ಅಯೋಧ್ಯೆಯಲ್ಲಿ ಮುಸ್ಲಿಮರಿಗೆ ಇಫ್ತಾರ್ ಊಟ ಬಡಿಸಿದ ಆರೆಸ್ಸೆಸ್
ಅಯೋಧ್ಯೆ, ಜೂನ್ 15: ವಿವಾದಗಳು ಏನೇ ಇರಬಹುದು ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಸ್ಲಿಂ ವಿಭಾಗ ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್ ಎಂ) ಅಯೋಧ್ಯೆಯಲ್ಲಿ ಮುಸ್ಲಿಮರಿಗಾಗಿ ಇಫ್ತಾರ್ ಪಾರ್ಟಿ ಆಯೋಜಿಸಿ ಸುದ್ದಿಯಾಗಿದೆ.
"ಮುಸ್ಲಿಂ ಸಮುದಾಯದವರು ಇಫ್ತಾರ್ ನಲ್ಲಿ ಪಾಲ್ಗೊಂಡರು. ಮತ್ತು ಬೀಫ್ ತಿಂದರೆ ಆರೋಗ್ಯಕ್ಕೆ ಹಾನಿ ಎಂದು ಅವರು ಬೀಫ್ ತಿಂದಿಲ್ಲ. ಅದರೆ ಹಾಲು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಒಪ್ಪಿಕೊಂಡಿದ್ದಾರೆ," ಎಂದು ಎಂಆರ್ ಎಂನ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

ಬುಧವಾರ ಆಯೋಜಿಸಲಾದ ಇಫ್ತಾರ್ ಕೂಟದಲ್ಲಿ ಇಂದ್ರೇಶ್ ಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಅವರು ಮುಸ್ಲಿಂ ಧರ್ಮದಲ್ಲೂ ಗೋ ಹತ್ಯೆಗೆ ಅವಕಾಶವಿಲ್ಲ ಎಂದು ಹೇಳಿದ್ದಾರೆ.

2002ರಲ್ಲಿ ಅಂದಿನ ಸರಸಂಘಚಾಲಕರಾಗಿದ್ದ ಕೆ.ಎಸ್ ಸುದರ್ಶನ್ ಆರ್.ಎಸ್.ಎಸ್ ನ್ನು ಮುಸ್ಲಿಂ ಸಮುದಾಯಕ್ಕೂ ವಿಸ್ತರಿಸುವ ಆಲೋಚನೆಯೊಂದಿಗೆ ಎಂಆರ್ ಎಂ ಹುಟ್ಟುಹಾಕಿದ್ದರು.












Click it and Unblock the Notifications