ವಿಮಾನಕ್ಕೆ ಗಗನಸಖಿಯಾದರೆ, ರೈಲಿನ ಸಖಿಗೆ ಹೆಸರೇನು?
ನವದೆಹಲಿ, ಫೆ. 21: ವಿಮಾನಯಾನದಲ್ಲಿ ಗಗನಸಖಿಯರಿರುವಂತೆ ಪ್ರಯಾಣಿಕರ ಸೌಲಭ್ಯ ನೋಡಿಕೊಳ್ಳಲು ಎಕ್ಸ್ ಪ್ರೆಸ್ ರೈಲುಗಳಲ್ಲಿ ಸಖಿಯನ್ನು ನೇಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ವಿಷಯ ಕೇಳಿ ಥ್ರಿಲ್ ಆದ ಜನತೆ, ರೈಲು ಸಖಿಗೆ ಏನು ಕರೆಯಬಹುದು ಎಂದು ಯೋಚಿಸುತ್ತಿದ್ದಾರೆ.
ದೆಹಲಿ- ಆಗ್ರಾ ನಡುವೆ ಗಂಟೆಗೆ 160 ಕಿ,ಮೀ ಪ್ರತಿ ಗಂಟೆ ವೇಗದಲ್ಲಿ ಸಂಚರಿಸುವ ಗತಿಮಾನ್ ಎಕ್ಸ್ಪ್ರೆಸ್ ರೈಲಿನಲ್ಲಿ ಕಾರ್ಯನಿರ್ವಹಿಸಲು 'ಹೋಸ್ಟೆಸ್' ರನ್ನು ಶೀಘ್ರವೇ ನೇಮಿಸಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭವಾಗಲಿದೆ. ಫೆ.25ರಂದು ಮಂಡನೆಯಾಗಲಿರುವ ರೈಲ್ವೆ ಬಜೆಟ್ನಲ್ಲಿ ಸಚಿವ ಸುರೇಶ್ಪ್ರಭು ಇದನ್ನು ಘೋಷಿಸಲಿದ್ದಾರೆ. [ಚುಕು ಬುಕು ಸಖಿ, ರೈಲು ಸಖಿ, ಆಹಾ! ಎಷ್ಟೊಂದು ಹೆಸರು]
ಈ ಏಕ್ಸ್ ಪ್ರೆಸ್ ರೈಲಿನಲ್ಲಿ ಟಿವಿ ಸೇವೆ, ಅಪಾಯ ಸೂಚನೆ ವ್ಯವಸ್ಥೆ, ತುರ್ತು ಪರಿಸ್ಥಿತಿಯಲ್ಲಿ ಬ್ರೇಕಿಂಗ್ ವ್ಯವಸ್ಥೆ, ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ,ಕೇಟರಿಂಗ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯ ಗಳು ಇರಲಿದೆ.
ಒಂದು ತಾಸಿಗೆ 160 ಕಿ.ಮೀ. ಓಡುವ 5,4000 ಎಚ್ ಪಿ ಇಂಜಿನ್ ವಾಹನದಲ್ಲಿ 12 ಕೋಚುಗಳಿರುತ್ತದೆ. ಶತಾಬ್ದಿ ಏಕ್ಸ್ ಪ್ರೆಸ್ 200 ಕಿಲೋ ಮೀಟರ್ ಅಂತರವನ್ನು 120 ನಿಮಿಷಗಳಲ್ಲಿ ಕ್ರಮಿಸಿದರೆ, ಗತಿಮಾನ್ ಎಕ್ಸ್ ಪ್ರೆಸ್ 105 ನಿಮಿಷಗಳಲ್ಲಿ ಕ್ರಮಿಸುವ ಸಾಧ್ಯತೆಯಿದೆ. ಗಗನಸಖಿರಂತೆ ರೈಲಿನ ಸಖಿಯರ ಬಗ್ಗೆಇನ್ನಷ್ಟು ವಿವರ ಮುಂದಿದೆ ಓದಿ...

9 ರೈಲು ಮಾರ್ಗಗಳಲ್ಲಿ ರೈಲು ಸಖಿ ಸೌಲಭ್ಯ
ಕಾನ್ಪುರ-ದೆಹಲಿ, ಚಂಡೀಗಢ-ದೆಹಲಿ, ಹೈದರಾಬಾದ್-ಚೆನ್ನೈ, ನಾಗಪುರ್-ಬಿಲಾಸ್ಪುರ್, ಗೋವಾ-ಮುಂಬೈ, ನಾಗಪುರ ಸಿಕಂದರಾಬಾದ್ ಮಾರ್ಗಗಳಲ್ಲಿ ಇನ್ನೂ 9 ಇಂಥ ರೈಲುಗಳನ್ನು ಓಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ರಯಾಣ ದರ ಶತಾಬ್ದಿ ಎಕ್ಸ್ಪ್ರೆಸ್ ಗಿಂತ ಹೆಚ್ಚು
ಪ್ರಯಾಣದರ ಶತಾಬ್ದಿ ಎಕ್ಸ್ಪ್ರೆಸ್ ದರಕ್ಕಿಂತ ಶೇ.25ರಷ್ಟು ಹೆಚ್ಚಿರುತ್ತದೆ. ಪೂರ್ತಿ ಎಸಿ ಚೇರ್ ಕ್ಲಾಸ್ ಗತಿಮಾನ್ ಎಕ್ಸ್ ಪ್ರೆಸ್ ಪ್ರಯಾಣ ದರ 690ರು ಆಗಲಿದೆ. ಎಕ್ಸಿಕ್ಯೂಟಿವ್ ಕ್ಲಾಸ್ ನಲಿ ಪ್ರಯಾಣಿಸಲು 1,365 ರು ತೆರಬೇಕಾಗುತ್ತದೆ. ದೆಹಲಿ-ಅಗ್ರಾ ಶತಾಬ್ದಿ ಎಕ್ಸ್ ಪ್ರೆಸ್ ಚೇರ್ ಕ್ಲಾಸ್ ಬೆಲೆ 540 ರು ಇದ್ದರೆ, ಎಕ್ಸಿ ಕ್ಯೂಟಿವ್ ಕ್ಲಾಸ್ ದರ 1,040 ರು ಮಾತ್ರ ಇದೆ.

ದೇಶಿ, ವಿದೇಶಿ ಆಹಾರ ಸೌಲಭ್ಯ ಇರುತ್ತದೆ
ಗೋ ಉಪ್ಪಿಟ್ಟು (ಉಪ್ಮಾ) ಮಿನಿದೋಸೆ, ಕಾಂಜಿವರಂ ಇಡ್ಲಿ, ಹೆಚ್ಚಿದ (ತಾಜಾ) ಹಣ್ಣುಗಳು, ಆಲೂಕುಲ್ಟ, ಡ್ರೈಫ್ರೂಟ್, ಚಿಕನ್ ರೋಲ್, ಸ್ಯಾನಿಷ್ ಎಗ್ ವೈಟ್ ಆಮ್ಲೆಟ್ ಸೇರಿದಂತೆ ಇನ್ನೂ ಹಲವು ದೇಶೀ, ವಿದೇಶಿ ಆಹಾರ ಲಭ್ಯವಿರುತ್ತದೆ..
ತೋರ ಮೈಯ ರೈಲು ಸಖಿಯರನ್ನು ನೇಮಿಸುತ್ತಾರಾ?
ಈ ಹಿಂದೆ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸ್ಥೂಲಕಾಯ ಗಗನಸಖಿಯರನ್ನು ವಿಮಾನದಿಂದ ಕೆಳಗಿಳಿಸಿತ್ತು. ರೈಲು ಸಖಿಯರ ನೇಮಕಾತಿ ವಿವರ ಇನ್ನೂ ಲಭ್ಯವಾಗಿಲ್ಲ. ಅವರ ಉಡುಗೆ ತೊಡುಗೆ, ಕಾರ್ಯ ನಿರ್ವಹಿಸುವ ಅವಧಿ ಬಗ್ಗೆ ವಿವರ ಸಿಗಬೇಕಿದೆ.
-
War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ












Click it and Unblock the Notifications