Triangle Fight in Telangana Polls: ರಾಷ್ಟ್ರೀಯ-ಸ್ಥಳೀಯ ಪಕ್ಷಗಳ ಮಧ್ಯೆ ತ್ರಿಕೋನ ಸ್ಪರ್ಧೆ?, ಎಲ್ಲೆಲ್ಲಿ ತಿಳಿಯಿರಿ

ಹೈದರಾಬಾದ್, ನವೆಂಬರ್ 20: ತೆಲಂಗಾಣ ವಿಧಾನಸಭೆ ಚುನಾವಣೆಗೆ ನಿಗದಿಯಾಗಿದ್ದ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಇದ್ದ ಗಡುವು ಮುಕ್ತಾಯವಾಗಿದೆ. ಸದ್ಯ ತೆಲಂಗಾಣದಲ್ಲಿ ಮೂರನೇ ಒಂದು ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎಂಬುದು ಈಗ ಸ್ಪಷ್ಟವಾಗಿದೆ. ಆದರೆ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮತ್ತು ಕಾಂಗ್ರೆಸ್ ಇತರರ ಉಪಸ್ಥಿತಿಯ ಹೊರತಾಗಿ ಇತರ ರಾಷ್ಟ್ರೀಯ ಪಕ್ಷಗಳಲ್ಲಿ ನೇರ ಹಣಾಹಣಿ ಏರ್ಪಡಲಿದೆ.

ಆಡಳಿತಾರೂಢ ಬಿಆರ್‌ಎಸ್ ರಾಜ್ಯದ ಎಲ್ಲ 119 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ 118 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಕೊತಗುಡೆಂ ಕ್ಷೇತ್ರವನ್ನು ತನ್ನ ಮೈತ್ರಿ ಪಾಲುದಾರ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ಗೆ ಬಿಟ್ಟು ಕೊಟ್ಟಿದೆ.

Telangana Polls: Triangle Competition Between National Parties and Others, See Constituency

ಅದೇ ರೀತಿ ಬಿಜೆಪಿ 111 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಉಳಿದ ಕ್ಷೇತ್ರಗಳನ್ನು ನಟ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷಕ್ಕೆ ಬಿಟ್ಟು ಕೊಟ್ಟಿದೆ. ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) 107 ಸ್ಥಾನಗಳಲ್ಲಿ ಮತ್ತು ಸಿಪಿಐ (ಮಾರ್ಕ್ಸ್‌ವಾದಿ) 19 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಈ ಪೈಕಿ ತ್ರಿಕೋನ ಸ್ಪರ್ಧೆ ಯಾರ ಮಧ್ಯೆ ಎಂಬ ಮಾಹಿತಿ ಇಲ್ಲಿದೆ.

ತೆಲಂಗಾಣದಲ್ಲಿ ತ್ರೀಕೋನ ಸ್ಪರ್ಧೆ

ಬಿಜೆಪಿ ಸುಮಾರು 40 ಕ್ಷೇತ್ರಗಳಲ್ಲಿ ಗೆಲ್ಲುವ ಉತ್ಸಾಹದೊಂದಿಗೆ ತೀವ್ರ ಪೈಪೋಟಿ ಆರಂಭಿಸಿದೆ. ಉಳಿದ 79 ಸ್ಥಾನಗಳಲ್ಲಿ ಬಿಆರ್‌ಎಸ್-ಕಾಂಗ್ರೆಸ್ ನೇರ ಹಣಾಹಣಿಯ ಸಾಧ್ಯತೆ ಇದೆ. ಹಿಂದಿನ ಜಿಲ್ಲೆಗಳಾದ ನಿಜಾಮಾಬಾದ್, ಕರೀಂನಗರ, ಆದಿಲಾಬಾದ್, ಗ್ರೇಟರ್ ಹೈದರಾಬಾದ್, ಮಹೆಬೂಬ್‌ನಗರ ಮತ್ತು ವಾರಂಗಲ್‌ನಂತಹ ಹಿಂದಿನ ಜಿಲ್ಲೆಗಳಲ್ಲಿ ಬಿಜೆಪಿಗೆ ಸ್ವಲ್ಪ ಬೆಂಬಲವಿದೆಯೋ ಅಲ್ಲೆಲ್ಲ ತ್ರಿಕೋನ ಸ್ಪರ್ಧೆಗಳು ಕಂಡು ಬರಲಿದೆ.

ಬಿಆರ್‌ಎಸ್ ಮುಖ್ಯಸ್ಥ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಕಾಮರೆಡ್ಡಿಯಿಂದ ಹಿಂದಿನ ನಿಜಾಮಾಬಾದ್ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ಯ ಪಕ್ಷದ ಉಸ್ತುವಾರಿ ಎ.ರೇವಂತ್ ರೆಡ್ಡಿ ಅಖಾಡದಲ್ಲಿದ್ದು, ಇತ್ತ ಬಿಜೆಪಿ ಅಭ್ಯರ್ಥಿಯಿಂದಲೂ ಇವರಿಬ್ಬರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಪೈಪೋಟಿ ಎದುರಿಸಬೇಕಿದೆ. ಆರ್ಮೂರ್, ಬೋಧನ್, ನಿಜಾಮಾಬಾದ್ ನಗರ, ಬಾನ್ಸವಾಡ, ಬಾಳಕೊಂಡ ಕ್ಷೇತ್ರಗಳಲ್ಲಿ ಬಿಜೆಪಿ ಸಾಕಷ್ಟು ಪ್ರಬಲವಾಗಿದೆ ಎಂದು ಹೇಳಲಾಗುತ್ತಿದೆ.

Telangana Polls: Triangle Competition Between National Parties and Others, See Constituency

ಬಿಜೆಪಿ ಪ್ರಭಾವಿರುವ ಕ್ಷೇತ್ರಗಳ ಮಾಹಿತಿ

ಬಿಜೆಪಿ ಸಂಸದರಾದ ಬಂಡಿ ಸಂಜಯ್ ಮತ್ತು ಧರ್ಮಪುರಿ ಅರವಿಂದ್ ಕಣದಲ್ಲಿರುವುದರಿಂದ ಸಂಯೋಜಿತ ಕರೀಂನಗರ ಜಿಲ್ಲೆಯಲ್ಲಿ ಕೆಲವು ತೀವ್ರ ತ್ರಿಕೋನ ಹೋರಾಟಗಳು ಕಂಡು ಬಂದಿವೆ. ಕರೀಂನಗರ, ಕೋರುಟ್ಲಾ, ಜಗಿತ್ಯಾಲ್, ವೇಮುಲವಾಡ ಮತ್ತು ಹುಜೂರಾಬಾದ್ ಪ್ರಮುಖ ಕ್ಷೇತ್ರಗಳಾಗಿದ್ದು, ಬಿಜೆಪಿ ಪ್ರಭಾವ ಇದೆ.

ಸಿಪಿಐ(ಎಂ)ನಿಂದ ಮತ ವಿಭಜನೆ ಸಾಧ್ಯತೆ

ಸಂಯೋಜಿತ ಖಮ್ಮಂ ಜಿಲ್ಲೆಯಲ್ಲಿ, ಇದು ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಡುವೆ ನೇರ ಹೋರಾಟ ಏರ್ಪಡಲಿದೆ. ಸಿಪಿಐ (ಎಂ) ಎರಡೂ ಪ್ರಮುಖ ಪಕ್ಷಗಳ ಮತಗಳನ್ನು ಒಡೆಯಲಿದೆ. ಸಿಪಿಐ (ಎಂ) ಕೊನೆಯ ಕ್ಷಣದವರೆಗೂ ಕಾಂಗ್ರೆಸ್ ಜೊತೆ ಮೈತ್ರಿಗೆ ಚೌಕಾಸಿ ಮಾಡಿತಾದರೂ ಆದರೆ ಯಾವು ಫಲಿಸಲಿಲ್ಲ. ಹೀಗಾಗಿ ಈ ಪಕ್ಷ ನೇರ ಪೈಪೋಟಿ ಒಡ್ಡಲಿದೆ.

ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದರೂ, ಇಲ್ಲಿ ಬಿಜೆಪಿ ಅಭ್ಯರ್ಥಿ ಪ್ರಬಲ ಎಂದು ಪರಿಗಣಿಸಲ್ಪಟ್ಟಿರುವ ಕ್ಷೇತ್ರವನ್ನು ಹೊರತುಪಡಿಸಿ, ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪ್ರಮುಖ ಪ್ರತಿಸ್ಪರ್ಧಿಗಳಾಗಿದ್ದರೂ, ದೀರ್ಘಕಾಲದಿಂದ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ನಲ್ಗೊಂಡ ಕೂಡ ಮೂರನೇ ಪಕ್ಷದ ಸಿಪಿಐ (ಎಂ) ಮತಗಳನ್ನು ವಿಭಜಿಸಲಿದೆ. ಇದೇ ರೀತಿ ಮಹೆಬೂಬ್‌ನಗರ ಜಿಲ್ಲೆ ವ್ಯಾಪ್ತಿಯಲ್ಲಿ, ಗ್ರೇಟರ್ ಹೈದರಾಬಾದ್ ಕೂಡ ತ್ರಿಕೋನ ಸ್ಪರ್ಧೆ ಉಂಟಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+