ಒಂದು ಕುರಿಗೆ ಒಂದು ಕೋಟಿ ರೂಪಾಯಿ ಆಫರ್: ಆದರೂ ಕೊಡಲ್ಲ ಎಂದ ರೈತ!
ಒಂದು ಕುರಿಗೆ ಅಬ್ಬಬ್ಬಾ ಅಂದ್ರೆ ಎಷ್ಟು ಬೆಲೆ ಇರಬಹುದು, ಎಂತಹ ಅತ್ಯುತ್ತಮ ಕುರಿ ಅಂದರೂ ಎರಡು-ಮೂರು ಲಕ್ಷ ರೂಪಾಯಿ ಇರುತ್ತದೆ. ಆದರೆ ಒಂದು ವರ್ಷದ ಕುರಿ ಮರಿಗೆ ಒಂದು ಕೋಟಿ ರೂಪಾಯಿ ಬೆಲೆ ಎಂದು ಎಲ್ಲಾದರೂ ಕೇಳಿದ್ದೀರಾ? ಅಚ್ಚರಿ ಆದರೂ ಇದು ಸತ್ಯ, ರಾಜಸ್ಥಾನದಲ್ಲಿ ಒಂದು ಕುರಿಗೆ ಒಂದು ಕೋಟಿ ರೂಪಾಯಿ ಕೊಡ್ತೀವಿ ಎನ್ನುವ ಆಫರ್ ಕೊಡಲಾಗಿದೆ. ಅಚ್ಚರಿ ಎಂದರೆ ಒಂದು ಕೋಟಿ ಕೊಟ್ರು ನಾನು ಕುರಿ ಕೊಡಲ್ಲ ಎಂದು ಮಾಲೀಕ ಹೇಳಿರೋದು.
ರಾಜಸ್ಥಾನದ ಚುರು ಜಿಲ್ಲೆಯಲ್ಲಿರುವ ಈ ಕುರಿಗೆ ಈಗ ಚಿನ್ನದ ಬೆಲೆ ಬಂದಿದೆ. ಒಂದು ಕೋಟಿ ರೂಪಾಯಿ ಆಫರ್ ಬಂದಿರೋದು, ಕುರಿ ವಿಶೇಷ ತಳಿ ಎಂದಲ್ಲ, ಬದಲಾಗಿ ಕುರಿಯ ಮೇಲಿರುವ ಸಂಖ್ಯೆಗಾಗಿ. ಹೌದು, ಕುರಿಯ ಮೇಲೆ '786' ಎನ್ನುವ ಸಂಖ್ಯೆ ಇದೆ, ಉರ್ದು ಭಾಷೆಯಲ್ಲಿ ಈ ಸಂಖ್ಯೆಯ ಗುರುತು ಇರುವುದೇ ಕುರಿಗೆ ಬಂಗಾರದ ಬೆಲೆ ಬರಲು ಕಾರಣವಾಗಿದೆ.

ಭಾರತದಲ್ಲಿನ ಮುಸ್ಲಿಮರು '786' ಎನ್ನುವ ಸಂಖ್ಯೆಯನ್ನು ಪವಿತ್ರ ಎಂದು ಭಾವಿಸುತ್ತಾರೆ. ಕುರಿಯ ಮೇಲೆ ಈ ಸಂಖ್ಯೆ ಇರುವುದರಿಂದ ಅದನ್ನು ಪವಿತ್ರವಾದ ಕುರಿ ಎಂದು ಭಾವಿಸಿದ್ದು ಕೋಟಿ ರೂಪಾಯಿ ಆದರೂ ಖರೀದಿಸಲು ಹಲವರು ಮುಂದೆ ಬಂದಿದ್ದಾರೆ.
ಕುರುಬನಾದ ರಾಜು ಸಿಂಗ್ಗೆ ಆ ಸಂಖ್ಯೆಯ ಅರ್ಥವೇನೆಂದು ಅರ್ಥವಾಗಲಿಲ್ಲ ಆದರೆ ತನ್ನ ಹಳ್ಳಿಯ ಮುಸ್ಲಿಂ ಸಮುದಾಯದ ಸದಸ್ಯರೊಂದಿಗೆ ಮಾತನಾಡಿದ ನಂತರ ಅದು '786' ಎಂದು ಅರ್ಥ ಬರುವ ಉರ್ದು ಅಂಕಿ ಎಂದು ತಿಳಿಯಿತು. ಈ ಸಂಖ್ಯೆಯನ್ನು ಇಸ್ಲಾಂನಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಹೆಚ್ಚಾಗಿ ದೇವರ ಆಶೀರ್ವಾದವನ್ನು ಆಹ್ವಾನಿಸುವ ಮಾರ್ಗವಾಗಿ ಬಳಸಲಾಗುತ್ತದೆ.
ಒಂದು ವರ್ಷದ ಪವಿತ್ರ ಕುರಿಗೆ ಭಾರಿ ಡಿಮ್ಯಾಂಡ್!
ಈ ಕುರಿಮರಿ ಕಳೆದ ವರ್ಷ ಜನಿಸಿದ್ದು, ಈವರೆಗೂ ಈ ಕುರಿಯನ್ನು ಖರೀದಿ ಮಾಡಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. 70 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿವರೆಗೆ ಆಫರ್ ನೀಡಿದ್ದಾರೆ. ಆದರೆ ರಾಜು ಸಿಂಗ್ ಮಾತ್ರ ಈ ಆಫರ್ ಗಳನ್ನು ನಿರಾಕರಿಸಿದ್ದಾರೆ. ಈ ಕುರಿ ನನಗೆ ಬಹಳ ಪ್ರಿಯವಾದದ್ದಾಗಿದೆ ಅದಕ್ಕೆ ಎಷ್ಟು ದುಡ್ಡು ಕೊಟ್ಟರೂ, ಇದನ್ನು ಮಾರುವುದಿಲ್ಲ ಎಂದು ಹೇಳಿದ್ದಾರೆ.
ಕುರಿಮರಿಯ ಬೆಲೆ ಕೋಟ್ಯಂತರ ರೂಪಾಯಿ ಎಂದು ಅಂದಾಜಿಸಿದಾಗಿನಿಂದ, ಈಗ ಅದನ್ನು ಹಿಂಡಿನಲ್ಲಿರುವ ಇತರ ಕುರಿಮರಿಗಳಿಂದ ಪ್ರತ್ಯೇಕವಾಗಿ ಇರಿಸಲಾಗುತ್ತದೆ ಮತ್ತು ದಾಳಿಂಬೆ, ಪಪ್ಪಾಯಿ, ರಾಗಿ ಮತ್ತು ಹಸಿರು ತರಕಾರಿಗಳ ವಿಶೇಷ ಆಹಾರವನ್ನು ನೀಡಲಾಗುತ್ತದೆ. ಹೆಚ್ಚಿನ ಮೌಲ್ಯದ ಕಾರಣ, ಕುರಿಮರಿಯನ್ನು ರಕ್ಷಿಸಲು ರಾಜು ಸಿಂಗ್ ವಿಶೇಷ ಕ್ರಮಗಳನ್ನು ಕೈಗೊಂಡಿದ್ದಾರೆ ಮತ್ತು ಅದನ್ನು ಅವರ ಕುಟುಂಬದೊಂದಿಗೆ ಅವರ ಮನೆಯೊಳಗೆ ಇರಿಸುತ್ತಾರೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications