ಲಿಯಾಂಡರ್ ಪೇಸ್ ಆಗಲಿದ್ದಾರೆ ಪದ್ಮಭೂಷಣ ಪ್ರಾಯ
ನವದೆಹಲಿ, ನ.21: ಕ್ರೀಡಾ ಕ್ಷೇತ್ರದಿಂದ ಮತ್ತೊಂದು ಸಂತಸ ಸುದ್ದಿ ಬಂದಿದೆ. ಭಾರತದ ಕಂಡ ಅದ್ಭುತ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರು ಈ ಬಾರಿ ಪದ್ಮಭೂಷಣ ಪುರಸ್ಕಾರಕ್ಕೆ ಭಾಜನರಾಗಲಿದ್ದಾರೆ. ಕಳೆದ ವರ್ಷ ನಮ್ಮ ಕ್ರಿಕೆಟ್ ಕಲಿ ರಾಹುಲ್ ದ್ರಾವಿಡ್ ಅವರಿಗೆ ಪದ್ಮಭೂಷಣ ಸಂದಾಯವಾಗಿತ್ತು.
ಹೌದು ಮುಂದಿನ ಜನವರಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಕೋಲ್ಕೊತ್ತಾದ ಲಿಯಾಂಡರ್ ಪೇಸ್ (Leander Adrian Paes) ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿ ಎಂದು ಕೇಂದ್ರ ಕ್ರೀಡಾ ಸಚಿವಾಲಯವು ಅವರ ಹೆಸರನ್ನು ಅನುಮೋದನೆ ಮಾಡಿ ಪತ್ರ ಬರೆದಿದೆ. ಪತ್ರದಲ್ಲಿ ಪದ್ಮಭೂಷಣ ಪ್ರಶಸ್ತಿಗೆ Tennis star ಪೇಸ್ ಅವರೊಬ್ಬರದೇ ಹೆಸರು ಕಾಣಿಸಿಕೊಂಡಿರುವುದರಿಂದ ಅವರೀಬಾರಿ ಪದ್ಮಭೂಷಣ ಪುರಸ್ಕೃತರಾಗಲಿದ್ದಾರೆ ಎಂದು ಭಾವಿಸಬಹುದಾಗಿದೆ.

ಸ್ವಲ್ಪ ರಾಜಕೀಯ ಹೇಳುವುದಾದರೆ Balancing actಗೆ ಇಳಿದಿರುವ ಯುಪಿಎ ಮೈತ್ರಿಕೂಟದ ಕೇಂದ್ರ ಸರಕಾರ ಕೇವಲ ಕ್ರಿಕೆಟ್ಟಿಗೆ ಮಣೆ ಹಾಕುವುದು ತರವಲ್ಲ ಎಂದು ಭಾವಿಸಿ ಟೆನಿಸ್ ನತ್ತಲೂ ಕಣ್ಣುಹಾಯಿಸಿದೆ. ಹಾಗಯೇ ಪಶ್ಚಿಮ ಬಂಗಾಳದ ದೀದಿಯನ್ನು ಸಂಪ್ರೀತಗೊಳಿಸುವ ಸಲುವಾಗಿಯೂ ಈ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಜತೆಗೆ ಫುಟ್ಬಾಲಿಗ ಅಶುತೋಷ್ ಘೋಷ್, ಟೇಬಲ್ ಟೆನಿಸ್ ಪ್ರತಿಭೆ ಇಂದುಪುರಿ ಅವರುಗಳಿಗೆ ಪದ್ಮಶ್ರೀ ದಕ್ಕುವ ಸಾಧ್ಯತೆಯಿದೆ.
Politics apart, ಯಾರು ಏನೇ ಹೇಳಲಿ ಲಿಯಾಂಡರ್ ಭಾರತ ಕಂಡ ಸರ್ವಶ್ರೇಷ್ಠ ಆಟಗಾರ. ಭಾರತ ರತ್ನ ಸಚಿನ್ ರಮೇಶ್ ತೆಂಡೂಲ್ಕರ್ ಅವರಿಗೂ ಲಿಯಾಂಡರ್ ಗೂ ಬಹಳಷ್ಟು ಸಾಮ್ಯತೆ ಇದೆ. ಇಬ್ಬರೂ ಸಮಕಾಲೀನರೇ. ಅಂದರೆ ಇಬ್ಬರಿಗೂ 40ರ ವಯಸ್ಸು. ಇಬ್ಬರೂ 24 ವರ್ಷಗಳಿಂದ ಅವರವರ ಕ್ರೀಡೆಗಳನ್ನೇ ಉಸಿರಾಗಿಸಿಕೊಂಡಿದ್ದಾರೆ.
ಜೆಕ್ ರಿಪಬ್ಲಿಕನ್ ಆಟಗಾರನ ಜತೆ ಇತ್ತೀಚೆಗೆ ಅಮೆರಿಕ ಮುಕ್ತ ಡಬಲ್ಸ್ ಪಟ್ಟವನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿರುವ ಲಿಯಾಂಡರ್ ಪೇಸ್, ರಮಾನಾಥನ್ ಕೃಷ್ಣ್ ನಂತರ (1967) ಟೆನಿಸ್ ಕ್ರೀಡೆಯಲ್ಲಿ ಪದ್ಮಭೂಷಣ ಪ್ರಾಯರಾಗುತ್ತಿದ್ದಾರೆ. (ಚಿತ್ರ ಕೃಪೆ)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications