ಅತಿ ವೇಗವಾಗಿ ವಾಹನ ಚಾಲನೆ ತಮಿಳುನಾಡು, ಕರ್ನಾಟಕದಲ್ಲಿ ಅತಿ ಹೆಚ್ಚು ಸಾವು!: ಎನ್ಸಿಆರ್ಬಿ
ನವದೆಹಲಿ, ಅಕ್ಟೋಬರ್ 25: ದೇಶದಲ್ಲಿ ಅತಿ ವೇಗದ ಚಾಲನೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಸಾವು ಸಂಭವಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್ಸಿಆರ್ಬಿ) ವರದಿಯ ಪ್ರಕಾರ, ದೇಶದಲ್ಲಿ ಅತಿ ವೇಗದ ಚಾಲನೆಯಿಂದ ಶೇ 59.7 ರಷ್ಟು ಸಾವಿನ ಪ್ರಮಾಣ ದಾಖಲಾಗಿ ಈ ಎರಡು ರಾಜ್ಯಗಳಲ್ಲಿ ಮಾತ್ರ ಅತಿ ಹೆಚ್ಚು ಸಾವು ಸಂಭವಿಸಿವೆ.
2021ರಲ್ಲಿ ಭಾರತದಲ್ಲಿ ಅಪಘಾತ-ಸಂಬಂಧಿತ ಸಾವುಗಳಿಗೆ (55.9 ಪ್ರತಿಶತ) ಸಂಬಂಧಿಸಿದ ಪ್ರಮುಖ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಮತ್ತು ಅತೀ ವೇಗವಾದ ಚಾಲನೆಯಿಂದಾಗಿ ಕರ್ನಾಟಕ ರಾಜ್ಯವು ಎರಡನೇ ಅತಿ ಹೆಚ್ಚು ಸಾವುಗಳು ದಾಖಲೆಯ ಪ್ರಮಾಣ ವರದಿಯಾಗಿದೆ.
ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ (NCRB)ಯ ಇತ್ತೀಚಿನ ವರದಿಯ ಪ್ರಕಾರ, 2021ರಲ್ಲಿ ಭಾರತದಲ್ಲಿ ಅಪಘಾತದಿಂದ ಸಂಭವಿಸಿರುವ ಸಾವುಗಳು ಹೆಚ್ಚಿನ ರಸ್ತೆ ಅಪಘಾತಗಳು ಅತಿ ವೇಗದ ಕಾರಣದಿಂದಾಗಿವೆ, ಇದು ಒಟ್ಟು ಅಪಘಾತಗಳಲ್ಲಿ 59.7 ಪ್ರತಿಶತದಷ್ಟಿದೆ. ಹೆಚ್ಚಿನ ರಸ್ತೆ ಅಪಘಾತಗಳು ಮಿತಿಮೀರಿದ ವೇಗದ ಕಾರಣದಿಂದಾಗಿವೆ. ಇದು ಒಟ್ಟು ಅಪಘಾತಗಳಲ್ಲಿ 59.7 ಪ್ರತಿಶತದಷ್ಟಿದೆ, ಒಟ್ಟು 4,03,116 ರಸ್ತೆ ಅಪಘಾತ ಪ್ರಕರಣಗಳಲ್ಲಿ 2,40,828 ರಷ್ಟಿದೆ. ಒಟ್ಟು 87,050 ಜನರು ಸಾವನ್ನಪ್ಪಿದ್ದಾರೆ (ಶೇ 55.9) ಮತ್ತು 2,28,274 ಜನರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ಕರ್ನಾಟಕದಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದೆ!
ಅತಿ ವೇಗದ ಚಾಲನೆಯಿಂದ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾವು ತಮಿಳುನಾಡಿನಲ್ಲಿ ವರದಿಯಾಗಿದೆ (11,419 ಸಾವುಗಳು ಶೇಕಡಾ 13.1), ನಂತರದ 2ನೇ ಸ್ಥಾನದಲ್ಲಿ ಕರ್ನಾಟಕ (8,797 ಸಾವುಗಳು ಶೇಕಡಾ 10.1 ರಷ್ಟಿದೆ). ರಸ್ತೆ ಅಪಘಾತ ಪ್ರಕರಣಗಳು 2020ರಲ್ಲಿ 3,54,796 ರಿಂದ 2021ರಲ್ಲಿ 4,03,116ಕ್ಕೆ ಏರಿದೆ ಕಂಡಿದೆ ಎಂದು ವರದಿ ತಿಳಿಸಿದೆ. ಸಾವು-ನೋವುಗಳು ಶೇಕಡಾ 16.8 ರಷ್ಟು ಹೆಚ್ಚಾಗಿದ್ದು, 2020ರಲ್ಲಿ 1,33,201ರಿಂದ 2021ರಲ್ಲಿ ಇದು 1,55,622ಕ್ಕೆ ಏರಿದೆ. ಇದಲ್ಲದೆ, ಪ್ರತಿ ಸಾವಿರ ವಾಹನಗಳಿಗೆ ಸಾವಿನ ಪ್ರಮಾಣ ಹೆಚ್ಚಾಗಿದೆ. ಕರ್ನಾಟಕದಲ್ಲಿ ಕಳೆದ ವರ್ಷ ಒಟ್ಟು 34,647 ಅಪಘಾತಗಳು ವರದಿಯಾಗಿದ್ದು, ಇದರಲ್ಲಿ 40,754 ಜನರು ಗಾಯಗೊಂಡಿದ್ದಾರೆ ಮತ್ತು 10,038 ಜನರು ಸಾವನ್ನಪ್ಪಿದ್ದಾರೆ!
ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವೆಂದರೆ ಅಪಾಯಕಾರಿ ಅಥವಾ ಅಜಾಗರೂಕ ಚಾಲನೆ ಮತ್ತು ಓವರ್ಟೇಕಿಂಗ್, ಇದು ದೇಶದಲ್ಲಿ 27.5ರಷ್ಟು ಸಾವುಗಳಿಗೆ ಕಾರಣವಾಗಿದೆ.
ರಸ್ತೆ ಸುರಕ್ಷತೆ ಕುರಿತು ಪ್ರತಿಕ್ರಿಯಿಸಿದ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾಫಿಕ್ ಎಜುಕೇಶನ್ (ಐಆರ್ಟಿಇ) ಅಧ್ಯಕ್ಷ ರೋಹಿತ್ ಬಲೂಜಾ, "ಟ್ರಾಮಾ ಕೇರ್ ಸೆಂಟರ್, ಏರ್ ಆಂಬ್ಯುಲೆನ್ಸ್, ಹೆದ್ದಾರಿ ಕಣ್ಗಾವಲು ವ್ಯವಸ್ಥೆ ಸೇರಿದಂತೆ ಇ-ವೇಗಳಲ್ಲಿ ಹಲವಾರು ಇತರ ರಸ್ತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.

ಪ್ರತಿ ಗಂಟೆಗೆ 18 ಪ್ರಯಾಣಿಕರು ಸಾವು
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿ-ಅಂಶಗಳ ಪ್ರಕಾರ, 2021 ರಲ್ಲಿ ಭಾರತದಾದ್ಯಂತ 1.55 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅದರ ಪ್ರಕಾರ ಪ್ರತಿದಿನ 426 ಜನರು ಸಾವನ್ನಪ್ಪುತ್ತಾರೆ ಮತ್ತು ಪ್ರತಿ ಒಂದು ಗಂಟೆಗೆ 18 ಜನರು ಸಾವನ್ನಪ್ಪುತ್ತಾರೆ. ಯಾವುದೇ ಕ್ಯಾಲೆಂಡರ್ ವರ್ಷದಲ್ಲಿ ದಾಖಲಾದ ಅತಿ ಹೆಚ್ಚು ಸಾವಿನ ಸಂಖ್ಯೆ ಇದಾಗಿದೆ ಎಂದು ಬ್ಯೂರೋ ಹೇಳಿದೆ. ವರದಿಯ ಪ್ರಕಾರ, ಶೇಕಡಾ 11 ಕ್ಕಿಂತ ಹೆಚ್ಚು ಸಾವುಗಳು ಮತ್ತು ಗಾಯಗಳು ಸೀಟ್ ಬೆಲ್ಟ್ ಬಳಸದ ಕಾರಣ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications