ಶ್ರೀನಗರ ದಾಳಿ: ಇಬ್ಬರು ಉಗ್ರರ ಹತ್ಯೆ, ಓರ್ವ ಬಿಎಸ್ಎಫ್ ಯೋಧ ಹುತಾತ್ಮ
ಶ್ರೀನಗರ, ಅಕ್ಟೋಬರ್ 3: ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ವಿಮಾನ ನಿಲ್ದಾಣದ ಸಮೀಪ ಇಂದು ಬೆಳಿಗ್ಗೆ ಬಿಎಸ್ಎಫ್ ಪಡೆಗಳ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಬಿಎಸ್ಎಫ್ ಜವಾನ ಅಸುನೀಗಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಉಗ್ರರು ಬಳಸುತ್ತಿದ್ದ ಸುರಂಗ ಪತ್ತೆ
ಬಿಎಸ್ಎಫ್ ನ 182ನೇ ಬೆಟಾಲಿಯನ್ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಗಡಿ ಭದ್ರತಾ ಪಡೆ ಯೋಧರು ಗಾಯಗೊಂಡಿದ್ದರು. ಇದರಲ್ಲೊಬ್ಬರು ಸೈನಿಕರು ಗಾಯದಿಂದ ಅಸುನೀಗಿದ್ದಾರೆ. ಇನ್ನು ಇಬ್ಬರು ಉಗ್ರನನ್ನು ಸೈನಿಕರು ಹೊಡೆದುರುಳಿಸಿದ್ದಾರೆ.ಇನ್ನೋರ್ವ ಉಗ್ರ ಬಿಎಸ್ಎಫ್ ಕ್ಯಾಂಪಸ್ ನಲ್ಲಿರುವ ಕಟ್ಟಡದೊಳಕ್ಕೆ ಅವಿತು ಕುಳಿತಿದ್ದು ಕಾರ್ಯಾಚರಣೆ ಮುಂದುವರಿದಿದೆ.
ಬೆಳಿಗ್ಗೆ 4.30 ನಿಮಿಷಕ್ಕೆ ಉಗ್ರರು ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಬಿಎಸ್ಎಫ್ ಕ್ಯಾಂಪಸ್ ಪ್ರವೇಶಿಸಿದ್ದಾರೆ. ನಂತರ ಬಿಎಸ್ಎಫ್ ಯೋಧರ ಮೇಲೆ ದಾಳಿ ನಡೆಸಲು ಆರಂಭಿಸಿದ್ದಾರೆ. ಈಗಾಗಲೇ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇನ್ನೋರ್ವ ಉಗ್ರನಿಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಜಮ್ಮು -ಕಾಶ್ಮೀರ: ಭಯೋತ್ಪಾದಕರ ಗುಂಡಿನ ದಾಳಿಗೆ ಬಿಎಸ್ ಎಫ್ ಜವಾನ ಬಲಿ
ದಾಳಿ ಬೆನ್ನಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ರಸ್ತೆಗಳನ್ನು ವಾಹನ ದಟ್ಟಣೆ ಉಂಟಾಗಿತ್ತು.
#SrinagarTerrorAttack: One BSF personnel lost his life, 2 terrorists killed. Operation underway. (Visuals deferred by unspecified time) pic.twitter.com/DWbPmZCk24
— ANI (@ANI) October 3, 2017
ಇದೀಗ ಸೆಕ್ಯುರಿಟಿ ಕ್ಲಿಯರೆನ್ಸ್ ಸಿಕ್ಕಿರುವ ಹಿನ್ನಲೆಯಲ್ಲಿ ವಿಮಾನಯಾನ ಸೇವೆಗಳು ಆರಂಭಗೊಂಡಿವೆ. ಇನ್ನು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆ ಬಗ್ಗೆ ಚರ್ಚಿಸಲು ಇಂದು ಗೃಹ ಸಚಿವ ರಾಜನಾಥ್ ಸಿಂಗ್ ಉನ್ನತ ಮಟ್ಟದ ಸಭೆ ಕರೆದಿದ್ದಾರೆ.