Get Updates
Get notified of breaking news, exclusive insights, and must-see stories!

ಭಗತ್‌ಸಿಂಗ್ ಭಯೋತ್ಪಾದಕ ಎಂದ ದೆಹಲಿ ವಿವಿ!

ನವದೆಹಲಿ, ಏಪ್ರಿಲ್, 28: ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ದೇಶದ್ರೋಹಿ ಘೋಷಣೆ ಗಲಾಟೆ ಒಂದು ಹಂತಕ್ಕೆ ಬಂದು ನಿಂತಿರುವಾಗಲೇ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಎಡವಟ್ಟಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಅವರನ್ನು ದೆಹಲಿ ವಿಶ್ವವಿದ್ಯಾಲಯದ ಪಠ್ಯವೊಂದರಲ್ಲಿ 'ಕ್ರಾಂತಿಕಾರಿ ಭಯೋತ್ಪಾದಕ' ಎಂದು ಕರೆದಿರುವುದು ಹೊಸ ವಿವಾದ ಹುಟ್ಟುಹಾಕಿದೆ.[ಬೆಂಗಳೂರಿನಲ್ಲಿ ಭಗತ್ ಕನಸಿನ ಭಾರತ ಬಿಚ್ಚಿಟ್ಟ ಮೊಮ್ಮಗ]

bhagat singh

ಇತಿಹಾಸಕಾರರಾದ ಬಿಪಿನ್‌ ಚಂದ್ರ ಮತ್ತು ಮೃದುಲಾ ಮುಖರ್ಜಿ ಅವರು ಬರೆದಿರುವ 'ಭಾರತದ ಸ್ವಾತಂತ್ರ್ಯ ಹೋರಾಟ' ಎಂಬ ಪುಸ್ತಕದ 20ನೇ ಅಧ್ಯಾಯದಲ್ಲಿ ಭಗತ್‌ ಸಿಂಗ್‌ ಅಲ್ಲದೆ, ಚಂದ್ರಶೇಖರ್‌ ಆಜಾದ್‌, ಸೂರ್ಯ ಸೇನ್‌ ಮತ್ತು ಇತರರನ್ನು 'ಕ್ರಾಂತಿಕಾರಿ ಭಯೋತ್ಪಾದಕರು' ಎಂದು ಹೇಳಲಾಗಿದೆ.

ಈ ತಪ್ಪನ್ನು ಸರಿಪಡಿಸುವಂತೆ ಕೋರಿ ಭಗತ್‌ ಸಿಂಗ್‌ ಕುಟುಂಬದ ಸದಸ್ಯರು ದೆಹಲಿ ವಿ.ವಿ ಅಧಿಕಾರಿಗಳು ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಆಗ್ರಹಿಸಿದ್ದಾರೆ.[ಭಗತ್ ಸಿಂಗ್ ಜನ್ಮಸ್ಥಳ ಕಾಪಾಡುತ್ತೇವೆ ಎಂದ ಪಾಕ್]

'ಚಿತ್ತಗಾಂಗ್‌ ಚಳವಳಿ' ಮತ್ತು ಸ್ಯಾಂಡರ್ಸ್‌ ಹತ್ಯೆಯನ್ನು ಈ ಪಠ್ಯಪುಸ್ತಕದಲ್ಲಿ 'ಭಯೋತ್ಪಾದಕ ಕೃತ್ಯ' ಎಂದು ಕರೆಯಲಾಗಿದೆ. ಭಗತ್‌ ಸಿಂಗ್ ಕುಟುಂಬದ ಸದಸ್ಯರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದು ಕೂಡಲೇ ತಿದ್ದುಪಡಿ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.[ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಮೋದಿ ಬಗ್ಗೆ ಹೇಳಿದ್ದೇನು?]

ನವದೆಹಲಿಯ ಜವಾಹರಲಾಲ್ ನೆಹರು ವಿವಿಯಲ್ಲಿ ಭಯೋತ್ಪಾದಕ ಅಫ್ಜಲ್ ಗುರು ಪರ, ಭಾರತದ ವಿರುದ್ಧ ಘೋಷಣೆ ಕೂಗಿದ್ದು ದೊಡ್ಡ ಸುದ್ದಿಯಾಗಿತ್ತು. ವಿದ್ಯಾರ್ಥಿ ಸಂಘದ ಮುಖಂಡ ಕನ್ಹಯ್ಯಾ ಕುಮಾರ್ ನನ್ನು ಬಂಧನ ಮಾಡಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+