ಕ್ಯಾಥೋಲಿಕ್ ಕ್ರಿಶ್ಚಿಯನ್ನರ ಸಾಂಸ್ಕೃತಿಕ ಕೇಂದ್ರದಲ್ಲಿ ರಾಮಾಯಣ ಪಠಣ
ಹಿಂದೂ-ಕ್ರಿಶ್ಚಿಯನ್ನರ ಮಧ್ಯೆ ಸೌಹಾರ್ದ ಏರ್ಪಡಿಸುವ ಉದ್ದೇಶದಿಂದ ಕೇರಳದ ಕ್ಯಾಥೋಲಿಕ್ ಸಂಸ್ಥೆಯೊಂದು ಮಾಡುತ್ತಿರುವ ಕಾರ್ಯಕ್ರಮ ಬಹಳ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಂತ ಅದು ತೀರಾ ಇತ್ತೀಚಿನ ಕಾರ್ಯಕ್ರಮ ಏನಲ್ಲ, ಹತ್ತಕ್ಕೂ ಹೆಚ್ಚು ವರ್ಷದಿಂದ ಮಾಡಿಕೊಂಡು ಬರಲಾಗುತ್ತಿದೆ.
ಏನದು ಕಾರ್ಯಕ್ರಮ ಅಂತೀರಾ. ಕ್ಯಾಥೋಲಿಕ್ ಚರ್ಚ್ ನವರು ನಡೆಸಿಕೊಂಡು ಬರುತ್ತಿರುವ ಚವರ ಸಾಂಸ್ಕೃತಿಕ ಸಂಘದಿಂದ ರಾಮಾಯಣ ಮಾಸ ಆಚರಿಸಲಾಗುತ್ತದೆ. ಮಲಯಾಳಂನ ಕರ್ಕಿಡಕೊಂ ತಿಂಗಳನ್ನು ಕೇರಳದಲ್ಲಿ ರಾಮಾಯಣ ತಿಂಗಳು ಅಂತ ಆಚರಿಸಲಾಗುತ್ತದೆ.
ಹಿಂದೂ ಭಕ್ತರು ದಿನವೊಂದಕ್ಕೆ ರಾಮಾಯಣದ ಸ್ವಲ್ಪ ಭಾಗವನ್ನಾದರೂ ಓದುತ್ತಾರೆ. ಹಾಗೆ ಓದುತ್ತಾ ಇಡೀ ಗ್ರಂಥವನ್ನು ಒಂದು ತಿಂಗಳಲ್ಲಿ ಓದಿ ಮುಗಿಸುತ್ತಾರೆ. ಚವರದಲ್ಲಿ ಅಂತರ್ ಧರ್ಮೀಯ ಸಭೆ ಏರ್ಪಡಿಸಲಾಗುತ್ತದೆ. ಅದರಲ್ಲಿ ಎಲ್ಲ ಧರ್ಮದವರು ಭಾಗಿಯಾಗುತ್ತಾರೆ. ಈ ವರ್ಷ ಕರ್ಕಿಡಕೊಂನ ಆರಂಭದಲ್ಲಿ ಆಚರಣೆ ಮಾಡಲಾಗಿದೆ.

ಆ ದಿನ ಹಿಂದೂಗಳು ರಾಮಾಯಣದ ಕೆಲ ಭಾಗವನ್ನು ಪಠಣ ಮಾಡುತ್ತಾರೆ. ಚರ್ಚ್ ನ ಸನ್ಯಾಸಿನಿಯರು, ಪಾದ್ರಿಗಳು ಮತ್ತು ಇತರ ಧರ್ಮಾನುಯಾಯಿಗಳು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಇಸ್ಲಾಂ, ಜೈನ್, ಸಿಖ್ಖರು ಕೂಡ ಭಾಗವಹಿಸುತ್ತಾರೆ. ಕೊಚ್ಚಿ ಸುತ್ತ ಮುತ್ತ ವಾಸಿಸುವ ಮಂದಿ ಇದರಲ್ಲಿ ಕಾಣಿಸಿಕೊಳ್ಳುತ್ತಾರೆ.
ಯಾವ ರಾಮಾಯಣದ ಭಾಗವನ್ನು ಪಠಣ ಮಾಡಲಾಗುತ್ತದೋ ಅದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಆ ನಂತರ ಅದರ ಕುರಿತು ಚರ್ಚೆ ಕೂಡ ನಡೆಯುತ್ತದೆ. "ನಾವು ಕಳೆದ ಹನ್ನೆರಡು-ಹದಿಮೂರು ವರ್ಷದಿಂದ ರಾಮಾಯಣ ತಿಂಗಳು ಆಚರಿಸುತ್ತಿದ್ದೇವೆ" ಎನ್ನುತ್ತಾರೆ ಚವರ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಫಾದರ್ ರೋಬಿ ಕನ್ನಂಚಿರ.
ವಿವಿಧ ನಂಬಿಕೆಗಳನ್ನು ನಾವು ಬೆಂಬಲಿಸುತ್ತೇವೆ. ಅದು ಕೂಡ ನಮ್ಮ ನಂಬಿಕೆಯನ್ನು ಬಿಡದೆ ಎಂಬ ಸಂದೇಶವನ್ನು ರವಾನಿಸುವುದು ಈ ಕಾರ್ಯಕ್ರಮದ ಉದ್ದೇಶ ಎನ್ನುತ್ತಾರೆ ಅವರು.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications