Get Updates
Get notified of breaking news, exclusive insights, and must-see stories!

INDIA ಬಣಕ್ಕೆ ಮತ್ತೊಂದು ಆಘಾತ? ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾದ ಎಎಪಿ

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಶನಿವಾರ ಬಿಹಾರದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದೆ, ಇದು 2024 ರ ಲೋಕಸಭಾ ಚುನಾವಣೆಗೆ ಮುನ್ನ ಪ್ರತಿಪಕ್ಷಗಳ ಒಗ್ಗಟ್ಟನ್ನು ಮತ್ತಷ್ಟು ಕುಗ್ಗಿಸಬಹುದು.

ಎಎಪಿ ಪ್ರಧಾನ ಕಾರ್ಯದರ್ಶಿ ಸಂದೀಪ್ ಪಾಠಕ್ ಅವರು ರಾಷ್ಟ್ರ ರಾಜಧಾನಿಯಲ್ಲಿ ಎಎಪಿಯ ಬಿಹಾರ ಘಟಕದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು. 2025ರಲ್ಲಿ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

 Arvind Kejriwal

ಸಭೆಯಲ್ಲಿ ಸಂದೀಪ್ ಪಾಠಕ್ ಅವರು ಬಿಹಾರದಲ್ಲಿ ಪಕ್ಷವನ್ನು ಬಲಪಡಿಸುವ ಬಗ್ಗೆ ಒತ್ತಿ ಹೇಳಿದ್ದಾರೆ. ದೆಹಲಿಯ ಎಎಪಿ ಶಾಸಕ ಮತ್ತು ಬಿಹಾರ ಉಸ್ತುವಾರಿ ಅಜೇಶ್ ಯಾದವ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು. "ಕೊಳಕು ರಾಜಕೀಯದಿಂದಾಗಿ ರಾಜ್ಯವು ಎಲ್ಲಿ ಇರಬೇಕೋ ಅಲ್ಲಿ ಮುನ್ನಡೆಯಲು ಸಾಧ್ಯವಾಗದಿರುವುದು ಬಿಹಾರದ ದೌರ್ಭಾಗ್ಯ, ಬಿಹಾರದಲ್ಲಿ ಎಎಪಿ ಚುನಾವಣೆಯಲ್ಲಿ ಸ್ಪರ್ಧಿಸುತ್ತದೆ. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸಲು, ಸಂಘಟನೆ ಪ್ರಬಲವಾಗಿರುವುದು ಅವಶ್ಯಕ" ಎಂದು ಪಾಠಕ್ ಹೇಳಿದರು.

ಪಾಠಕ್ ಬಿಹಾರದ ಪಕ್ಷದ ನಾಯಕರನ್ನು ತಮ್ಮ ಸಂಘಟನೆಯನ್ನು ವಿಸ್ತರಿಸಲು ಪ್ರತಿ ಹಳ್ಳಿಯಲ್ಲಿ ಸಮಿತಿಗಳನ್ನು ನಿರ್ಮಿಸಲು ಸೂಚನೆ ನೀಡಿದ್ದಾರೆ. ಬಿಹಾರದಲ್ಲಿ ನಾವು ಚುನಾವಣೆಗೆ ಸ್ಪರ್ಧಿಸುತ್ತೇವೆ, ಆದರೆ ಯಾವಾಗ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸುತ್ತದೆ, ಬಿಹಾರದಲ್ಲಿ ನೇರವಾಗಿ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಿಲ್ಲ, ಅದಕ್ಕಾಗಿ ಮೊದಲು ಸಂಘಟನೆಯನ್ನು ಬಲಪಡಿಸಬೇಕು, ಪ್ರತಿ ಹಳ್ಳಿಯಲ್ಲೂ ನಮ್ಮದೇ ಆದ ಸಮಿತಿ ರಚಿಸಬೇಕು. ಸಂಘಟನೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಈಗಿನಿಂದಲೇ ಶ್ರಮಿಸಿ. ಸಂಘಟನೆಯು ಬಲಗೊಂಡ ನಂತರ ನಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ ಎಂದು ಪಾಠಕ್ ಹೇಳಿದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಬಲಿಷ್ಠ ಸಂಘಟನೆ ಅಗತ್ಯ ಎಂದು ಒತ್ತಿ ಹೇಳಿದ ಪಾಠಕ್, ಗುಜರಾತ್‌ನಲ್ಲಿ ಮಾಡಿದಂತೆಯೇ ಬಿಹಾರದಲ್ಲಿ ಎಎಪಿ ಸಂಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಲಿದೆ ಎಂದು ಹೇಳಿದರು. ಪಕ್ಷವು ಮೊದಲು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೂಲಕ ರಾಜ್ಯವನ್ನು ಪ್ರವೇಶಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ವಿರೋಧ ಪಕ್ಷವಾದ ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ (ಇಂಡಿಯಾ) ಕುರಿತು ಮಾತನಾಡಿದ ಅವರು, "ಅಭಿಪ್ರಾಯಗಳು ಭಿನ್ನವಾಗಿದ್ದರೂ, ದೇಶವು ಮೊದಲು ಬರುತ್ತದೆ" ಎಂದು ಹೇಳಿದರು. 'ಎಎಪಿ ರಾಷ್ಟ್ರೀಯ ಪಕ್ಷವಾಗಿದ್ದು, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ' ಎಂದ ಅವರು, ಮೈತ್ರಿ ಬಗ್ಗೆ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಬಿಜೆಪಿಯ ಪ್ರತಿಕ್ರಿಯೆ

ಬಿಹಾರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಎಎಪಿ ಘೋಷಿಸಿದ್ದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸೈಯದ್ ಶಾನವಾಜ್ ಹುಸೇನ್, "ಬಿಹಾರದಲ್ಲಿ 40 ಸ್ಥಾನಗಳಿವೆ ಮತ್ತು ಎಲ್ಲಾ ಸ್ಥಾನಗಳನ್ನು ಎನ್‌ಡಿಎ ಗೆಲ್ಲುತ್ತದೆ. ಎಎಪಿ ಬಿಹಾರದಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನಮಗೆ ಯಾವುದೇ ತೊಂದರೆ ಇಲ್ಲ, ಬಿಹಾರಕ್ಕೆ ಆಹ್ವಾನಿಸಿದವರಿಗೆ ತೊಂದರೆಯಾಗುತ್ತದೆ." ಎಂದು ಹೇಳಿದರು.

ಜೆಡಿಯು, ಆರ್‌ಜೆಡಿ ಪ್ರತಿಕ್ರಿಯೆ

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸಂಸದ ಮನೋಜ್ ಕೂಡ ಬಿಹಾರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಎಎಪಿ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದಾರೆ. "ಇಂಡಿಯಾ ಮೈತ್ರಿಕೂಟದ ಅಡಿಪಾಯವನ್ನು ಹಾಕಿದಾಗ, ಕೆಲವು ತತ್ವಗಳನ್ನು ರಚಿಸಲಾಯಿತು. ಈ ತತ್ವಗಳ ಬಗ್ಗೆ ವಿವರವಾದ ಮಾತುಕತೆ ನಡೆಯಿತು. ಈ ಹೇಳಿಕೆಯನ್ನು ಬದಿಗಿಟ್ಟು, ಅವರು (ಎಎಪಿ) ಆ ತತ್ವಗಳಿಗೆ ಬದ್ಧರಾಗುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ಮನೋಜ್ ಝಾ ಹೇಳಿದರು.

ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನೀರಜ್ ಕುಮಾರ್ ಮಾತನಾಡಿ, "ಪ್ರತಿಯೊಂದು ಪಕ್ಷಕ್ಕೂ ತನ್ನನ್ನು ತಾನು ವಿಸ್ತರಿಸಿಕೊಳ್ಳುವ ಹಕ್ಕಿದೆ. ನಾವು ಇತರ ರಾಜ್ಯಗಳಿಗೂ ವಿಸ್ತರಿಸುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಜಯ್ ಸಿಂಗ್ ಇಬ್ಬರೂ ಒಟ್ಟಾಗಿ ಹೋರಾಡುತ್ತೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ರಾಜ್ಯಗಳೊಳಗಿನ ಇಂಡಿಯಾ ಮೈತ್ರಿ ಭಿನ್ನಾಭಿಪ್ರಾಯಗಳನ್ನು ಈ ಅವಧಿಯಲ್ಲಿ ಪರಿಹರಿಸಲಾಗುವುದು." ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+