ಸಂಸದರಾಗಿ ಅತ್ಯಂತ ಕಳಪೆ ರೆಕಾರ್ಡ್ ನಿರ್ಮಿಸಿದ ಸಚಿನ್
ರಾಜ್ಯಸಭಾ ಸಂಸದರಾಗಿರುವ ಸಚಿನ್ ತೆಂಡೂಲ್ಕರ್ ಅವರು ಸಂಸತ್ತಿನ ಹಾಜರಾತಿ ವಿಷಯದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ನಟಿ ರೇಖಾ ಅವರು ಅತ್ಯಂತ ಕಳಪೆ ರೆಕಾರ್ಡ್ ಹೊಂದಿದ್ದಾರೆ.
ನವದೆಹಲಿ, ಏಪ್ರಿಲ್ 06: ರಾಜ್ಯಸಭಾ ಸಂಸದರಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಸತ್ತಿನ ಹಾಜರಾತಿ ವಿಷಯದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಮಾಡಿದವರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ನಟಿ ರೇಖಾ ಅವರು ಅತ್ಯಂತ ಕಳಪೆ ರೆಕಾರ್ಡ್ ಹೊಂದಿದ್ದಾರೆ.
ಮೇಲ್ಮನೆಗೆ ನಾಮಾಂಕಿತರಾಗಿರುವ 12 ಮಂದಿ ಸದಸ್ಯರ ಪೈಕಿ ತೆಂಡೂಲ್ಕರ್ ಅವರು ಶೇ 6.6ರಷ್ಟು ಮಾತ್ರ ಹಾಜರಾತಿ ಹೊಂದಿದ್ದಾರೆ. ಮಾರ್ಚ್ 31, 2017ರ ಗಣತಿಯಂತೆ ಸಚಿನ್ ಅವರು348 ಸೆಷನ್ ಗಳ ಪೈಕಿ ಕೇವಲ 23 ಕಲಾಪಗಳಲ್ಲಿ ಕಾಣಿಸಿಕೊಂಡಿದ್ದಾರೆ.

2012ರಲ್ಲಿ ನಾಮಾಂಕಿತರಾಗಿರುವ ಸಚಿನ್ ಅವರು ಇಲ್ಲಿ ತನಕ 22 ಪ್ರಶ್ನೆಗಳನ್ನು ಮಾತ್ರ ಕೇಳಿದ್ದು, ಯಾವುದೇ ಘನಚರ್ಚೆಗಳಲ್ಲಿ
ಪಾಲ್ಗೊಳ್ಳದ ಸಂಸದರೆನಿಸಿಕೊಂಡಿದ್ದಾರೆ.
ಆದರೆ, ಸಚಿನ್ ಅಭಿಮಾನಿಗಳಿಗೆ ಸಮಾಧಾನಕರ ಸಂಗತಿ ಎಂದರೆ, ಸಚಿನ್ ಗಿಂತ ಕಡಿಮೆ ಹಾಜಾರಾತಿ ಹಾಗೂ ಪ್ರಶ್ನೆಗಳನ್ನು ಕೇಳಿದವರ ಪೈಕಿ ನಟಿ ರೇಖಾ ಮುಂಚೂಣಿಯಲ್ಲಿದ್ದಾರೆ. ಬಾಲಿವುಡ್ ನ ಹಿರಿಯ ನಟಿ ರೇಖಾ ಅವರಿಗಿಂತ ಸಚಿನ್ ಅವರು ಹೆಚ್ಚುವರಿ ಐದು ದಿನಗಳ ಕಾಲ ಸಂಸತ್ತಿಗೆ ಹಾಜರಾಗಿದ್ದಾರೆ.
ರೇಖಾ ಅವರು ಕೂಡಾ 2012ರಿಂದಲೂ ರಾಜ್ಯಸಭಾ ಸದಸ್ಯರಾಗಿದ್ದು 348 ದಿನಗಳ ಕಲಾಪದ ಪೈಕಿ ಕೇವಲ 18 ದಿನಗಳು ಮಾತ್ರ ಸಂಸತ್ತಿಗೆ ಬಂದಿದ್ದಾರೆ. ಶೇ 5.17ರಷ್ಟು ಮಾತ್ರ ಹಾಜರಾತಿ ಹೊಂದಿರುವ ರೇಖಾ ಅವರು ಒಂದೇ ಒಂದು ಪ್ರಶ್ನೆಯನ್ನು ಕೇಳಿಲ್ಲ, ಯಾವುದೇ ಚರ್ಚೆಯಲ್ಲೂ ಪಾಲ್ಗೊಂಡಿಲ್ಲ.
ಇನ್ನು ಸಂಸದರ ನಿಧಿ ಬಳಕೆ ವಿಷಯಕ್ಕೆ ಬಂದರೆ ಸಚಿನ್ ಅವರು 21.19 ಕೋಟಿ ರು ವೆಚ್ಚದ ಕಾಮಗಾರಿಗಳಿಗೆ ಶಿಫಾರಸು ಮಾಡಿದ್ದಾರೆ. ರೇಖಾ ಅವರು ಕೇವಲ 9.28 ಕೋಟಿ ರು ವೆಚ್ಚದ ಕಾಮಗಾರಿಗೆ MPLADS ವತಿಯಿಂದ ಹಣ ಮಂಜೂರು ಮಾಡಿಸಿದ್ದಾರೆ.
ದಿನವೊಂದಕ್ಕೆ ರೇಖಾ ಅವರ ಖರ್ಚು ವೆಚ್ಚ 3.6 ಲಕ್ಷರು ನಷ್ಟಿದ್ದರೆ, ಸಚಿನ್ ಅವರ ಖರ್ಚು ವೆಚ್ಚ್ಅ 2.56 ಲಕ್ಷ ರು ನಷ್ಟಿದೆ. ಇಬ್ಬರು ಕಡಿಮೆ ಹಾಜರಾತಿ ಹೊಂದಿರುವುದರಿಂದ ಖರ್ಚು ವೆಚ್ಚ ಸಂಖ್ಯೆ ಕಡಿಮೆಯಿದೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications