'ಅವನಿ' ಹತ್ಯೆ: ಮಹಾರಾಷ್ಟ್ರ ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್
ನವದೆಹಲಿ, ಫೆಬ್ರವರಿ 10: ಮಹಾರಾಷ್ಟ್ರದಲ್ಲಿ 2018ರಲ್ಲಿ ಹೆಣ್ಣುಹುಲಿ 'ಅವನಿ'ಯ ಹತ್ಯೆಗೆ ಸಂಬಂಧಿಸಿದಂತೆ ಒಂಬತ್ತು ಜನರಿಗೆ ಸುಪ್ರೀಂಕೋರ್ಟ್ ಬುಧವಾರ ನೋಟಿಸ್ ಜಾರಿಗೊಳಿಸಿದೆ. ಇವರಲ್ಲ ಹೆಚ್ಚಿನವರು ರಾಜ್ಯ ಸರ್ಕಾರದ ಅಧಿಕಾರಿಗಳಿದ್ದಾರೆ.
ಅವನಿ ಹುಲಿಯು ನಿಜಕ್ಕೂ ನರಭಕ್ಷಕಿವಾಗಿತ್ತೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಪುರಾವೆಗಳನ್ನು ಕೇಳಿರುವ ಸುಪ್ರೀಂಕೋರ್ಟ್, ಅದರ ಹತ್ಯೆಗೆ ಬಹುಮಾನ ಘೋಷಿಸಿರುವುದು ನ್ಯಾಯಾಂಗದ ಆದೇಶದ ಉಲ್ಲಂಘನೆಯ ಕೃತ್ಯ ಎಂದು ಅದು ನೋಟಿಸ್ನಲ್ಲಿ ಹೇಳಿದೆ.
'ಹುಲಿಯನ್ನು ಕೊಲ್ಲುವವರಿಗೆ ಬಹುಮಾನ ಘೋಷಿಸಬಾರದು ಎಂಬ ಆದೇಶಗಳನ್ನು ಅವರು ಉಲ್ಲಂಘಿಸಿದ್ದಾರೆ' ಎಂದು ಘಟನೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಶರದ್ ಎ ಬೊಬ್ಡೆ ಅಸಮಾಧಾನ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಕಾಸ್ ಖರ್ಗೆ ಮತ್ತು ರಾಜ್ಯ ಮುಖ್ಯ ವನ್ಯಜೀವಿ ವಾರ್ಡನ್ ಎ.ಕೆ. ಮಿಶ್ರಾ ಸೇರಿದಂತೆ ಅನೇಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಗಿದೆ. ಮುಂದೆ ಓದಿ.

ಅವನಿ ಹತ್ಯೆಗೆ ಬೃಹತ್ ಕಾರ್ಯಾಚರಣೆ
ಸುಮಾರು 13-15 ಜನರನ್ನು ಕೊಂದು ಹಾಕಿತ್ತು ಎನ್ನಲಾದ ಟಿ1 ಎಂದು ಅಧಿಕೃತವಾಗಿ ಗುರುತಿಸಲಾಗಿದ್ದ ಹೆಣ್ಣು ಹುಲಿ ಅವನಿಯನ್ನು 2018ರ ನವೆಂಬರ್ 2ರಂದು ಗುಂಡು ಹಾರಿಸಿ ಕೊಲ್ಲಲಾಗಿತ್ತು. 200 ಪ್ಯಾರಾಗ್ಲೈಡರ್ಗಳು, ಇನ್ಫ್ರಾರೆಡ್ ಕ್ಯಾಮೆರಾಗಳು ಮತ್ತು ಕೆಲ್ವಿನ್ ಕ್ಲೀನ್ ಪರಿಮಳ ದ್ರವ್ಯಗಳನ್ನು ಬಳಸಿ ಬೃಹತ್ ಬೇಟೆ ಕಾರ್ಯಾಚರಣೆ ನಡೆಸಲಾಗಿತ್ತು. ಹುಲಿಯನ್ನು ಸೆರೆಹಿಡಿಯುವ ಪ್ರಯತ್ನ ಯಶಸ್ವಿಯಾಗದಿದ್ದರೆ ಅದಕ್ಕೆ ಕಂಡಲ್ಲಿ ಗುಂಡು ಹಾರಿಸುವ ಅನುಮತಿಯನ್ನು ಅಧಿಕಾರಿಗಳಿಗೆ ಸುಪ್ರೀಂಕೋರ್ಟ್ ನೀಡಿತ್ತು.

ಸುಪ್ರೀಂಕೋರ್ಟ್ ಆದೇಶದಲ್ಲಿ ಏನಿತ್ತು?
2018ರ ಸೆಪ್ಟೆಂಬರ್ನಲ್ಲಿ ಆದೇಶ ನೀಡಿದ್ದ ಸುಪ್ರೀಂಕೋರ್ಟ್, 'ಟಿ1 ಅನ್ನು ಸೆರೆಹಿಡಿಯಬೇಕು ಮತ್ತು ಅದನ್ನು ರಕ್ಷಣಾ ಕೇಂದ್ರಕ್ಕೆ ವರ್ಗಾಯಿಸಬೇಕು. ಅದು ಯಶಸ್ವಿಯಾಗದೆ ಹೋದರೆ ಮತ್ತಷ್ಟು ಸಾವು ನೋವುಗಳನ್ನು ತಡೆಯಲು ಅದನ್ನು ಗುಂಡುಹಾರಿಸುವ ಮೂಲಕ ಸಾಯಿಸಬಹುದು... ಮೇಲಿನ ಆದೇಶವನ್ನು ನಡೆಸಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯವತ್ಮಾಲ್ ಅವರಿಗೆ ಅಧಿಕಾರ ನೀಡಲಾಗಿದೆ. ಅವರು ಹುಲಿಯನ್ನು ಹಿಡಿಯುವ ಅಥವಾ ಸಾಯಿಸುವ ಕಾರ್ಯಕ್ಕೆ ನೆರವಾಗುವ ವ್ಯಕ್ತಿಗೆ ಯಾವುದೇ ಬಹುಮಾನ ಅಥವಾ ಅದೇ ರೀತಿಯ ಭತ್ಯೆಗಳನ್ನು ಘೋಷಿಸುವಂತಿಲ್ಲ' ಎಂದು ಸ್ಪಷ್ಟವಾಗಿ ಹೇಳಿತ್ತು.

ಮರಣೋತ್ತರ ಪರೀಕ್ಷೆ ವರದಿ
ಹುಲಿ ಹತ್ಯೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪ್ರಾಣಿ ಹಕ್ಕು ಕಾರ್ಯಕರ್ತೆ ಸಂಗೀತಾ ಡೋಗ್ರಾ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮರಣೋತ್ತರ ಪರೀಕ್ಷೆ ಮತ್ತು ಡಿಎನ್ಎ ಮಾದರಿ ವರದಿಗಳನ್ನು ಉಲ್ಲೇಖಿಸಿದ್ದ ಅವರು ಟಿ1 ನರಭಕ್ಷಕವಾಗಿರಲಿಲ್ಲ ಎಂದು ವಾದಿಸಿದ್ದರು. ಈ ವಿಚಾರವನ್ನು ಪರಿಗಣಿಸಲು ನ್ಯಾಯಾಲಯ ಒಪ್ಪಿಕೊಂಡಿತ್ತು.

ಕೂದಲು ಆರು ತಿಂಗಳು ಉಳಿಯುತ್ತದೆ
'ಪ್ರಾಣಿಯೊಂದರ ಮರಣೋತ್ತರ ಪರೀಕ್ಷೆಯು ಅದು ನರಭಕ್ಷಕವೇ ಅಥವಾ ಅಲ್ಲವೇ ಎಂದು ಹೇಗೆ ತೋರಿಸುತ್ತದೆ?' ಎಂದು ಸಿಜೆಐ ಪ್ರಶ್ನಿಸಿದರು. ನರಭಕ್ಷಕ ಪ್ರಾಣಿಯ ಕರುಳಿನಲ್ಲಿ ಮನುಷ್ಯನ ಉಗುರು ಮತ್ತು ಕೂದಲು ಆರು ತಿಂಗಳವರೆಗೂ ಇರುತ್ತದೆ. ಆದರೆ ಈ ಹುಲಿಯ ಹೊಟ್ಟೆ ಖಾಲಿಯಿತ್ತು' ಎಂದು ಸಂಗೀತಾ ಹೇಳಿದ್ದಾರೆ.

ನಮಗೆ ಸ್ಪಷ್ಟ ಪುರಾವೆ ಬೇಕು
'ಆರು ತಿಂಗಳವರೆಗೂ ಹುಲಿಯ ಹೊಟ್ಟೆಯಲ್ಲಿ ಉಳಿದುಕೊಳ್ಳಬಲ್ಲ ಮನುಷ್ಯರ ಉಗುರು, ಕೂದಲು, ಹಲ್ಲು ಅಥವಾ ಇನ್ನೇನೇ ಇದ್ದರೂ ಪತ್ತೆಯಾಗಿದ್ದರ ಬಗ್ಗೆ ನಮಗೆ ಸ್ಪಷ್ಟ ಪುರಾವೆ ಬೇಕು. ಅವು ಟಿ1ರ ಕರುಳಿನಲ್ಲಿ ಪತ್ತೆಯಾಗಿಲ್ಲ. ಆಕೆ ನರಭಕ್ಷಕಿ ಎನ್ನುವುದಕ್ಕೆ ದಾಖಲೆಗಳನ್ನು ನೀಡಿ. ನಾವು ನೋಟಿಸ್ಗಳನ್ನೂ ನೀಡುತ್ತೇವೆ. ಏಕೆಂದರೆ ಈ ಬಹುಮಾನದ ಭಾಗ ಸ್ಪಷ್ಟವಾದ ಉಲ್ಲಂಘನೆಯಾಗಿದೆ' ಎಂದು ಸಿಜೆಐ ಹೇಳಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ












Click it and Unblock the Notifications