Get Updates
Get notified of breaking news, exclusive insights, and must-see stories!

ಹಬ್ಬದ ಬೆನ್ನಲ್ಲೆ ಸಾವಿನ ಸೂತಕ; ದುರ್ಗಾ ಮೂರ್ತಿ ವಿಸರ್ಜನೆ ವೇಳೆ 14 ಸಾವು

ನವದೆಹಲಿ, ಅ. 06: ಐದು ದಿನಗಳ ದುರ್ಗಾಪೂಜೆ ಹಬ್ಬವು ಮುಕ್ತಾಯವಾಗುತ್ತಿದ್ದಂತೆ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಸಾವಿನ ಸೂತಕ ಮನೆ ಮಾಡಿದೆ. ಮೂರು ರಾಜ್ಯಗಳಲ್ಲಿ ದುರ್ಗಾ ವಿಗ್ರಹ ವಿಸರ್ಜನೆಗೆ ತೆರಳಿದ್ದ 14 ಮಂದಿಗೆ ಮೃತಪಟ್ಟಿದ್ದು, ಹಲವರು ಕಾಣೆಯಾಗಿದ್ದಾರೆ.

ಪಶ್ಚಿಮ ಬಂಗಾಳದ ಜಲ್‌ಪೈಗುರಿಯಲ್ಲಿ, ದುರ್ಗಾ ದೇವಿಯ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಮಾಲ್ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದ್ದರಿಂದ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ 9.15 ರ ಸುಮಾರಿಗೆ ಹಲವಾರು ಭಕ್ತರು ನದಿ ದಂಡೆಯಲ್ಲಿ ಜಮಾಯಿಸಿದಾಗ ಈ ಘಟನೆ ಸಂಭವಿಸಿದೆ.

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಎಂಟು ಸಾವು

"ನಾವು ಸುಮಾರು 60 ಜನರನ್ನು ರಕ್ಷಿಸಿದ್ದೇವೆ. ಅವರಲ್ಲಿ 15 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಂಭದಲ್ಲಿ, ಎರಡು ಶವಗಳನ್ನು ಹೊರತೆಗೆಯಲಾಗಿತ್ತು. ಆದರೆ ನಂತರ ಐದು ದೇಹಗಳು ಪತ್ತೆಯಾಗಿವೆ" ಎಂದು ಜಲ್‌ಪೈಗುರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೌಮಿತಾ ಗೋಡರಾ ಬಸು ರಾತ್ರಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬೆಳಗಿನ ಜಾವ ಮತ್ತೊಂದು ಮೃತದೇಹ ಪತ್ತೆಯಾಗಿದೆ.

ಈ ವಾರಪೂರ್ತಿ ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಾಲ್ ನದಿಯಲ್ಲಿ ದಿಢೀರ್ ಪ್ರವಾಹ ಉಂಟಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ, ಈ ವಾರಾಂತ್ಯದಲ್ಲಿ ಅಂದರೆ, ಅಕ್ಟೋಬರ್ 8 ಮತ್ತು 9 ರಂದು ರಾಜ್ಯದಲ್ಲಿ ಮತ್ತೆ ಭಾರೀ ಮಳೆಯಾಗಲಿದೆ.

ಇನ್ನೂ ಪತ್ತೆಯಾಗದ ನದಿಯಲ್ಲಿ ಮುಳುಗಿದವರ ಮೃತದೇಹ

ಇನ್ನೂ ಪತ್ತೆಯಾಗದ ನದಿಯಲ್ಲಿ ಮುಳುಗಿದವರ ಮೃತದೇಹ

ಉತ್ತರ ಪ್ರದೇಶದ ಆಗ್ರಾದಲ್ಲಿ 15 ವರ್ಷದ ಬಾಲಕ ಮತ್ತು 19 ಮತ್ತು 22 ವರ್ಷದ ಇಬ್ಬರು ಯುವಕರು ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಸಂಜೆಯವರೆಗೂ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಯಾರೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ವಿಗ್ರಹ ವಿಸರ್ಜನೆಗೆ ಬಳಸುತ್ತಿದ್ದ ಸ್ಥಳದಲ್ಲಿಯೇ ದುರ್ಘಟನೆ

ವಿಗ್ರಹ ವಿಸರ್ಜನೆಗೆ ಬಳಸುತ್ತಿದ್ದ ಸ್ಥಳದಲ್ಲಿಯೇ ದುರ್ಘಟನೆ

ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ದುರ್ಗಾ ದೇವಿ ವಿಗ್ರಹ ವಿಸರ್ಜನೆ ವೇಳೆ ಮಳೆ ನೀರಿನಿಂದ ತುಂಬಿದ್ದ ಹಳ್ಳದಲ್ಲಿ ಮುಳುಗಿ ಆರು ಮಂದಿ ಸಾವನ್ನಪ್ಪಿರುವ ಇಂತಹುದೇ ದಾರುಣ ಘಟನೆ ಬುಧವಾರ ನಡೆದಿದೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಎಲ್ಲಾ ಆರು ಮೃತದೇಹಗಳನ್ನು ಪತ್ತೆ ಹಚ್ಚಲಾಗಿದೆ. ಶವಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಘಟನೆ ಸಂಭವಿಸಿದ ಕಂದಕವನ್ನು ಸ್ಥಳೀಯರು ಆಗಾಗ್ಗೆ ವಿಗ್ರಹ ವಿಸರ್ಜನೆಗೆ ಬಳಸುತ್ತಾರೆ. ಮೃತರು ಆಳವಿಲ್ಲದ ಹಳ್ಳ ಎಂದು ಭಾವಿಸಿ ಕೆಳಗೆ ಇಳಿದರು, ಆದರೆ ಅದು ಆಳವಾಗಿತ್ತು. ಹೀಗಾಗಿ ಎಲ್ಲರೂ ಮುಳುಗಿದ್ದಾರೆ" ಎಂದು ಎಂದು ಅಜ್ಮೀರ್ ಪೊಲೀಸ್ ವರಿಷ್ಠಾಧಿಕಾರಿ ಚುನಾ ರಾಮ್ ಜತ್ ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಾದ್ಯಂತ 20 ಜೀವಗಳು ಬಲಿ

ಮಹಾರಾಷ್ಟ್ರದಾದ್ಯಂತ 20 ಜೀವಗಳು ಬಲಿ

ಇದೇ ರೀತಿಯ ಘಟನೆಗಳು ಸೆಪ್ಟೆಂಬರ್ 9 ರಂದು ನಡೆದ ಗಣೇಶ ವಿಸರ್ಜನೆಯ ಸಮಯದಲ್ಲಿ ವರದಿಯಾಗಿವೆ. ಮಹಾರಾಷ್ಟ್ರದಾದ್ಯಂತ ಕನಿಷ್ಠ 20 ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದರು. ಹರಿಯಾಣದಲ್ಲಿ ಎಂಟು ಜನರು ಸಾವನ್ನಪ್ಪಿದ್ದರು.

ಕೊರೊನಾ ಸಾಂಕ್ರಾಮಿಕದಿಮದ ವಿಧಿಸಿದ್ದ ನಿರ್ಬಂಧಗಳಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಹಬ್ಬದ ಆಚರಣೆಗಳನ್ನು ಮೊಟಕುಗೊಳಿಸಿದವು. ಆ ನಿರ್ಬಂಧಗಳಿಂದ ವಿನಾಯಿತಿ ದೊರೆತ ಕಾರಣ ಜನರು ಅತೀ ಉತ್ಸಾಹದಿಂದ ಹಬ್ಬಗಳನ್ನು ಆಚರಿಸುತ್ತಿದ್ದಾರೆ. ಆದರೆ, ಇದೇ ಸಮಯದಲ್ಲಿ ಇಂತಹ ದುರಂತ ಘಟನೆಗಳು ಹಬ್ಬದ ಖುಷಿಯನ್ನು ಮರೆಸಿ, ಮೃತರ ಮನೆ, ಊರಿನಲ್ಲಿ ಸೂತಕದ ವಾತಾವರಣ ಸೃಷ್ಟಿಸುತ್ತವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+