ಸುನಂದಾ ಕೊಲೆ ಪ್ರಕರಣ, ತನಿಖಾಧಿಕಾರಿಗೆ ಕಬ್ಬಿಣದ ಕಡಲೆ
ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪ್ರಕರಣ ಈಗ ಕೊಲೆ ಎಂದು ಸ್ಪಷ್ಟವಾಗಿದೆ. ಈ ಹತ್ಯೆ ಪ್ರಕರಣದ ತನಿಖೆ ಹತ್ತು ಹಲವು ಆಯಾಯ ಪಡೆದುಕೊಂಡಿದೆ. ಸುನಂದಾ ಸಾವಿಗೆ ಕಾರಣ ಎನ್ನಲಾದ ಅಣು ವಿಕಿರಣ ಘಟಕದ ಉತ್ಪನ್ನ ಪೊಲೊನಿಯಂ 210,ಥಾಲಿಯಂ,ಹಾವಿನ ವಿಷಗಳು ಬಂದಿದ್ದು ಎಲ್ಲಿಂದ? ವಿಧಿ ವಿಜ್ಞಾನ ಇಲಾಖೆ, ಏಮ್ಸ್ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನು ಹೇಳಲಾಗಿದೆ? ತನಿಖೆ ಎತ್ತ ಸಾಗಿದೆ ಎಂಬುದರ ಬಗ್ಗೆ ವರದಿ ಇಲ್ಲಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ವಿಧಿ ವಿಜ್ಞಾನ ಇಲಾಖೆಯ ಪ್ರೊಫೆಸರ್, ಪದ್ಮ ಭೂಷಣ ಪಿ ಚಂದ್ರಶೇಖರನ್ ಅವರು ಸುನಂದಾ ಪುಷ್ಕರ್ ಪ್ರಕರಣ ಅಷ್ಟು ಸುಲಭವಾಗಿಲ್ಲ ಎಂದು ಒನ್ ಇಂಡಿಯಾ ಪ್ರತಿನಿಧಿಗೆ ವಿವರಿಸಿದ್ದಾರೆ. ಶವ ಇಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಹೆಚ್ಚಿನ ಮಾಹಿತಿ ಕಲೆ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ.
ಪೊಲೊನಿಯಂ 210
ಪರಮಾಣು ರಿಯಾಕ್ಟರ್ ನ ಉತ್ಪನ್ನವಾದ ಪೊಲೊನಿಯಂ 210 ಮೂಲವನ್ನು ಸಂಶೋಧಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ತನಕದ ತನಿಖೆ ಜಾಡನ್ನು ಹಿಡಿದು ನೋಡಿದರೆ ವಿದೇಶಕ್ಕೆ ದಾರಿ ತೋರಿಸುತ್ತದೆ. [ಸುನಂದಾ ಪುಷ್ಕರ್ ಆತ್ಮಹತ್ಯೆಯಲ್ಲ, ಕೊಲೆ : ಪೊಲೀಸ್]
ಭಾರತದಲ್ಲಿ ಈ ಉತ್ಪನ್ನವನ್ನು ವಿಶ್ಲೇಷಿಸುವುದು ಸಾಧ್ಯವಿದೆ. ಟ್ರಾಂಬೆಯಲ್ಲಿ ಇದಕ್ಕೆ ವ್ಯವಸ್ಥೆಯಿದೆ. ಸಾಮಾನ್ಯವಾಗಿ ವಿಸೇರಾದಲ್ಲಿ ವಿಷ ಹುಡುಕುವಾದ ಪೊಲೊನಿಯಂನಂಥ ವಸ್ತು ಇರುವುದರ ಬಗ್ಗೆ ಯಾರು ಚಿಂತಿಸುವುದಿಲ್ಲ ಅಥವಾ ಈ ಬಗ್ಗೆ ಯೋಚಿಸುವುದೂ ಇಲ್ಲ. ಹೀಗಾಗಿ ಇದು ಕಷ್ಟಕರ ಪ್ರಕರಣವಾಗಿದೆ.

ಪಾರ್ಥೀವ ಶರೀರ ಇದ್ದಿದ್ದರೆ
ಪಾರ್ಥೀವ ಶರೀರ ಇದ್ದಿದ್ದರೆ ಸಾಕಷ್ಟು ಮಾಹಿತಿ ನಮಗೆ ಸಿಗುತ್ತಿತ್ತು. ಡೆಡ್ ಬಾಡಿ ಎಲ್ಲ ಕಥೆಯನ್ನು ಹೇಳಿಬಿಡುತ್ತದೆ ಕೊಲೆ ಅಥವಾ ಆತ್ಮಹತ್ಯೆ ಎಂಬುದು ಸುಲಭಕ್ಕೆ ತಿಳಿದು ಬರುತ್ತದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲೂ ಮಾನವ ಬಾಂಬರ್ ಬಳಕೆಯಾಗಿದ್ದರಿಂದ ನಮ್ಮ ಗಮನ ಮೃತದೇಹ ಕಲೆ ಹಾಕುವತ್ತಲೇ ಇತ್ತು. ಮೃತ ದೇಹ ಇದ್ದರೆ ಇಂಥ ಪ್ರಕರಣದಲ್ಲಿ ತನಿಖೆ ಮುಂದುವರೆಯಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ತುಂಬಾ ಕಷ್ಟಕರ.
ಅದರಲ್ಲೂ ವಿಕಿರಣ ಉತ್ಪನ್ನಗಳ ಬಗ್ಗೆ ಮಾಹಿತಿ ಸಿಗದ ಕಾರಣ ಬೇರೆ ಸಾಕ್ಷಿಗಳತ್ತ ತನಿಖೆ ನಡೆಸಬೇಕಾಗುತ್ತದೆ. ಪೊಲೊನಿಯಂ ಮೂಲ ಎಲ್ಲಿ? ಅದನ್ನು ಯಾರು ತಂದರು? ಇತ್ಯಾದಿ ಸದ್ಯಕ್ಕೆ ಈ ಪ್ರಕರಣ ಈ ಜಾಡಿನಲ್ಲೇ ಸಾಗಬೇಕಿದೆ. [ಸುನಂದಾ ಕೊಲೆ ದೃಢಪಡಿಸಿದ್ದು ಗಾಯ ಸಂ. 10]
ವೈದ್ಯಕೀಯ ವರದಿ ಪೊಲೊನಿಯಂ 210
ಮೃತದೇಹದಲ್ಲಿ ಪೊಲೊನಿಯಂ 210 ಇದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಗೆ ನಿರ್ಣಯಕ್ಕೆ ಬಂದರು ಎಂಬುದರ ಬಗ್ಗೆ ವಿವರಣೆ ಅಗತ್ಯವಿದೆ. ಏಕೆಂದರೆ ಸುಲಭಕ್ಕೆ ಪೊಲೊನಿಯಂ ಇರುವಿಕೆ ಪತ್ತೆಯಾಗುವುದಿಲ್ಲ.
ಮೊದಲಿಗೆ ದೇಹದಲ್ಲಿನ ಪರಮಾಣು ಚಟುವಟಿಕೆಯನ್ನು ಸಾಧನವೊಂದರ ಮೂಲಕ ಪರೀಕ್ಷಿಸಬೇಕು. ಗಾಮಾ ಪದಾರ್ಥವಾದರೆ ಸುಲಭಕ್ಕೆ ನಿಮ್ಮ ಎಣಿಕೆಗೆ ಸಿಗುತ್ತದೆ. ಆಲ್ಫಾ ಕಣಗಳಾದರೆ ಅಳೆಯುವುದು ತುಂಬಾ ಕಷ್ಟ.ಹೀಗಾಗಿ ವಿಸೇರಾದಲ್ಲಿ ಕಂಡು ಬಂದಿರುವ ಪದಾರ್ಥಗಳ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯ. ಇದು ತನಿಖಾಧಿಕಾರಿಗಳಿಗೆ ಕಬ್ಬಿಣದ ಕಡಲೆಯಾಗಬಲ್ಲದು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications