11300 ಕೋಟಿ ರೂ ಸ್ಪೆಕ್ಟ್ರಂ ಹರಾಜು: ಆದಾಯ ಯಾರಿಗೆ?

ಆದರೆ ಈ ಸಂದರ್ಭದಲ್ಲಿ 2ಜಿ ಸ್ಪೆಕ್ಟ್ರಂ ಹಗರಣವೇ ದುಃಸ್ವಪ್ನವಾಗಿ ಕಾಣುತ್ತಿದೆ. ಸರಕಾರದ ಸೇವೆಯೊಂದು ಲಕ್ಷಾಂತರ ಕೋಟಿ ರೂ. ಭ್ರಷ್ಟಚಾರಕ್ಕೆ ಕಾರಣವಾಗಿದ್ದು ನಿಜಕ್ಕೂ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. 2ಜಿ ಸ್ಪೆಕ್ಟ್ರಂ ಹಗರಣದ ಸತ್ಯಾಸತ್ಯತೆ ಬಹಿರಂಗವಾಗುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಈ ಮಧ್ಯೆ ಮತ್ತೊಂದು ಸ್ಪೆಕ್ಟ್ರಂ ಹರಾಜು ನಡೆದಿದೆ.
ಹಾಗಂತ ಇಲಾಖೆ ಸುಮ್ಮನೆ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ತನ್ನ ಅಧೀನದಲ್ಲಿರುವ ಸ್ಪೆಕ್ಟ್ರಂ ಅನ್ನು ಖಾಸಗಿ ಸೇವಾ ಕಂಪನಿಗಳಿಗೆ ವಿತರಿಸಲೇಬೇಕು.
ಗಮನಾರ್ಹವೆಂದರೆ ಈ ಬಾರಿ ಸ್ಪೆಕ್ಟ್ರಂ ಹರಾಜಿನಿಂದ 11,300 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ಇದರಲ್ಲಿ ಒಂದು ನಯಾ ಪೈಸೆಯೂ ಲಂಚದ ಲೆಕ್ಕಕ್ಕೆ ಹೋಗದೆ ಅಷ್ಟೂ ಸರಕರಿ ಖಜಾನೆ ಸೇರಲಿ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯ ಆಶಯವಾಗಿದೆ.
ಆದರೆ ಹಿಂದಿನ ಅನುಭವ ಮತ್ತು ಮುಂದಿರುವ ಲೋಕಸಭಾ ಚುನಾವಣೆಯನ್ನು ಗಮನಿಸಿದಾಗ ಇದು ಸಾಧ್ಯವಾದೀತಾ? ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆ.
ಇದು ದೇಶದಲ್ಲಿ ನಡೆಯುತ್ತಿರುವ ಮೂರನೆಯ ಸುತ್ತಿನ ಸ್ಪೆಕ್ಟ್ರಂ ಹರಾಜು. ಎಂಟು ಟೆಲಿಕಾಂ ಕಂಪನಿಗಳು ಸ್ಪೆಕ್ಟ್ರಂ ಬೇಡಿಕೆಯಿಟ್ಟು, ಹರಾಜಿನಲ್ಲಿ ಪಾಲ್ಗೊಂಡಿವೆ. ಈ ಹರಾಜಿನಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಕನಿಷ್ಟ 11,300 ಕೋಟಿ ರೂ. ಸಂದಾಯವಾಗಲಿದೆ.
ದೂರ ಸಂಪರ್ಕ ಇಲಾಖೆಯು (Department of Telecom) ಸುಮಾರು 1800 ಮೆಗಾ ಹರ್ಟ್ಸ್ (MHz) ಬ್ಯಾಂಡ್ ನಲ್ಲಿ 385 ಮೆಗಾ ಹರ್ಟ್ಸ್ ರೇಡಿಯೋ ತರಾಂಗಂತರ ಹಾಗೂ 900 ಮೆಗಾ ಹರ್ಟ್ಸ್ ಬ್ಯಾಂಡ್ನಲ್ಲಿ 46 ಮೆಗಾ ಹರ್ಟ್ಸ್ ತರಂಗಾಂತರವನ್ನು ಹರಾಜಿಗೆ ಇಟ್ಟಿದೆ.
ಪ್ರಸಕ್ತ ವರ್ಷ ಇಷ್ಟೊಂದು ಪ್ರಮಾಣದ ಸ್ಪೆಕ್ಟ್ರಂ ಹರಾಜಿನಿಂದ ಒಂದು ಬಾರಿ ಪಾವತಿಸುವ ಸ್ಪೆಕ್ಟ್ರಂ ಶುಲ್ಕ, ವಾರ್ಷಿಕ ಪರವಾನಿಗಿ ಶುಲ್ಕ ಮತ್ತು ಹಾಲಿ ಹರಾಜು ಮೊತ್ತ ಸೇರಿ ಒಟ್ಟು 40,874.50 ಕೋಟಿ ರೂ. ಆದಾಯ ಬರುವ ಅಂದಾಜಿದೆ.
-
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ?












Click it and Unblock the Notifications