ತುರ್ತು ಸಂಖ್ಯೆ: ಅಮೆರಿಕಕ್ಕೆ 911; ಭಾರತಕ್ಕೆ 2611

ರಾಷ್ಟ್ರೀಯ ತುರ್ತು ಸೇವಾ ದೂರವಾಣಿ ಸಂಖ್ಯೆ ವ್ಯವಸ್ಥೆ(NETNS) ಇರುವ ಕೇಂದ್ರವನ್ನು ಸ್ಥಾಪಿಸಿ, ತುರ್ತು ಸಹಾಯ ಕೇಳಿ ದೇಶದ ಯಾವುದೇ ಮೂಲೆಯ ಜನ, ಯಾವುದೇ ಸಮಯದಲ್ಲಿ ಕರೆ ಮಾಡಿದರೂ ಅವರಿಗೆ ಸ್ಪಂದಿಸುವ ವ್ಯವಸ್ಥೆಯನ್ನು ರೂಪಿಸಲಾಗುವುದು.
ಭಾರತದಲ್ಲೇ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ತುರ್ತು ಸಹಾಯವಾಣಿಗಳನ್ನು ಒಗ್ಗೂಡಿಸಿ, 2611 ಸಂಖ್ಯೆ ಬದಲಾಯಿಸಲಾಗುವುದು. ಹಲವು ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ಕಷ್ಟ. ಒಂದೇ ಒಂದು ವಿಶಿಷ್ಟ ಸಂಖ್ಯೆ ಇದ್ದರೆ ನಾಗರಿಕರಿಗೆ ಅನುಕೂಲ ಎಂದು ಬೋರ್ಡೆ ಹೇಳುತ್ತಾರೆ.
ಒಂದು ಸಂಖ್ಯೆ, ಒಂದು ದೇಶ ಒನ್ ಇಂಡಿಯ: ಈಗ ಸ್ಥಳೀಯ ಸಹಾಯವಾಣಿಗಳಾದ ಪೊಲೀಸ್ 100, ಅಗ್ನಿಶಾಮಕ ದಳ 101, ಅಂಬ್ಯುಲನ್ಸ್103 ಮತ್ತು ಮಕ್ಕಳು, ಮಹಿಳೆ ಹಾಗೂ ಹಿರಿಯ ನಾಗರಿಕರ ರಕ್ಷಣೆಗಾಗಿರುವ 108 ಮುಂತಾದವುಗಳನ್ನು ಒಗ್ಗೂಡಿಸಿ 2611 ಸಂಖ್ಯೆಯನ್ನು ಮಾತ್ರ ಬಳಸುವಂತೆ ಮಾಡಬೇಕಿದೆ.
ಕೇವಲ ನಾಗರಿಕರ ಸೌಲಭ್ಯಕ್ಕಾಗಿ ಅಲ್ಲದೆ, ಉಗ್ರರ ದಾಳಿ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಿಬ್ಬಂದಿ(NSG) ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಈ ಸಂಖ್ಯೆ ಅನುಕೂಲಕರವಾಗಿ ಪರಿಣಮಿಸಲಿದೆ.
ಕೇಂದ್ರ ಗೃಹ ಸಚಿವಾಲಯದ ತರಬೇತಿ ಹೊಂದಿದ ಅಧಿಕಾರಿಗಳು ಮಾತ್ರ ಈ ಸಂಖ್ಯೆಗೆ ಒಳ ಬರುವ ಹಾಗೂ ಹೊರ ಹೋಗುವ ಕರೆಗಳ ಮಾಹಿತಿಯನ್ನು ಪಡೆಯುವುದರಿಂದ ಇಡೀ ವ್ಯವಸ್ಥೆ ಗೃಹ ಕಚೇರಿಯ ಅಧೀನದಲ್ಲಿದ್ದು, ಸುರಕ್ಷಿತವಾಗಿರುತ್ತದೆ.
ಡಯಲ್ 2611 ಸಂಖ್ಯೆಯನ್ನು GPS ವ್ಯವಸ್ಥೆಗೆ ಹೋಲಿಸಿದ ಬೋರ್ಡೆ, ಮಾನವ, ಯಂತ್ರ ಹಾಗೂ ಅತ್ಯಾಧುನಿಕ ಮುಂದಿನ ಪೀಳಿಗೆಯ ಟೆಲಿಕಾಂ ಸಾಧನಗಳ ಸಮೀಕೃತ ವ್ಯವಸ್ಥೆ ಎನ್ನುತ್ತಾರೆ.GIS, ಉಪಗ್ರಹ, ಮೊಬೈಲ್, ಐಟಿ ಹಾಗೂ ಇನ್ನಿತರ ಟೆಲಿಕಾಂ ಜಾಲಗಳ ಸಂಪರ್ಕದ ಸಹಾಯದಿಂದ ಸ್ಥಳೀಯ ಆಧಾರಿತ ಸೇವೆಯನ್ನು ತುರ್ತಾಗಿ ನೀಡಬಹುದಾಗಿದೆ ಎಂದಿದ್ದಾರೆ.
ಇದಲ್ಲದೆ, ಅಮೆರಿಕದ 911 ಗಿಂತ ಅಥವಾ ಇನ್ಯಾವುದೇ ತುರ್ತು ಸೇವಾ ಸಂಖ್ಯೆಗಿಂತ ಭಾರತದ 2611 ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬಲ್ಲದು ಎನ್ನುತ್ತಾರೆ ಬೋರ್ಡೆ. ವಿವಿಧ ಭಾಷೆ, ಉನ್ನತ ತಂತ್ರಜ್ಞಾನ, ಹೇಳಿ ಮಾಡಿಸಿದಂತಹ ವಿನ್ಯಾಸ ಇತ್ಯಾದಿಗಳ ಸಹಾಯದಿಂದ ಎಲ್ಲವೂ ಸಾಧ್ಯ ಎಂಬುದು ದಿನ್ ಕರ್ ಬೋರ್ಡೆ ನಂಬಿಕೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications