ದಕ್ಷಿಣ ಗುಜರಾತ್‌ನಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿದ ದುರಂತ ನಾಯಕ!

ಗಾಂಧಿನಗರ, ನವೆಂಬರ್ 23: ದಟ್ಟವಾದ ಕಬ್ಬಿನ ಗದ್ದೆಗಳು ಮತ್ತು ಮಣ್ಣಿನ ಗುಡಿಸಲುಗಳ ನಡುವಿನ ಕಿರಿದಾದ ದಾರಿಯಲ್ಲಿ ಹಾದು ಹೋಗುವಾಗ ಸಗಣಿಯ ಕೊಳೆತ ವಾಸನೆ, ಹೊಗೆ ಮತ್ತು ನವೆಂಬರ್ ಚಳಿಯು ಮುನ್ಸೂಚನೆಯ ಮಿಶ್ರಣ. ಇದು ದಕ್ಷಿಣ ಗುಜರಾತ್‌ನ "ರಾಬಿನ್ ಹುಡ್" ಎಂದು ಕರೆಯಲ್ಪಡುವ ಭರೂಚ್ ಜಿಲ್ಲೆಯ ವಸ್ನಾ ಗ್ರಾಮದ ಚಿತ್ರಣ.

ಛೋಟು ವಾಸವಾ ಅವರ ಗ್ರಾಮವು ಇದೀಗ ತನ್ನ ರಾಜಕೀಯ ಬೆಳವಣಿಗೆಯಿಂದ ಸುದ್ದಿ ಮಾಡಿದೆ. ದಶಕಗಳ ನಂತರ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಛೋಟು ವಾಸವಾ ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ.

ಭಾರತೀಯ ಬುಡಕಟ್ಟು ಪಕ್ಷವು ಅಧಿಕೃತವಾಗಿ ಯಾವುದೇ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗಲಿಲ್ಲ. ಛೋಟು ವಾಸವಾ ಅವರ ಬೆಂಬಲಿಗರೇ ಆಮ್ ಆದ್ಮಿ ಪಕ್ಷದ ಕಡೆಗೆ ಮುಖ ಮಾಡಿದ್ದು, ಅವರನ್ನು ಏಕಾಂಗಿಯಾಗಿಸಿದೆ. ಅದಾಗ್ಯೂ, ಡಿಸೆಂಬರ್‌ನಲ್ಲಿ ನಡೆಯಲಿರುವ ಚುನಾವಣೆಗಾಗಿ ಛೋಟು ವಾಸವಾ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

South Gujarat Chhotu Vasava fights as independent candidate in Assembly Election

ಮನೆಯಲ್ಲಿದ್ದುಕೊಂಡೇ ಆಡಳಿತ: ದಶಕಗಳಿಂದ ಛೋಟು ವಾಸವಾ ತನ್ನ ಕೋಟೆಯಿಂದ ಹಳ್ಳಿಯನ್ನು ಆಳ್ವಿಕೆ ಮಾಡುತ್ತಿದ್ದರು. ಒಬ್ಬರು ತನ್ನ ಮನೆಗೆ ಪ್ರವೇಶಿಸುತ್ತಿದ್ದಂತೆ, ಗುಜರಾತ್‌ನಲ್ಲಿ ಒಂದೆರಡು ಸ್ಥಾನಗಳನ್ನು ಗೆದ್ದ ನಾಯಕನ ಆಜ್ಞೆಗಾಗಿ ಒಂದೆರಡು ಐಷಾರಾಮಿ ಕಾರುಗಳು ಕಾಯುತ್ತಿದ್ದವು. ರಾಜಸ್ಥಾನದವರೆಗೂ ತನ್ನ ಹೆಜ್ಜೆಗುರುತನ್ನು ಹೊಂದಿರುವ ನಾಯಕನು ಕಳೆದ ಐದು ವರ್ಷಗಳಲ್ಲಿ ಜನತಾ ದಳ (ಯುನೈಟೆಡ್) ಜೊತೆಗಿನ ಸುದೀರ್ಘ ಒಡನಾಟವನ್ನು ತ್ಯಜಿಸಿದ್ದರು. ಆದರೆ ಅವು ಹಿಂದಿನ ಕಾಲದ ಕಥೆಯಾಗಿದೆ.

