ಕಾವೇರಿ ಜಲ ವಿವಾದ: ತಮಿಳುನಾಡಿಗೆ ಸುಪ್ರಿಂ ಕೋರ್ಟಿನಲ್ಲಿ ಹಿನ್ನಡೆ
Recommended Video

ಕಾವೇರಿ ಜಲ ವಿವಾದದ ಬಗ್ಗೆ ಹೊಸ ಸುದ್ದಿ | Oneindia Kannada
ನವದೆಹಲಿ, ನವೆಂಬರ್ 21: ಸದಾ ಕಾವೇರಿ ನೀರಿಗಾಗಿ ಕ್ಯಾತೆ ತೆಗೆಯುವ ತಮಿಳುನಾಡು ಸರಕಾರಕ್ಕೆ ಈ ಬಾರಿ ಸುಪ್ರಿಂ ಕೋರ್ಟ್ ನಲ್ಲಿ ಹಿನ್ನಡೆಯಾಗಿದೆ. ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದೆ.
ಈ ವರ್ಷ ಕರ್ನಾಟಕ ಸರಕಾರ ತನಗೆ 63 ಟಿಎಂಸಿ ನೀರು ನೀಡಬೇಕು ಎಂದು ಕೋರಿ ತಮಿಳುನಾಡು ಸರಕಾರ ಸುಪ್ರಿಂ ಕೋರ್ಟ್ ಅರ್ಜಿ ಸಲ್ಲಿಸಿತ್ತು. ಆದರೆ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ತಿರಸ್ಕರಿಸಿದ್ದು ವಿಚಾರಣೆಗೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಇದರಿಂದ ಸದ್ಯಕ್ಕೆ ಕನ್ನಡಿಗರು ನಿರಾಳರಾಗಿದ್ದಾರೆ. ತಮಿಳುನಾಡು ಸರಕಾರ ಮತ್ತೆ ಇನ್ಯಾವ ಕ್ಯಾತೆ ತೆಗೆಯುತ್ತೋ ಕಾದು ನೋಡಬೇಕಾಗಿದೆ.












Click it and Unblock the Notifications