School Holiday: ಫೆಬ್ರವರಿ 14ರಂದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಣೆ
School Holiday Announced: ಶಾಲಾ ವಿದ್ಯಾರ್ಥಿಗಳಿಗೆ ರಜೆ ಬಂತೆಂದರೆ ಸಾಕು ಕುಣಿದು ಕುಪ್ಪಳಿಸಿ ಬಿಡುತ್ತಾರೆ. ಸದ್ಯ ಬೇಸಿಗೆ ಇದ್ದು, ಬೇಸಿಗೆ ರಜೆ ಮುನ್ನವೇ ಈ ಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಬ್ಬ, ಹರಿದಿನಗಳಲ್ಲಿ, ಪ್ರಮುಖ ಸಂದರ್ಭಗಳಲ್ಲಿ ರಜೆ ಘೋಷಿಸಲಾಗುತ್ತದೆ. ಅದೇ ರೀತಿ ಫೆಬ್ರವರಿ 14ರಂದು ಶುಕ್ರವಾರ ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದಕ್ಕೆ ಕಾರಣವೇನು, ಎಲ್ಲೆಲ್ಲಿ ರಜೆ ಇದೆ?
ಬೇಸಿಗೆ ರಜೆ ಮುನ್ನವೇ ಎರಡು ಮೂರು ದಿನಗಳ ಕಾಲ ವಿದ್ಯಾರ್ಥಿಗಳು ರಜೆ ಪಡೆದಿದ್ದಾರೆ. ಶಬ್-ಎ-ಬರಾತ್ ಮತ್ತು ಪಂಚನನ್ ಬರ್ಮಾ ಜಯಂತಿ ಆಚದರಣೆ ಕಾರಣದಿಂದಾಗಿ ಪಶ್ಚಿಮ ಬಂಗಾಳ ಶಾಲೆಗಳಿಗೆ ಇಂದು ಫೆಬ್ರವರಿ 13 ಗುರುವಾರ ಹಾಗೂ 14ರ ಶುಕ್ರವಾರದಂದು ಶಾಲಾ ರಜೆ ನೀಡಿ ಆದೇಶಿಸಲಾಗಿದೆ.

ಈ ಹಿಂದೆ ಫೆಬ್ರವರಿ 14 ಅನ್ನು ಮಾತ್ರ ಶಬ್-ಎ-ಬರಾತ್ಗೆ ರಜಾ ದಿನವೆಂದು ಗುರುತಿಸಿದ್ದ ಸರ್ಕಾರ, ಹಬ್ಬದ ದಿನಾಂಕ ಫೆಬ್ರವರಿ 13 ಎಂದು ದೃಢಪಡಿಸಿದೆ. ಹೀಗಾಗಿ ಆ ದಿನವು ಸಹ ರಜೆ ನೀಡಲು ತಿಳಿಸಿದೆ. ಕೇವಲ ಪಶ್ಚಿಮ ಬಂಗಾಳ ಮಾತ್ರವಲ್ಲದೇ, ಹೈದರಾಬಾದ್, ತೆಲಂಗಾಣದಲ್ಲೂ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಫೆಬ್ರವರಿ 14 ಠಾಕೂರ್ ಪಂಚನನ್ ಬರ್ಮಾ ಅವರ ಜನ್ಮ ದಿನಾಚರಣೆ ಇದು. ಈ ದಿನದಂದು ಎಲ್ಲ ಸರ್ಕಾರಿ ಶಾಲೆಗಳು, ಸರ್ಕಾರಿ ಕಚೇರಿಗಳು, ಸಂಸ್ಥೆಗಳು ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಲಿವೆ. ಒಟ್ಟಾರೆ ಈ ಎರಡು ದಿನ ರಜೆಗಳ ಸೇರಿದಂತೆ ಫೆಬ್ರವರಿ 15 ಹಾಗೂ 16ರ ವಾರಾಂತ್ಯದ ರಜೆಗಳು ಸರ್ಕಾರಿ ನೌಕರರಿಗೆ ಸಿಗುತ್ತವೆ.

ಸರ್ಕಾರದ ನಿರ್ಧಾರ ಬೆನ್ನಲ್ಲೆ ಇಂದಿನಿಂದ ಶಾಲೆಗಳು, ಸರ್ಕಾರಿ ಕಚೇರಿಗಳು, ಸಂಸ್ಥೆಗಳು, ಶಾಸನಬದ್ಧ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ರಾಜ್ಯ ಸರ್ಕಾರದ ಒಡೆತನದ ಉದ್ಯಮಗಳು ಕೆಲಸ ಸ್ಥಗಿತಗೊಳಿಸಲಿವೆ. ಸರ್ಕಾರಿ ನೌಕರರಿಗೆ 04 ದಿನಗಳ ವಿಸ್ತೃತ ರಜೆ ನೀಡಲಾಗುವುದು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ಪಶ್ಚಿಮ ಬಂಗಾಳ ಹೊರತುಪಡಿಸಿದರೆ, ಹೈದರಾಬಾದ್ನಲ್ಲೂ ಶಬ್-ಎ-ಬರಾತ್ ಆಚರಣೆ ಹಿನ್ನೆಲೆಯಲ್ಲಿ ಫೆಬ್ರವರಿ 14ರಂದು ಶುಕ್ರವಾರ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಮಂದಹಾಸ ಮೂಡಿದೆ. ಆಚರಣೆಗಳಲ್ಲಿ ಮಕ್ಕಳು, ಮಹಿಳೆಯರು, ನಾಗರಿಕರು ತೊಡಗಲಿದ್ದಾರೆ.
ಶಬ್-ಎ-ಬರಾತ್ ಆಚರಣೆ ಕುರಿತು..
ಈ ಶಬ್-ಎ-ಬರಾತ್ ಇಸ್ಲಾಮಿಕ್ ತಿಂಗಳ ಶಾಬಾನ್ನ 15 ನೇ ರಾತ್ರಿ ಆಚರಿಸುವ ಇಸ್ಲಾಮರ ಪ್ರಮುಖ ಹಬ್ಬವಾಗಿದೆ. ] ಕ್ಷಮೆ ಮತ್ತು ಕರುಣೆ ಬಗ್ಗೆ ಅಪಾರ ನಂಬಿಕೆ ಇರುತ್ತದೆ. ಈ ರಾತ್ರಿಯನ್ನು ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಪೂರ್ವಜರನ್ನು ಸ್ಮರಿಸುತ್ತಾರೆ. ಮುಸ್ಲಿಂ ಮಂದಿ ಮಸೀದಿಗಳಿಗೆ ತೆರಳಿ ಪ್ರಾರ್ಥಿಸುತ್ತಾರೆ. ಕೆಲ ಕಾಲ ಅಲ್ಲಿಯೇ ಸಮಯ ಕಳೆಯುತ್ತಾರೆ.
-
ಮಮತಾ ಬ್ಯಾನರ್ಜಿಗೆ ಸೋಲಿನ ರುಚಿ ತೋರಿಸಲು ಸಜ್ಜಾದ ಬಿಜೆಪಿ ನಾಯಕರು | West Bengal Election -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ












Click it and Unblock the Notifications