ಕೊನೆಯ ಬಾರಿ ವಿಧಾನಸಭೆ ಪ್ರವೇಶಿಸುವ ಬಯಕೆ: ಈ ಬಾರಿ ಜಗಡಿಯಾದಿಂದ ಛೋಟು ವಾಸವಾ ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿದ್ದು, ಅವರು ಕೊನೆಯ ಬಾರಿಗೆ ವಿಧಾನಸಭೆಗೆ ಪ್ರವೇಶಿಸುವುದಕ್ಕೆ ಆಶಿಸಿದ್ದಾರೆ. ಆದರೂ ಅವರ ಪಕ್ಷಕ್ಕೆ ಅಧಿಕೃತವಾಗಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ದುರಂತದ ಉತ್ತಮ ನಾಯಕನಂತೆ ಕಾಣಿಸಿಕೊಳ್ಳುವ ಛೋಟು ವಾಸವಾ ತನ್ನ ಭದ್ರಕೋಟೆಯಾದ ದಕ್ಷಿಣ ಗುಜರಾತ್‌ನ ಬುಡಕಟ್ಟು ಪ್ರದೇಶದಲ್ಲೇ ಈ ಹಿಂದೆ ಸೋಲಿಸಲ್ಪಟ್ಟಿದ್ದರು.

ಆಡಳಿತದ ಅತ್ಯಂತ ತೀವ್ರ ಟೀಕಾಕಾರರಲ್ಲಿ ಒಬ್ಬರಾದ ವಾಸವಾ ಅವರನ್ನು ರಾಜ್ಯದ ಎಲ್ಲಾ ಪಕ್ಷಗಳು ಸಂಪರ್ಕಿಸಿದವು. ಆದರೆ ರಾಜಕಾರಣಿ ಯಾವುದೇ ಔಪಚಾರಿಕ ಸಹವಾಸವಿಲ್ಲದೆ ಸ್ವಲ್ಪ ಕಾಲ ಕಾಂಗ್ರೆಸ್‌ನೊಂದಿಗೆ ವಾಗ್ದಾಳಿ ನಡೆಸಿದರು. 2017ರಲ್ಲಿ, ಅವರು ಶಾಸಕರಾಗಿದ್ದ ತಮ್ಮ ಪುತ್ರನೊಂದಿಗೆ ರಾಜ್ಯಸಭಾ ಚುನಾವಣೆಯ ಸಮಯದಲ್ಲಿ ಮತದಾನದಿಂದ ದೂರವಿದ್ದರು.

ಎಎಪಿಗೆ ಮನೆ ಬಾಗಿಲು ತೆರೆದಿದ್ದ ವಾಸವಾ: ತೀರಾ ಇತ್ತೀಚೆಗೆ, ಛೋಟು ವಾಸವಾ ಆಲ್ ಇಂಡಿಯಾ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮತ್ತು ನಂತರ ಎಎಪಿಗೆ ತಮ್ಮ ಮನೆಯ ಗೇಟ್‌ಗಳನ್ನು ತೆರೆದಿದ್ದರು. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಜಡ್ಗಾಡಿಯಾದ ಮೆರವಣಿಗೆಯಲ್ಲೂ ಕಾಣಿಸಿಕೊಂಡಿದ್ದರು. ಆದರೆ ನಂಟು ಶೀಘ್ರದಲ್ಲೇ ಅಂತ್ಯವಾಯಿತು. ಆದರೆ ಅದು ವಾಸವಾ ನಿರ್ಧಾರವನ್ನು ಲೆಕ್ಕಿಸದೇ ಅವರ ಹಿರಿಯ ಮಗ ಮಹೇಶ್ ತನ್ನ ಆಕಾಂಕ್ಷೆಯಂತೆ ಆಪ್ ಜೊತೆಗೆ ಸೇರಿಕೊಂಡರು.

ಛೋಟು ವಾಸವಾ ಉತ್ತರಾಧಿಕಾರಿಯಾಗಿದ್ದ ಮಹೇಶ್: ಛೋಟು ವಾಸವಾ ಉತ್ತಮ ರಾಜಕೀಯ ವಾರಸುದಾರನಂತೆ ಕಾಣಿಸಿಕೊಂಡಿದ್ದ ಮಹೇಶ್ ವರ್ಷಗಳ ಕಾಲ ಛೋಟು ಅವರ ಕೋಟೆಯಾಗಿದ್ದ ಜಗಾಡಿಯಾದಲ್ಲಿ ಏಕೈಕ ಬಿಟಿಪಿ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಮಹೇಶ್ ಅವರ ಆಪ್ತರಾಗಿದ್ದ ಚೈತರ್ ವಾಸವಾ ಅವರು ಎಎಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದೀಗ ಛೋಟು ವಾಸವಾ ಕೂಡ ಜಗಾಡಿಯಾದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಒಂದೆರಡು ದಿನಗಳ ರಾಜಕೀಯ ತಿಕ್ಕಾಟದ ನಂತರದಲ್ಲಿ ಪುತ್ರ ಮಹೇಶ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು. ಛೋಟು ಈಗ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ, ಕಣದಲ್ಲಿ ಏಕೈಕ BTP ಅಭ್ಯರ್ಥಿಯಾಗಿ ಉಳಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+