ಕೃಷ್ಣಮೃಗ ಆತ್ಮಹತ್ಯೆ ಮಾಡ್ಕೊಂಡಿದ್ದು, ಅದ್ಕೆ ಸಲ್ಲೂ ಬಚಾವ್!
ಬೆಂಗಳೂರು, ಜುಲೈ 25: 'ಯಾರ ಕಣ್ಣಿಂದ ತಪ್ಪಿಸಿಕೊಂಡರೂ ಕಾನೂನಿನ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂಬ ಮಾತಿದೆ. ಆದರೆ, ಕಾನೂನಿನ ತಪ್ಪಿಸಿಕೊಂಡ ಸೆಲೆಬ್ರಿಟಿಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ಸರಿಯಾಗಿ ತಪರಾಕಿ ಬೀಳುತ್ತಲೇ ಇರುತ್ತದೆ. ಇವತ್ತು ಸಲ್ಮಾನ್ ಕೂಡಾ ಇದರಿಂದ ಹೊರತಲ್ಲ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ರಾಜಸ್ಥಾನ ಹೈಕೋರ್ಟ್ ನಿಂದ ಶುಭ ಸುದ್ದಿ ಸಿಕ್ಕಿರಬಹುದು. ಆದರೆ, ಟ್ವಿಟ್ಟರ್ ನಲ್ಲಿ ಸಲ್ಲೂ ಬಗ್ಗೆ ಜೋಕ್ಸ್, ಟೀಕೆ, ತೀರ್ಪಿನ ಬಗ್ಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದೆ. 1998ರ ಕೃಷ್ಣಮೃಗ ಬೇಟೆ ಪ್ರಕರಣದಿಂದ ಸಲ್ಮಾನ್ ಖಾನ್ ಖುಲಾಸೆಗೊಂಡರೂ ಜನತೆಯ ಮೈಕ್ರೋ ಬ್ಲಾಗ್ ಟ್ವಿಟ್ಟರ್ ನಲ್ಲಿ ಇನ್ನೂ ತಪ್ಪಿತಸ್ಥ.[ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ಗೆ ಖುಲಾಸೆ]
1998ರಲ್ಲಿ ಕಂಕಾನಿ ಗ್ರಾಮದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ರಾಜಸ್ಥಾನದ ಕಾಡೊಂದರಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗ ಬೇಟೆಯಾಡಿದ್ದರು.
ಸಲ್ಮಾನ್ ಅವರಿಗೆ ಕೆಳ ಹಂತದ ನ್ಯಾಯಾಲಯದಲ್ಲಿ ಸಲ್ಮಾನ್ ಖಾನ್ ಅವರನ್ನು ಅಪರಾಧಿ ಎಂದು ಪರಿಗಣಿಸಿ 5 ವರ್ಷ ಶಿಕ್ಷೆ ವಿಧಿಸಲಾಗಿತ್ತು. ಈ ಆದೇಶದ ವಿರುದ್ಧ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ, ಕೃಷ್ಣಮೃಗ ಬೇಟೆಗೆ ಸಂಬಂಧಿಸಿದ ಎರಡು ಪ್ರಕರಣಗಳಿಂದಲೂ ಖುಲಾಸೆಗೊಂಡಿದ್ದಾರೆ.

ಸಲ್ಮಾನ್ ಜತೆ ಸಾಥಿಗಳಿಗೂ ರಿಲೀಫ್
ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ನಟಿ ಸೋನಾಲಿ ಬೇಂದ್ರೆ, ತಬು, ನೀಲಂ, ಸೈಫ್ ಅಲಿ ಖಾನ್ ಮುಂತಾದವರಿದ್ದರು. ಎಲ್ಲರ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಲೂನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಎಲ್ಲರಿಗೂ ಈಗ ಕೋರ್ಟ್ ಆದೇಶದಿಂದ ರಿಲೀಫ್ ಸಿಕ್ಕಿದೆ

ಸಲ್ಲೂಗೆ ರಿಲೀಫ್, ಟ್ವಿಟ್ಟರ್ ನಲ್ಲಿ ಗುದ್ದು
ಭಾಯಿಗೆ ಗೆಲ್ಲುವುದು ಇಷ್ಟ ಅದಕ್ಕೆ ಕೋರ್ಟ್ ತೀರ್ಪು ಪರ ಬಂದಿದೆ.

ನ್ಯಾಯಾಂಗ ವ್ಯವಸ್ಥೆ ನೋಡಿ ಹೇಗಿದೆ
ನ್ಯಾಯಾಂಗ ವ್ಯವಸ್ಥೆ ನೋಡಿ ಹೇಗಿದೆ

ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮತ್ತೊಂದು ಟ್ವೀಟ್
ನ್ಯಾಯಾಂಗ ವ್ಯವಸ್ಥೆ ಬಗ್ಗೆ ಮತ್ತೊಂದು ಟ್ವೀಟ್

ಸಲ್ಮಾನ್ ಗೆ ಸಿಕ್ಕ ಸಿಹಿ ಸುದ್ದಿಗಳು
ಸಲ್ಮಾನ್ ಗೆ ಸಿಕ್ಕ ಸಿಹಿ ಸುದ್ದಿಗಳು 2015,2016 ಕೇಸ್ ಗಳಿಂದ ಮುಕ್ತಿ 2017?

ವಾಹ್ ಸಲ್ಮಾನ್ ದು ಎಂಥಾ ಪ್ರತಿಭೆ
ವಾಹ್ ಸಲ್ಮಾನ್ ದು ಎಂಥಾ ಪ್ರತಿಭೆ

ಹಣಬಲದ ಮುಂದೆ ಎಲ್ಲಾ ಗೌಣ
ಸೆಲೆಬ್ರಿಟಿಗಳ ಪ್ರಕರಣಗಳ ಹಣೆಬರಹವೇ ಇಷ್ಟು. ಹಣಬಲದ ಮುಂದೆ ಎಲ್ಲಾ ಗೌಣ.












Click it and Unblock the Notifications