ಸಾಯಿಬಾಬಾ ಲೇವಡಿ: ಅಖಾಡಕ್ಕಿಳಿದ ನಾಗಸಾಧುಗಳು
ನವದೆಹಲಿ, ಜು 4: ಶಿರಡಿ ಬಾಬಾ ವಿರುದ್ದ ಲೇವಡಿ ಮಾಡುವ ಹೇಳಿಕೆಯನ್ನು ಮುಂದುವರಿಸಿರುವ ದ್ವಾರಕಾ ಪೀಠದ ಶ್ರೀಗಳು, ಮಾಂಸ ತಿನ್ನುವ ಬಾಬಾ ದೇವರೇ ಅಲ್ಲ ಎಂದು ಮತ್ತೆ ಜರಿದಿದ್ದಾರೆ. ಈ ಮಧ್ಯೆ, ಶ್ರೀಗಳ ಬೆಂಬಲಕ್ಕೆ ನಾಗಸಾಧುಗಳು ನಿಂತಿದ್ದು ವಿವಾದ ತಾರಕಕ್ಕೇರಿದೆ.
ಶಿರಡಿಬಾಬಾ ಭಕ್ತರು ಈ ಕೂಡಲೇ ದ್ವಾರಕಾಪೀಠದ ಸ್ವರೂಪಾನಂದ ಸರಸ್ವತಿ ವಿರುದ್ದ ಕಿಡಿಕಾರುವುದನ್ನು ನಿಲ್ಲಿಸಬೇಕು. ಇದೇ ರೀತಿ ಶ್ರೀಗಳನ್ನು ಅವಮಾನಿಸುವುದನ್ನು ಮುಂದುವರಿಸಿದರೆ ನಾವು ಬೀದಿಗೆ ಇಳಿಯಬೇಕಾಗುತ್ತದೆ ಎಂದು ನಾಗಸಾಧುಗಳು ಎಚ್ಚರಿಸಿದ್ದಾರೆ.
ಮಾಂಸ ತಿನ್ನುತ್ತಿದ್ದ ಸಾಯಿಬಾಬಾ ದೇವರಾಗಲು ಹೇಗೆ ಸಾಧ್ಯ? ಮುಸ್ಲಿಂ ಧರ್ಮೀಯನವನಾಗಿದ್ದ ಬಾಬಾ ಅಲ್ಲಾಹ್ ನನ್ನು ಪೂಜಿಸುತ್ತಿದ್ದ. ನಾವು ಹಿಂದೂಗಳು ಬಾಬಾನನ್ನು ಪೂಜಿಸುವುದು ತಪ್ಪು ಎಂದು 90ರ ಹರೆಯದ ದ್ವಾರಕಾಪೀಠದ ಶ್ರೀಗಳು ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ. (ಶಂಕರಾಚಾರ್ಯ ಸ್ವರೂಪಾನಂದರ ಮೇಲೆ ಎಫ್ಐಆರ್)
ನಾವು ಕೇವಲ ಐದು ದೇವರುಗಳನ್ನು ಭಗವಂತ ಎಂದು ಒಪ್ಪಿಕೊಳ್ಳುತ್ತೇವೆ. ಅದು ಬಿಟ್ಟು ಎಲ್ಲರನ್ನೂ ದೇವರೆಂದು ಪೂಜಿಸಲು ಸಾಧ್ಯವಿಲ್ಲ ಎಂದು ಶಿರಡಿಬಾಬಾ ಭಕ್ತರ ನಂಬಿಕೆಗೆ ಶ್ರೀಗಳು ಸವಾಲೆಸೆದಿದ್ದಾರೆ.
ಜನರಿಗೆ ತಮಗಿಷ್ಟ ಬಂದಂತೆ ಪೂಜಿಸುವ ಸ್ವಾತಂತ್ರ್ಯವಿದೆ. ಶಿರಡಿಬಾಬಾ ತನ್ನನ್ನು ದೇವರೆಂದು ಬಿಂಬಿಸಿಕೊಳ್ಳಲು ಹೊರಟಿದ್ದು ನಮ್ಮ ಆಕ್ಷೇಪಕ್ಕೆ ಕಾರಣವೆಂದು ಶ್ರೀಗಳು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆಖಾಡಕ್ಕಿಳಿದ ನಾಗಾಸಾಧುಗಳು
ನಮ್ಮ ಹಿರಿಯ ಶ್ರೀಗಳ ವಿರುದ್ದ ಅವಹೇಳನಕಾರಿ ಮಾತನಾಡುವುದನ್ನು ಬಾಬಾ ಅನುಯಾಯಿಗಳು ನಿಲ್ಲಿಸಬೇಕು. ಇದೊಂದು ಧರ್ಮಯುದ್ದ. ಅವರು ಇದೇ ರೀತಿ ಮುಂದುವರಿದರೆ ನಾವು ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ನಾಗಾಸಾಧುಗಳು ಎಚ್ಚರಿಕೆ ನೀಡಿದ್ದಾರೆ.

ಸ್ವಾಮಿ ನರೇಂದ್ರಗಿರಿ ಎಚ್ಚರಿಕೆ
ಬಾಬಾ ಭಕ್ತರು ಶ್ರೀಗಳ ವಿರುದ್ದ ದಾಖಲಸಿರುವ ಪ್ರಕರಣಗಳನ್ನು ಇನ್ನೆರಡು ದಿನಗಳಲ್ಲಿ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ನಾಗಾಸಾಧುಗಳು ಅಖಾಡಕ್ಕೆ ಇಳಿಯುತ್ತಾರೆ. ಅವರು ಈ ಸಮಸ್ಯೆಗಳಿಗೆ ತಮ್ಮದೆ ಶೈಲಿಯಲ್ಲಿ ಪರಿಹಾರ ಕಂಡುಕೊಳ್ಳಲಿದ್ದಾರೆಂದು ಭಾಗಂಬಾರಿ ಮಠದ ಶ್ರೀಗಳು ಮತ್ತು ಅಖಾರ ಪರಿಷತ್ತಿನ ಸದಸ್ಯರೂ ಆಗಿರುವ ಸ್ವಾಮಿ ನರೇಂದ್ರಗಿರಿ ಎಚ್ಚರಿಕೆ ನೀಡಿದ್ದಾರೆ.

ಶ್ರೀಗಳ ವಿರುದ್ದ ಎಫ್ ಐ ಆರ್
ಬಾಬಾ ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ದ್ವಾರಕಾಪೀಠದ ಶ್ರೀಗಳ ವಿರುದ್ದ ಎಫ್ ಐ ಆರ್ ದಾಖಲಿಸಬೇಕೆಂದು ಕೋರಿ ಅಲಹಾಬಾದ್ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಅದರ ವಿಚಾರಣೆ ಶುಕ್ರವಾರ (ಜು 4) ಬರಲಿದೆ. ಲಕ್ನೋ ಸಾಯಿ ದೇಗುಲ ಈ ಅರ್ಜಿ ಸಲ್ಲಿಸಿತ್ತು. ಜೈಪುರದಲ್ಲೂ ಶ್ರೀಗಳ ವಿರುದ್ದ ಪ್ರಕರಣ ದಾಖಲಾಗಿದೆ.

ನಾನೇನು ಅವರನ್ನು ಬೆಂಬಲಿಸಲು ಕೋರಿಲ್ಲ
ನಾಗಾಸಾಧುಗಳು ತಮ್ಮ ಬೆಂಬಲಕ್ಕೆ ನಿಂತಿರುವ ಬಗ್ಗೆ ಪ್ರತಿಕ್ರಯಿಸುತ್ತಾ ಮಾತನಾಡುತ್ತಿದ್ದ ದ್ವಾರಕಾಪೀಠದ ಶ್ರೀಗಳು, ನಾನೇನೂ ಅವರನ್ನು ಬೆಂಬಲಿಸುವಂತೆ ಕೋರಿಲ್ಲ. ಅವರಾಗಿಯೇ ನಮ್ಮ ಬೆಂಬಲಕ್ಕೆ ಬಂದಿದ್ದಾರೆ. ಇದಕ್ಕೆ ನಾವು ವಿರೋಧ ವ್ಯಕ್ತ ಪಡಿಸುವುದಿಲ್ಲ ಎಂದು ಶ್ರೀಗಳು ಹೇಳಿದ್ದಾರೆ.

ಕಾಂಗ್ರೆಸ್ ಅಣತಿಯಂತೆ ಶ್ರೀಗಳು
ದ್ವಾರಕಾಪೀಠದ ಶ್ರೀಗಳು ಕಾಂಗ್ರೆಸ್ ಪಕ್ಷದ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ ಎನ್ನುವ ಆರೋಪ ಈ ಹಿಂದೆ ಕೂಡಾ ಇತ್ತು. ಬಾಬಾ ಲೇವಡಿಯ ಹಿಂದೆ ಕಾಂಗ್ರೆಸ್ ಷಡ್ಯಂತ್ರವಿದೆ ಎನ್ನುವ ಆರೋಪಕ್ಕೆ ಉತ್ತರಿಸುತ್ತಾ, ನಾನೇನು ರಾಜಕೀಯ ವ್ಯಕ್ತಿಯಲ್ಲ. ಈ ಆರೋಪ ನಿರಾಧಾರವೆಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications