ಚಿತ್ರ ಸಂಪುಟ: ಅಯೋಧ್ಯೆ ಸೇರಿದಂತೆ ವಿವಿಧೆಡೆ ರಾಮನವಮಿ
ತಮಿಳುನಾಡಿನ ರಾಮೇಶ್ವರಂ ಸೇರಿದಂತೆ, ದೇಶದ ಮೂಲೆಮೂಲೆಯಲ್ಲಿರುವ ರಾಮನ ದೇಗುಲಗಳಲ್ಲಿ ವಿವಿಧ ರೀತಿಯ ಪೂಜೆ, ಪುನಸ್ಕಾರ, ಅಲಂಕಾರಗಳು ಭಕ್ತ ಸಮೂಹಕ್ಕೆ ತೃಪ್ತಿ ನೀಡಿದವು.
ಶ್ರೀರಾಮ ನವಮಿಯನ್ನು ಏಪ್ರಿಲ್ 5ರಂದು ಭಾರತದ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿಯೂ ಈ ಹಬ್ಬದ ಸಡಗರ ಜೋರಾಗಿತ್ತು.
ತಮಿಳುನಾಡಿನ ರಾಮೇಶ್ವರಂ ಸೇರಿದಂತೆ, ದೇಶದ ಮೂಲೆಮೂಲೆಯಲ್ಲಿರುವ ರಾಮನ ದೇಗುಲಗಳಲ್ಲಿ ವಿವಿಧ ರೀತಿಯ ಪೂಜೆ, ಪುನಸ್ಕಾರ, ಅಲಂಕಾರಗಳು ಭಕ್ತ ಸಮೂಹಕ್ಕೆ ತೃಪ್ತಿ ನೀಡಿದವು.
ರಾಮನ ದೇವಾಲಯಗಳಷ್ಟೇ ಅಲ್ಲ, ವಿಷ್ಣುವಿಗೆ ಸಂಬಂಧಿಸಿದ ಎಲ್ಲಾ ದೇಗುಲಗಳಲ್ಲಿ, ಪುಣ್ಯ ಕ್ಷೇತ್ರಗಳಲ್ಲಿ ರಾಮ ನವಮಿಯನ್ನು ಆಚರಿಸಲಾಯಿತು. ರಾಮಭಕ್ತನಾದ ಹನುಮಂತನ ದೇಗುಲಗಳಲ್ಲಿಯೂ ರಾಮ ನವಮಿಯನ್ನು ಅತ್ಯಂತ ಧಾರ್ಮಿಕವಾಗಿ ಆಚರಿಸಲಾಯಿತು. ಇವುಗಳಲ್ಲಿ ತಿರುಪತಿಯ ವೆಂಕಟೇಶ್ವರ ಸ್ವಾಮಿ, ಮೇಲುಕೋಟೆಯ ಚೆಲುವ ನಾರಾಯಣ ಸ್ವಾಮಿ ದೇಗುಲಗಳು ಪ್ರಮುಖವಾದವು.
ಇಷ್ಟೇ ಅಲ್ಲದೆ, ಕೆಲವಾರು ನದೀ ಸಂಗಮಗಳಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಧನ್ಯತಾ ಭಾವ ಪಡೆದರು.
ಈ ಸಂದರ್ಭದಲ್ಲಿ ಅಯೋಧ್ಯೆ ಹಾಗೂ ಮುಂತಾದೆಡೆ ಏಪ್ರಿಲ್ 5ರ ಮುಂಜಾನೆ ನಡೆದ ರಾಮನವಮಿ ಪೂಜೆಗಳ, ಭಕ್ತ ಸಮೂಹದ ಕೆಲ ಫೋಟೋಗಳು ಇಲ್ಲಿ ನಿಮಗಾಗಿ.

ಬಿಗಿ ಭದ್ರತೆ
ಅಯೋಧ್ಯೆಯಲ್ಲಿರುವ ಶ್ರೀ ರಾಮ ದೇಗುಲದಲ್ಲಿ ಅಪಾರ ಭಕ್ತ ಸಮೂಹ ದೇಶದ ನಾನಾ ಭಾಗಗಳಿಂದ ಆಗಮಿಸಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮಂದಿರದಲ್ಲಿ ಭಾರೀ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಧನ್ಯತಾ ಭಾವ
ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದಲ್ಲಿರುವ ಮುದ್ದು ಮೊಗದ ಶ್ರೀರಾಮ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರ ಆಯಾಸವನ್ನು ಕ್ಷಣಮಾತ್ರದಲ್ಲೇ ಮಾಯವಾಗಿಸುವ ಭಾವ ಈ ಮೂರ್ತಿಯದ್ದು.

ಮೆರವಣಿಗೆ
ಶ್ರೀರಾಮನವಮಿ ಪ್ರಯುಕ್ತ ತಮಿಳುನಾಡಿನ ರಾಮೇಶ್ವರಂನಲ್ಲಿರುವ ರಾಮ ದೇಗುಲದ ಮುಂದೆ ಆರಂಭಗೊಂಡ ಉತ್ಸವ. ಈ ಉತ್ಸವದಲ್ಲಿ ಪಾಲ್ಗೊಂಡಿದ್ದ ನಾನಾ ಭಕ್ತರು ಶ್ರೀರಾಮ ಭಜನೆಗಳನ್ನು ಹೇಳುತ್ತಾ ಸಾಗಿದ್ದು ಆಕರ್ಷಣೀಯವಾಗಿತ್ತು.

ವಾರಣಾಸಿಗೆ ರಾಮ ಭಕ್ತರು
ಶ್ರೀರಾಮನವಮಿ ಪ್ರಯುಕ್ತ ವಾರಣಾಸಿಯಲ್ಲಿನ ಗಂಗಾ ನದಿಯಲ್ಲಿ ಭಕ್ತ ಜನರು ಪವಿತ್ರ ಸ್ನಾನ ಮಾಡಿದರು. ಪೂಜೆಯ ನಂತರ ಕ್ಷೇತ್ರದಲ್ಲಿರುವ ಶ್ರೀರಾಮ ಸೇರಿದಂತೆ ನಾನಾ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

ಸ್ನಾನ, ಪೂಜೆ
ಶ್ರೀರಾಮನವಮಿ ಪ್ರಯುಕ್ತ ವಾರಣಾಸಿಗೆ ಪವಿತ್ರ ಸ್ನಾನಕ್ಕಾಗಿ ಆಗಮಿಸಿದ ಭಕ್ತ ಸಮೂಹ. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ಗಂಗೆಯಲ್ಲಿ ಮಿಂದು ಧನ್ಯತಾ ಭಾವ ಪಡೆದರು.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications