಲ್ಲಿ ಹಿರಿಯರಿಗೆ ಹೆಚ್ಚಿನ ಸೋಂಕು ತಗುಲಿದ್ದು, ಎರಡನೇ ಅಲೆಯಲ್ಲಿ ಯುವಕರಿಗೆ ಹೆಚ್ಚಿನ ಸೋಂಕು ತಗುಲಿದೆ ಎನ್ನುವ ಊಹೆಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.
ಎರಡೂ ಅಲೆಗಳಲ್ಲಿ 1-20 ವಯಸ್ಸಿನ ಶೇ.12 ಮಂದಿಗಿಂತ ಕಡಿಮೆ ಜನರಲ್ಲಿ ಕೊರೊನಾ ಸೋಂಕು ವರದಿಯಾಗಿದೆ ಎಂದು ಹೇಳಿದೆ.
ಮೇ.10 ರಂದು ದೇಶಾದ್ಯಂತ ವರದಿಯಾಗಿದ್ದ ಅತಿ ಹೆಚ್ಚು ಕೊರೊನಾ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳಲ್ಲಿ ಶೇ.75.6 ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರ ಹೇಳಿದೆ.

ಎರಡನೇ ಅಲೆಯಲ್ಲಿ ಎಷ್ಟು ಮಂದಿಗೆ ಸೋಂಕು
ಕೊರೊನಾ ಎರಡನೇ ಅಲೆಯಲ್ಲಿ 1-20 ವರ್ಷದ ಶೇ.11.62 ಮಂದಿಗೆ ಸೋಂಕು ತಗುಲಿದ್ದರೆ (ಮಾರ್ಚ್ 15- ಮೇ 25 ವರೆಗೆ) ಮೊದಲ ಅಲೆಯಲ್ಲಿ (ಜುಲೈ 1-ಡಿಸೆಂಬರ್-31) ವರೆಗೆ ಇದೇ ವಯಸ್ಸಿನ ಶೇ.11.31 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಎರಡೂ ಅಲೆಯಲ್ಲಿ ಈ ವಯಸ್ಸಿನ ಗುಂಪಿನ ಜನರಿಗೆ ಸೋಂಕು ತಗುಲಿರುವ ಪ್ರಮಾಣದಲ್ಲಿ ಹೆಚ್ಚಿನ ಅಂತರವಿಲ್ಲ ಎಂದು ಸರ್ಕಾರ ಅಂಕಿ-ಅಂಶ ಸಹಿತವಾಗಿ ಮಾಹಿತಿ ನೀಡಿದೆ.

ಎರಡೂ ಅಲೆಗಳಲ್ಲಿ ತೊಂದರೆ ಅನುಭವಿಸಿದವರು
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ 21-50 ವಯಸ್ಸಿನವರೇ ಎರಡೂ ಅಲೆಗಳಲ್ಲಿ ಅತಿ ಹೆಚ್ಚು ಬಾಧಿತರು ಎಂದು ತಿಳಿದುಬಂದಿದ್ದು ಈ ವಯಸ್ಸಿನ ಶೇ.59.74 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಸೋಂಕು ತಗುಲಿತ್ತು, ಎರಡನೇ ಅಲೆಯಲ್ಲಿ ಇದೇ ವಯಸ್ಸಿನ ಶೇ.62.45 ರಷ್ಟು ಮಂದಿಗೆ ಸೋಂಕು ತಗುಲಿದೆ. 61 ರ ವಯಸ್ಸಿನ ಮೇಲ್ಪಟ್ಟ ಜನರಲ್ಲಿ ಶೇ.13.89 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಸೋಂಕು ಬಾಧಿಸಿದ್ದರೆ ಶೇ.12.58 ರಷ್ಟು ಮಂದಿಗೆ ಎರಡನೇ ಅಲೆಯಲ್ಲಿ ಕೊರೊನಾ ಸೋಂಕು ತಗುಲಿದೆ.

ಮಕ್ಕಳಿಗೆ ಸೋಂಕು ತಗುಲುವ ಬಗ್ಗೆ ಸಾಕ್ಷ್ಯಾಧಾರಗಳಿಲ್ಲ
ಮೂರನೇ ಅಲೆಯಲ್ಲಿ ಮಕ್ಕಳು ಅತಿ ಹೆಚ್ಚು ಕೊರೊನಾ ಸೋಂಕಿಗೆ ಗುರಿಯಾಗಲಿದ್ದಾರೆ ಎಂಬ ಭೀತಿಯ ಬಗ್ಗೆ ಮಾಹಿತಿ ನೀಡಿರುವ ಲವ್ ಅಗರ್ವಾಲ್, ''ಇದಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳೂ ಇಲ್ಲ'' ಎಂದು ಹೇಳಿದ್ದಾರೆ. ಆದರೆ ಎಲ್ಲಾ ವಯಸ್ಸಿನವರೂ ಮೂರನೇ ಅಲೆಯ ಬಗ್ಗೆ ಎಚ್ಚರದಿಂದ ಇರಬೇಕೆಂದು ಹೇಳಿದ್ದಾರೆ. ಇನ್ನು ದೇಶದಲ್ಲಿ ಕೋವಿಡ್-19 ಪರಿಸ್ಥಿತಿ ಸುಧಾರಣೆಯಾಗುತ್ತಿದ್ದು, ದಿನನಿತ್ಯದ ಪ್ರಕರಣಗಳಲ್ಲಿ ಶೇ.85 ರಷ್ಟು ಇಳಿಕೆ ಕಂಡಿದೆ.

11-20ವರ್ಷದವರು ಎಷ್ಟು ಮಂದಿಗೆ ಸೋಂಕು ತಗುಲಿದೆ
ಇನ್ನು 11-20 ವಯಸ್ಸಿನ ಶೇ.8.03 ಮಂದಿ ಮೊದಲ ಅಲೆಯಲ್ಲಿ ಕೊರೊನಾ ಪೀಡಿತರಾಗಿದ್ದರೆ, ಎರಡನೇ ಅಲೆಯಲ್ಲಿ ಶೇ.8.57 ರಷ್ಟು ಮಂದಿ ಕೊರೊನಾ ಪೀಡಿತರಾಗಿದ್ದಾರೆ.

ಕೊರೊನಾ ಎರಡನೇ ಅಲೆ
ಮೊದಲ ಹಾಗೂ ಎರಡನೇ ಅಲೆಯಲ್ಲಿ ಸೋಂಕಿಗೆ ಗುರಿಯಾದವರ ವಯಸ್ಸಿನ ಅಂಕಿ-ಅಂಶಗಳನ್ನು ವಿಶ್ಲೇಷಿಸಿರುವ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ''1-10 ವರ್ಷದ ಶೇ.3.28 ರಷ್ಟು ಮಂದಿಗೆ ಮೊದಲ ಅಲೆಯಲ್ಲಿ ಕೊರೊನಾ ಬಂದಿತ್ತು, ಎರಡನೇ ಅಲೆಯಲ್ಲಿ ಈ ವಿಭಾಗದ ಶೇ.3.05 ಮಂದಿಗೆ ಕೊರೊನಾ ಬಂದಿದೆ'' ಎಂದು ಹೇಳಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications