ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಸಾಂಸ್ಕೃತಿಕ ಕೇಂದ್ರದಲ್ಲಿ ರಾಮಾಯಣ ಪಠಣ
ಹಿಂದೂ-ಕ್ರಿಶ್ಚಿಯನ್ನರ ಮಧ್ಯೆ ಸೌಹಾರ್ದ ಏರ್ಪಡಿಸುವ ಉದ್ದೇಶದಿಂದ ಕೇರಳದ ಕ್ಯಾಥೋಲಿಕ್ ಸಂಸ್ಥೆಯೊಂದು ಮಾಡುತ್ತಿರುವ ಕಾರ್ಯಕ್ರಮ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಂತ ಅದು ತೀರಾ ಇತ್ತೀಚಿನ ಕಾರ್ಯಕ್ರಮ ಏನಲ್ಲ, ಹತ್ತಕ್ಕೂ ಹೆಚ್ಚು ವರ್ಷದಿಂದ ಮಾಡಿಕೊಂಡು ಬರಲಾಗುತ್ತಿದೆ.
ಏನದು ಕಾರ್ಯಕ್ರಮ ಅಂತೀರಾ. ಕ್ಯಾಥೋಲಿಕ್ ಚರ್ಚ್ ನವರು ನಡೆಸಿಕೊಂಡು ಬರುತ್ತಿರುವ ಚವರ ಸಾಂಸ್ಕೃತಿಕ ಸಂಘದಿಂದ ರಾಮಾಯಣ ಮಾಸ ಆಚರಿಸಲಾಗುತ್ತದೆ. ಮಲಯಾಳಂನ ಕರ್ಕಿಡಕೊಂ ತಿಂಗಳನ್ನು ಕೇರಳದಲ್ಲಿ ರಾಮಾಯಣ ತಿಂಗಳು ಅಂತ ಆಚರಿಸಲಾಗುತ್ತದೆ.
ಹಿಂದೂ ಭಕ್ತರು ದಿನವೊಂದಕ್ಕೆ ರಾಮಾಯಣದ ಸ್ವಲ್ಪ ಭಾಗವನ್ನಾದರೂ ಓದುತ್ತಾರೆ. ಹಾಗೆ ಓದುತ್ತಾ ಇಡೀ ಗ್ರಂಥವನ್ನು ಒಂದು ತಿಂಗಳಲ್ಲಿ ಓದಿ ಮುಗಿಸುತ್ತಾರೆ. ಚವರದಲ್ಲಿ ಅಂತರ್ ಧರ್ಮೀಯ ಸಭೆ ಏರ್ಪಡಿಸಲಾಗುತ್ತದೆ. ಅದರಲ್ಲಿ ಎಲ್ಲ ಧರ್ಮದವರು ಭಾಗಿಯಾಗುತ್ತಾರೆ. ಈ ವರ್ಷ ಕರ್ಕಿಡಕೊಂನ ಆರಂಭದಲ್ಲಿ ಆಚರಣೆ ಮಾಡಲಾಗಿದೆ.

ಆ ದಿನ ಹಿಂದೂಗಳು ರಾಮಾಯಣದ ಕೆಲ ಭಾಗವನ್ನು ಪಠಣ ಮಾಡುತ್ತಾರೆ. ಚರ್ಚ್ ನ ಸನ್ಯಾಸಿನಿಯರು, ಪಾದ್ರಿಗಳು ಮತ್ತು ಇತರ ಧರ್ಮಾನುಯಾಯಿಗಳು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಇಸ್ಲಾಂ, ಜೈನ್, ಸಿಖ್ಖರು ಕೂಡ ಭಾಗವಹಿಸುತ್ತಾರೆ. ಕೊಚ್ಚಿ ಸುತ್ತ ಮುತ್ತ ವಾಸಿಸುವ ಮಂದಿ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ.
ಯಾವ ರಾಮಾಯಣದ ಭಾಗವನ್ನು ಪಠಣ ಮಾಡಲಾಗುತ್ತದೋ ಅದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಆ ನಂತರ ಅದರ ಕುರಿತು ಚರ್ಚೆ ಕೂಡ ನಡೆಯುತ್ತದೆ. "ನಾವು ಕಳೆದ ಹನ್ನೆರಡು-ಹದಿಮೂರು ವರ್ಷದಿಂದ ರಾಮಾಯಣ ತಿಂಗಳು ಆಚರಿಸುತ್ತಿದ್ದೇವೆ" ಎನ್ನುತ್ತಾರೆ ಚವರ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಫಾದರ್ ರೋಬಿ ಕನ್ನಂಚಿರ.
ವಿವಿಧ ನಂಬಿಕೆಗಳನ್ನು ನಾವು ಬೆಂಬಲಿಸುತ್ತೇವೆ. ಅದು ಕೂಡ ನಮ್ಮ ನಂಬಿಕೆಯನ್ನು ಬಿಡದೆ ಎಂಬ ಸಂದೇಶವನ್ನು ರವಾನಿಸುವುದು ಈ ಕಾರ್ಯಕ್ರಮದ ಉದ್ದೇಶ ಎನ್ನುತ್ತಾರೆ ಅವರು.
-
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Gold and Silver Rate Today April 5: ಚಿನ್ನ - ಬೆಳ್ಳಿ ಪ್ರಿಯರಿಗೆ ಗುಡ್ನ್ಯೂಸ್, ಮುಂದಿನ ವಾರ ಹೇಗಿರಲಿದೆ ಬಂಗಾರದ ಬೆಲೆ -
Bengaluru Migration: ಅಸ್ಸಾಂನಿಂದ ಬೆಂಗಳೂರಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ ಎಂದ ಸಂಸದ ತೇಜಸ್ವಿ ಸೂರ್ಯ -
ಸಿಎಸ್ಕೆ ವಿರುದ್ಧದ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಸ್ಫೋಟಕ ಸತ್ಯ ಬಿಚ್ಚಿಟ್ಟ ಆರ್ಸಿಬಿ ಸ್ಟಾರ್, ಕನ್ನಡಿಗ ಪಡಿಕ್ಕಲ್ -
ಉತ್ತರ ಕರ್ನಾಟಕದ ರೈಲು ಪ್ರಯಾಣಿಕರಿಗೆ ಬಂಪರ್ ಕೊಡುಗೆ: 3 ರೈಲುಗಳು ಇನ್ಮುಂದೆ ಪರ್ಮನೆಂಟ್, ಟಿಕೆಟ್ ದರದಲ್ಲಿ ಭಾರಿ ಇಳಿಕೆ! -
Match Weather Report: ಚಿನ್ನಸ್ವಾಮಿಯಲ್ಲಿ ಆರ್ಸಿಬಿ-ಸಿಎಸ್ಕೆ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
ಉಪೇಂದ್ರ ಅಣ್ಣನ ಮಗನ ಜೊತೆ ಶ್ರೇಯಾಂಕ ಪಾಟೀಲ್ ಮದುವೆ ಸುದ್ದಿ: ಖಡಕ್ ಪ್ರತಿಕ್ರಿಯೆ ಕೊಟ್ಟ ನಟ ನಿರಂಜನ್ ಸುಧೀಂದ್ರ -
Prakash Raj: ಚಹಾ ಮಾರುವುದರಿಂದ ಸಿನಿಮಾ ಮಾರುವವರೆಗೆ ಮೋದಿ ಬಗ್ಗೆ ನಟ ಪ್ರಕಾಶ್ ರಾಜ್ ವ್ಯಂಗ್ಯ -
ಪಾಪರ್ ಸರ್ಕಾರದ ಸಾಹುಕಾರ ಸಿದ್ದರಾಮಯ್ಯ: ಬಾಗಲಕೋಟೆ ಮೆಡಿಕಲ್ ಕಾಲೇಜ್ ಬಗ್ಗೆ ಬೊಮ್ಮಾಯಿ ಪ್ರಶ್ನೆ -
Basavaraj Bommai: ನಾನು ಗೌರವ ಡಾಕ್ಟರೇಟ್ ಸ್ವೀಕರಿಸುವುದಿಲ್ಲ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ












Click it and Unblock the Notifications