Bengaluru Sleeper Vande Bharat: ಬೆಂಗಳೂರು ಸೇರಿ ಈ 3 ಮಾರ್ಗಗಳಲ್ಲಿ ಸ್ಲೀಪರ್ ವಂದೇ ಭಾರತ್ ರೈಲು ಸೇವೆ
ನವದೆಹಲಿ: ಭಾರತೀಯ ರೈಲ್ವೆ ಜಾಲದಲ್ಲಿ ವಂದೇ ಭಾರತ್ ರೈಲುಗಳು ಕ್ರಾಂತಿಕಾರಕ ಬದಲಾವಣೆ ತಂದಿವೆ. ಇದೀಗ ಇದೇ ಜಾಲದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸಹ ಕಾರ್ಯಾಚರಣೆ ಆರಂಭಿಸಿವೆ. ರಾಜ್ಯದಿಂದ ಬೇರೆ ರಾಜ್ಯಕ್ಕೆ ತೆರಳುವ ಸುದೀರ್ಘ ಪ್ರಯಾಣದ ಸಮಯವನ್ನು ಈ ರೈಲುಗಳು ಕಡಿಮೆಗೊಳಿಸಿವೆ. ವೇಗದ ಹಾಗೂ ಸುರಕ್ಷಿತ ರೈಲು ಇವಾಗಿದ್ದು, ಅತ್ಯಾಧುನಿಕ ಸೌಲಭ್ಯ ಹೊಂದಿವೆ. ಬೆಂಗಳೂರಿಗೂ ಈ ಸ್ಲೀಪರ್ ವಂದೇ ಭಾರತ್ ರೈಲು ಸೇವೆ ನೀಡಲು ಯೋಜಿಸಲಾಗಿದೆ. ತಿರುವನಂತಪುರಂನಿಂದ ಮೂರು ಮಾರ್ಗಗಳಾದ ಚೆನ್ನೈ, ಬೆಂಗಳೂರು ಹಾಗೂ ಮಂಗಳೂರಿಗೆ ಕಾರ್ಯಾಚರಣೆ ನಡೆಸಲಿವೆ. ಈ ರೈಲುಗಳ ವೇಳಾಪಟ್ಟಿ, ಟಿಕೆಟ್ ದರ ವಿವರ ಇಲ್ಲಿದೆ.
ರೈಲ್ವೆ ಇಲಾಖೆ ಪ್ರಕಾರ, ತಿರುವನಂತಪುರಂ-ಚೆನ್ನೈ ಹಾಗೂ ಬೆಂಗಳೂರು-ತಿರುವನಂತಪುರಂ ರೈಲು ಮಾರ್ಗಕ್ಕೆ ಹೆಚ್ಚಿನ ಬೇಡಿಕೆ ಇದೆ ಎನ್ನಲಾಗಿದೆ. ಮತ್ತೊಂದು ರೈಲು ಮಂಗಳೂರು-ತಿರುವನಂತಪುರಂ ಮಾರ್ಗದಲ್ಲಿ ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಈ ಮಾರ್ಗಗಳಿಂದ ಇಲಾಖೆಗೆ ಹೆಚ್ಚಿನ ಆದಾಯ ನಿರೀಕ್ಷೆ ಇದೆ.

ಕೇರಳ ಹಾಗೂ ತಮಿಳುನಾಡಿನಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವುದು ಮತ್ತು ಚುನಾವಣಾ ರಾಜಕೀಯ ಕಾರಣದಿಂದಲೂ ಮೂರು ಮಾರ್ಗಗಳಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲು ನೀಡಲು ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅದೇನೆ ಇದ್ದರೂ ಈ ಮಾರ್ಗಗಳ ಪ್ರಯಾಣಿಕರಿಗೆ ಹೆಚ್ಚುವರಿ ರೈಲು ಸೇವೆ ಶೀಘ್ರವೇ ಸಿಗಲಿದೆ. ಇನ್ನೂ ಈ ಮೂರು ಮಾರ್ಗದ ರೈಲುಗಳ ಟಿಕೆಟ್ ದರದ ಬಗ್ಗೆ ಅಧಿಕೃತ ಮಾಹಿತಿ ದೊರೆಯಬೇಕಿದೆ.
ಮೂರು ಸ್ಲೀಪರ್ ವಂದೇ ಭಾರತ್ (ವಿಬಿ) ರೈಲುಗಳ ವೇಳಾಪಟ್ಟಿ
1. ಬೆಂಗಳೂರು-ತಿರುವನಂತಪುರಂ ಸ್ಲೀಪರ್ ವಿಬಿ ರೈಲು
ತಿರುವನಂತಪುರಂನಿಂದ ಬೆಂಗಳೂರು ಮಧ್ಯದ ಒಟ್ಟು 844 ಕಿಲೋ ಮೀಟರ್ ಮಾರ್ಗದಲ್ಲಿ ಒಂದು ಸ್ಲೀಪರ್ ವಂದೇ ಭಾರತ್ ರೈಲು ಕಾರ್ಯಾಚರಣೆ ನಡೆಸಲಿದೆ. ಒಟ್ಟು 15 ಗಂಟೆ 30 ನಿಮಿಷದಲ್ಲಿ ಈ ದೂರವನ್ನು ಕ್ರಮಿಸಲಿದೆ. ಇದರಿಂದ ಹಾಲಿ ಸಾಮಾನ್ಯ ರೈಲಿನ ಪ್ರಯಾಣಕ್ಕಿಂತ ಮೂರು ಗಂಟೆ ಸಮಯ ಉಳಿಯಲಿದೆ. ಪ್ರತಿ ಒಬ್ಬರಿಗೆ ಟಿಕೆಟ್ ದರ ಕನಿಷ್ಠ 1000 ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ.
2. ಮಂಗಳೂರು-ತಿರುವನಂತಪುರಂ ಸ್ಲೀಪರ್ ವಿಬಿ ರೈಲು
ಮಂಗಳೂರು-ತಿರುವನಂತಪುರಂ ರೈಲು ಮಾರ್ಗವು ಒಟ್ಟು 631 ಕಿಲೋ ಮೀಟರ್ ಇದೆ. ಈ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ್ ರೈಲು ಸೇವೆಯ ಅಗತ್ಯವಿದೆ. ಈ ಕಾರಣದಿಂದಲೇ ಇಲ್ಲಿಗೊಂದು ರೈಲು ನಿಯೋಜನೆಗೊಳ್ಳಲಿದೆ. ಒಟ್ಟು 14 ಗಂಟೆಗಳಲ್ಲಿ ಈ ದೂರವನ್ನು ರೈಲು ಕ್ರಮಿಸಲಿದೆ.
3. ತಿರುವನಂತಪುರ-ಚೆನ್ನೈ ಸ್ಲೀಪರ್ ವಿಬಿ ರೈಲು
ತಿರುವನಂತಪುರ-ಚೆನ್ನೈನ 920 ಕಿಲೋ ಮೀಟರ್ ಮಾರ್ಗದಲ್ಲಿ ಸಹ ವಂದೇ ಭಾರತ್ ಸ್ಲೀಪರ್ ರೈಲು ಕಾರ್ಯಾಚರಣೆ ಆರಂಭಿಸಲಿದೆ. ಒಟ್ಟು 16.30 ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಲಿದೆ. ಈ ರೈಲಿನ ನಿಯೋಜನೆಯಿಂದ ಚೆನ್ನೈ-ತಿರುವನಂತಪುರಂ ರೈಲು ಪ್ರಯಾಣದಲ್ಲಿ ಮೂರು ಗಂಟೆಗಳು ಉಳಿತಾಯವಾಗಲಿದೆ. ಟಿಕೆಟ್ ದರ ಒಬ್ಬರಿಗೆ 1400 ರೂಪಾಯಿಗೂ ಅಧಿಕ ನಿಗದಿ ಆಗುವ ನಿರೀಕ್ಷೆ ಇದೆ. ಈ ವೇಳಾಪಟ್ಟಿ ಬಗ್ಗೆ ರೈಲ್ವೆ ಸಚಿವಾಲಯವು ಅಂತಿಕ ವೇಳಾಪಟ್ಟಿ ಪ್ರಕಟಿಸಲಿದೆ.
-
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ












Click it and Unblock the Notifications