ಮೋದಿ ಸರಕಾರದ ಆರೋಗ್ಯ ಸಚಿವಾಲಯಕ್ಕೆನನ್ನ ಮನವಿ
ಸಾರ್ವಜನಿಕರನ್ನು ಬಹುಬೇಗ ತಲುಪ ಬಹುದಾದ ಎಸ್ಎಂಎಸ್ ಸೌಲಭ್ಯವನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ಬಳಸಿಕೊಳ್ಳಲಾರಂಭಿಸಿದೆ.
ಬಲ್ಕ್ ಎಸ್ಎಂಎಸ್ ಮೂಲಕ ಈಗಾಗಲೇ ಆಗಸ್ಟ್ ಹದಿನೈದರಂದು ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕಳುಹಿಸಿದ್ದ ಮೋದಿ ಸರಕಾರ, ಈಗ ತನ್ನ ಆರೋಗ್ಯ ಇಲಾಖೆಯಿಂದ ಬಲ್ಕ್ ಮೆಸೇಜ್ ಕಳುಹಿಸಿದೆ.
ಕೆಲ ದಿನಗಳ ಹಿಂದೆ ಆರೋಗ್ಯ ಇಲಾಖೆಯಿಂದ ಬಂದ ಮೆಸೇಜ್ ಹೀಗಿದೆ " Ministry of Health and Family Welfare, Government of India welcomes you, Stay for at least 48 hrs in the health facility after delivery to avoid any complications for mother and the baby. The treatement provided at the facility including diet, drugs etc., will be free of cost. This facility applicable those who admitted in the government hospitals".
ಕೇಂದ್ರ ಸರಕಾರದ ಈ ನಿರ್ಧಾರ, ಬಡ ಕುಟುಂಬದ ಮತ್ತು ಈಗಾಗಲೇ ಈ ಸೌಲಭ್ಯವನ್ನೇ ನೆಚ್ಚಿಕೊಂಡಿರುವ ವರ್ಗದ ಜನತೆಗೆ ಆಶಾದಾಯಕವಾಗುವ ಸುದ್ದಿಯಾಗುವುದಂತೂ ನಿಜ.

ಆದರೆ ಇಂತಹ ಜನಪ್ರಿಯ ಕಾರ್ಯಕ್ರಮದ ಸಂದೇಶ ಕಳುಹಿಸುವ ಮುನ್ನ ರಾಜ್ಯ ಸರಕಾರದ ಅಡಿಯಲ್ಲಿ ಬರುವ ಆಸ್ಪತ್ರೆಗಳು ಮತ್ತು ಕೇಂದ್ರ ಸರಕಾರ ವ್ಯಾಪ್ತಿಯಲ್ಲಿ ಬರುವ ಇಎಸ್ಐ ಆಸ್ಪತ್ರೆಗಳ ಬಗ್ಗೆ ಆರೋಗ್ಯ ಇಲಾಖೆ ಗಮನ ಹರಿಸಿದಿಯೇ ಎನ್ನುವುದು ಪ್ರಶ್ನೆ?
ಕೇಂದ್ರ ಮತ್ತು ರಾಜ್ಯ ಸರಕಾರದ ವ್ಯಾಪ್ತಿಯ ಆಸ್ಪತ್ರೆಗಳ ಗುಣಮಟ್ಟ, ಕಾರ್ಯವೈಖರಿ, ಲಂಚಾವತಾರ ಯಾವ ಮಟ್ಟಿಗೆ ಇದೆ ಎನ್ನುವುದನ್ನು ಜನಾನುರಾಗಿ ಎಂದೇ ಹೆಸರಾಗಿರುವ ಮತ್ತು ಕೆಲವು ದಿನಗಳ ಹಿಂದಷ್ಟೇ ಅಧಿಕಾರ ಸ್ವೀಕರಿಸಿ ಕೊಂಡಿರುವ ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಒಮ್ಮೆ ಅವಲೋಕಿಸುವುದು ಒಳಿತು. (ರೋಗಿಯ ಬುಡಕ್ಕೆ ಬಿಸಿನೀರು ಬಿಟ್ಟು ಸುಟ್ಟ ವೈದ್ಯರು)
ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರು ಹೆರಿಗೆಗೆ ಮುನ್ನ ಮತ್ತು ನಂತರದ ಕೆಲವು ದಿನಗಳಲ್ಲಿ ಯಾವ ಮಟ್ಟಿಗೆ ಜಾಗರೂಕತೆಯಿಂದ ಇರಬೇಕಾಗುತ್ತದೆ ಎನ್ನುವುದು ಸಾಮಾಜಿಕ ಸೇವಾಕರ್ತರೂ ಆಗಿರುವ ನಡ್ಡಾ ಅವರಿಗೆ ತಿಳಿಯದ ವಿಚಾರವೇನೂ ಅಲ್ಲ.
ಅಧಿಕಾರಿಗಳ ಮಟ್ಟದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಹೊಂದಾಣಿಕೆಯ ಮೂಲಕ ಜವಾಬ್ದಾರಿಯುತವಾಗಿ ನಿರ್ವಹಿಸ ಬೇಕಾದ ಕೆಲಸವಿದು. ಮಹಿಳೆಯರಿಗೆ ಪುನರ್ಜನ್ಮ ನೀಡುವ ಅವಧಿಯಾಗಿರುವ ಹೆರಿಗೆ ಮತ್ತು ಹೆರಿಗೆಯ ನಂತರದ ಸಮಯದಲ್ಲಿ ಹೊಂದಾಣಿಕೆಯ ಜೊತೆಗೆ ಮಾನವೀಯತೆ ಮತ್ತು ಆತ್ಮಸಾಕ್ಷಿಯಿಂದ ಸ್ಪಂಧಿಸುವ ಕೆಲಸವದು.
ಕೇಂದ್ರ ಆರೋಗ್ಯ ಸಚಿವರು, ಆಯಾಯ ರಾಜ್ಯ ವ್ಯಾಪ್ತಿಯ ಸಚಿವರು, ಜೊತೆಗೆ ನಮ್ಮ ನಾಡಿನ ಆರೋಗ್ಯ ಸಚಿವರಾದ ಯು ಟಿ ಖಾದರ್ ಅವರು surprise visit ಮೂಲಕ ಆಸ್ಪತೆಗೆ ಭೇಟಿ ನೀಡಿದರೆ ಆಸ್ಪತ್ರೆಯ ವಸ್ತುಸ್ಥಿತಿಯ ಅವಲೋಕನವಾಗಬಹುದು.

ಸರಕಾರೀ ಆಸ್ಪತ್ರೆಯಲ್ಲಿ ಎದ್ದು ಕಾಣುವ ಕೆಳಗಂಡ ಅವ್ಯವಸ್ಥೆಯನ್ನು ಸುಧಾರಿಸಿ, ನಂತರ ಎಸ್ಎಂಎಸ್ ಕಳುಹಿಸುವುದು ಉತ್ತಮ.
> ಒಬ್ಬರಿಗೆ ಬಳಸಿದ ಸಿರಿಂಜ್ ಅನ್ನು ಇನ್ನೊಬ್ಬರಿಗೆ ಬಳಸುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ?
> ದುಡ್ಡು ಕೊಟ್ಟರೆ ನವಜಾತ ಶಿಶುಗಳನ್ನು ಅದಲು ಬದಲು ಮಾಡುವುದಿಲ್ಲ ತಾನೇ?
> ಹಾಲಿಗೆ ನೀರು ಹಾಕ್ತೀರಾ ಅಥವಾ ನೀರಿಗೆ ಹಾಲು ಹಾಕ್ತೀರಾ ಎನ್ನುವುದನ್ನು ಸ್ಪಷ್ಟ ಪಡಿಸಿ
> ಕೊಳೆತ ಮೊಟ್ಟೆ ಅಥವಾ ಬೂಸ್ಟ್ ಹಿಡಿದಿರುವ ಬ್ರೆಡ್ ಕೊಡುವುದಿಲ್ಲ ತಾನೇ?
> ಸರಕಾರ ಬೇಡಿಕೆ ಈಡೇರಿಸಿಲ್ಲ ಎಂದು ವೈದ್ಯರು ಧರಣಿ ಕೂತರೆ ರೋಗಿಗಳ ಗತಿಯೇನು?
ಮೊದಲು ಸರಕಾರಿ ಆಸ್ಪತ್ರೆಯ ಸೌಲಭ್ಯಗಳು ಸುಧಾರಿಸ ಬೇಕಾಗಿದೆ. ಗವರ್ನಮೆಂಟ್ ಆಸ್ಪತ್ರೆಯನ್ನೇ ನಂಬಿಕೊಂಡಿರುವ ವರ್ಗದ ಜೊತೆಗೆ ಇತರ ಮಧ್ಯಮ ವರ್ಗದವರೂ ಸರಕಾರೀ ಆಸ್ಪತ್ರೆಯನ್ನು ನಂಬಬಹುದಾದಂತಹ ಗುಣಮಟ್ಟದ ಸೌಲಭ್ಯ ಮೊದಲು ಇಲ್ಲಿ ಆಗಬೇಕಾಗಿದೆ.
ಹಾಗಾಗಿ, ಮೊದಲು ಸರಕಾರಿ ಆಸ್ಪತ್ರೆಗಳ ಗುಣಮಟ್ಟವನ್ನು ಸುಧಾರಿಸಿ, ಇಲ್ಲದಿದ್ದರೆ ಆರೋಗ್ಯ ಇಲಾಖೆಯ ಈ ಸಂದೇಶ ಬರಿ ತೋರಿಕೆಗಾಗಿ, ಜನಪ್ರಿಯತೆಯ ತಂತ್ರ ಎಂದು people will just ignore it.
-
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications