ತುರ್ತು ಪರಿಸ್ಥಿತಿ ಬಂದಾಗ 112 ಸಂಖ್ಯೆಗೆ ಕರೆ ಮಾಡಿ
ನವದೆಹಲಿ, ಏ.8: ಎಲ್ಲಾ ತುರ್ತು ಸೇವೆಗಳ ಸಂಖ್ಯೆಯನ್ನು ಒಗ್ಗೂಡಿಸಿಸ್ ಒಂದೇ ಸಂಖ್ಯೆಯನ್ನು ಜಾರಿಗೆ ತರುವ ಪ್ರಯತ್ನಕ್ಕೆ ಮತ್ತೊಮ್ಮೆ ಚಾಲನೆ ಸಿಕ್ಕಿದೆ. ಅಮೆರಿಕದಲ್ಲಿ ಚಾಲನೆಯಲ್ಲಿರುವ 911 ಸಂಖ್ಯೆಯಂತೆ ಭಾರತದಲ್ಲಿ ಇನ್ಮುಂದೆ 112 ಸಂಖ್ಯೆ ಬಳಕೆಗೆ ಬರುವ ಸೂಚನೆ ಟೆಲಿಕಾಂ ಇಲಾಖೆಯಿಂದ ಸಿಕ್ಕಿದೆ.
ದೇಶದೆಲ್ಲೆಡೆ 112 ನಂಬರ್ ನ್ಯಾಷನಲ್ ಎಮರ್ಜೆನ್ಸಿ ನಂಬರ್ ಆಗಿ ಬಳಸಲು ಅನುಮತಿ ಕೋರಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. [ಉತ್ತರ ಕರ್ನಾಟಕದಲ್ಲಿ ನೀರಿನ ಸಮಸ್ಯೆಗೆ ಹೆಲ್ಪ್ ಲೈನ್]
ಪೊಲೀಸ್, ಅಗ್ನಿಶಾಮಕದಳ, ಮಹಿಳೆಯರು ಮತ್ತು ಮಕ್ಕಳ ಸಹಾಯವಾಣಿ ಈ ದೂರವಾಣಿ ಸಂಖ್ಯೆಯನ್ನು ಹಂತಹಂತವಾಗಿ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಹೀಗಾಗಿ ಇನ್ಮುಂದೆ 100,101,102 ಹಾಗೂ 108 ಸಂಖ್ಯೆ ಎಲ್ಲವೂ 112ಗೆ ರೀಡೈರೆಕ್ಟ್ ಆಗಲಿದೆ. [ತುರ್ತು ಸಂಖ್ಯೆ: ಅಮೆರಿಕಕ್ಕೆ 911; ಭಾರತಕ್ಕೆ 2611]
ಸಾರ್ವಜನಿಕ ಜಾಗೃತಿ ಅಭಿಯಾನದ ಮೂಲಕ 112 ಸಂಖ್ಯೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಬಹುದು. 100,101,102 ಹಾಗೂ 108 ಸಂಖ್ಯೆಗಳನ್ನು ಸಂಪೂರ್ಣವಾಗಿ ಕಿತ್ತು ಹಾಕದೆ ಎರಡನೇ ಲೈನ್ ನಂಬರ್ ಆಗಿ ಬಳಸಬಹುದಾಗಿದೆ. ಈ ಸಂಖ್ಯೆಗಳಿಗೆ ಕರೆ ಮಾಡಿದಾಗ 112 ಕಂಟ್ರೋಲ್ ರೂಮಿಗೆ ಕರೆ ಹೋಗುವಂತೆ ಮಾಡಬಹುದು ಎಂದು ಟ್ರಾಯ್ ಅಧಿಕಾರಿಗಳು ಹೇಳಿದ್ದಾರೆ.

ಮೊಬೈಲಿನಿಂದ ಕರೆ ಸಾಧ್ಯವೇ? : ಮೊಬೈಲ್ ಫೋನ್, ಲ್ಯಾಂಡ್ ಲೈನ್ ನಿಂದ 112 ಸಂಖ್ಯೆಗೆ ನೇರವಾಗಿ ಕರೆ ಮಾಡಬಹುದು. ಜೊತೆಗೆ ನಿಮ್ಮ ಫೋನಿನಿಂದ ಹೊರ ಹೋಗುವ ಕರೆಗಳು ನಿರ್ಬಂಧಿಸಿದ್ದರೂ 112ಗೆ ಕರೆ ಸಾಧ್ಯವಾಗಲಿದೆ.ಇದರ ಜೊತೆಗೆ ಎಸ್ಎಂಎಸ್ ಮೂಲಕ ವ್ಯಕ್ತಿ ಇರುವ ಸ್ಥಳದ ಗುರುತು ಪತ್ತೆ ಮಾಡುವ ವಿಧಾನವನ್ನು ಟೆಲಿಕಾಂ ಇಲಾಖೆ ಬಳಸಲು ಯತ್ನಿಸುತ್ತಿದೆ. [ಮಹಿಳೆಯರಿಗಾಗಿ 24 X 7 ಸಹಾಯವಾಣಿ]
ಸಾರ್ವಜನಿಕರ ಕರೆಗೆ ಪ್ರತ್ಯೇಕ ವಿಭಾಗ: ಸಾರ್ವಜನಿಕ ಸುರಕ್ಷಿತ ಕೇಂದ್ರಗಳು ಹಿಂದಿ, ಇಂಗ್ಲೀಷ್ ಅಲ್ಲದೆ ಭಾರತದ ಎಲ್ಲಾ ಪ್ರಮುಖ ಭಾಷೆಗಳಲ್ಲಿ ವ್ಯವಹರಿಸಲಿದೆ. ಪಿಸಿಆರ್ ವಾಹನ, ಅಗ್ನಿ ಶಾಮಕ ದಳ, ಆಂಬುಲೆನ್ಸ್ ವಾಹನಗಳಿಗೆ ಜಿಪಿಎಸ್ ಬಳಕೆ ಮಾಡಲು ವ್ಯವಸ್ಥೆ ಮಾಡಲಾಗುತ್ತದೆ.
ಕರೆ ಮಾಡಿದ ವ್ಯಕ್ತಿಯ ವಿವರಗಳನ್ನು ಸಂಗ್ರಹಿಸಿ, ಶೇಖರಿಸಿ ತುರ್ತು ಸಮಯದಲ್ಲಿ ಕೇಂದ್ರಕ್ಕೆ ಕಳಿಸುವ ಹೊಣೆಯನ್ನು ಬಿಎಸ್ ಎನ್ ಎಲ್ ಗೆ ನೀಡಲಾಗಿದೆ. (ಒನ್ ಇಂಡಿಯಾ ಸುದ್ದಿ)
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications