ಹರ್ಯಾಣದಲ್ಲಿ ಹ್ಯಾಪಿ ನ್ಯೂ ಇಯರ್ ಭಾಗ-2ǃ
ನವದೆಹಲಿ: ಅ.29: ದರೋಡೆ ಕತೆ ಆಧರಿಸಿದ ಸಿನಿಮಾಗಳಿಗೆ ಭಾರತದಲ್ಲಿ ಕೊರತೆಯಿಲ್ಲ. ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಹ್ಯಾಪಿ ನ್ಯೂ ಇಯರ್, ಧೂಮ್ ಚಿತ್ರಗಳ ಸರಣಿ ಇವಕ್ಕೆ ಉತ್ತಮ ಉದಾಹರಣೆ. ಆದರೆ ಅಂತಹುದೇ ದರೋಡೆ ನಿಜವಾಗಿ ನಡೆದರೆ ಹೇಗೆ? ಅದೂ ಭಾರತದಲ್ಲಿ..
ಹೌದು ಅಲ್ಲಿ ಕೊರೆದಿದ್ದು ಸುಮಾರು 2.5 ಅಡಿ ಸುತ್ತಳತೆಯ 125 ಅಡಿ ದೂರದ ಸುರಂಗ, ಅಪಹರಿಸಿದ್ದು ಕೋಟ್ಯಂತರ ಮೌಲ್ಯದ ಚಿನ್ನಾಭರಣ. ಪಕ್ಕಾ ಸಿನಿಮೀಯ ಶೈಲಿಯ ಬೃಹತ್ ದರೋಡೆ ಹರ್ಯಾಣದ ಗೊಹಾನ ಜಿಲ್ಲೆಯಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ನಡೆದಿದೆ.[ಶಿವಮೊಗ್ಗ ಮಾಚೇನಹಳ್ಳಿ ಬ್ಯಾಂಕ್ ದರೋಡೆ]

ಬ್ಯಾಂಕ್ ಗೆ ಕನ್ನ ಕೊರೆದ ಕಳ್ಳರು 90 ಕ್ಕೂ ಹೆಚ್ಚು ಲಾಕರ್ ಗಳನ್ನು ಒಡೆದು ಚಿನ್ನಾಭರಣ ಹೊತ್ತು ಪರಾರಿಯಾಗಿದ್ದಾರೆ. ಬ್ಯಾಂಕ್ ನ ಸ್ಟ್ರಾಂಗ್ ರೂಮಿಗೇ ಕನ್ನಹಾಕಿ ಹಣ ಮತ್ತು ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಾರೆ. ಬ್ಯಾಂಕ್ ನಲ್ಲಿದ್ದ 360 ಲಾಕರ್ ಗಳಲ್ಲಿ 90 ಲಾಕರ್ ಒಡೆದಿದ್ದಾರೆ.
ಬ್ಯಾಂಕ್ನಿಂದ ಸುಮಾರು ನೂರಾರು ಮೀಟರ್ ದೂರ ಇರುವ ಲಾಡ್ಜ್ನ ನೆಲಮಹಡಿಯ ಕೋಣೆಯೊಂದರ ನೆಲದಿಂದ ಸುರಂಗ ತೋಡಲಾಗಿದೆ. ಸುಮಾರು ಒಂದು ತಿಂಗಳಿಂದ ಈ ದರೋಡೆಗೆ ಸ್ಕೆಚ್ ಹಾಕಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.[ಮದುವೆಗಿತ್ತು ಕೆಲವೇ ಕ್ಷಣ, ಮಾಯವಾಗಿತ್ತು ಆಭರಣ!]
ಇಂತಹುದೇ ಪ್ರಕರಣ ತಿಂಗಳ ಹಿಂದೆ ಕೇರಳದಲ್ಲಿಯೂ ನಡೆದಿತ್ತು. ಕನ್ನ ಕೊರೆದು ಸುಮಾರು 8 ಕೋಟಿ ಮೌಲ್ಯದ 80 ಕೆಜಿ ಚಿನ್ನಾಭರಣ ಮತ್ತು ಹಣವನ್ನು ಲಪಟಾಯಿಸಿ ಕಳ್ಳರು ಪರಾರಿಯಾಗಿದ್ದರು. ತುರ್ತು ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಗ್ಯಾಂಗ್ನ ನಾಯಕ ಸಿಕ್ಕಿಬಿದ್ದು ಹಿಂದಿ ಸಿನಿಮಾವೊಂದರಿಂದ ಪ್ರೇರೇಪಿತನಾಗಿ ದರೋಡೆ ಮಾಡಿದ್ದೇವು ಎಂದು ತಪ್ಪು ಒಪ್ಪಿಕೊಂಡಿದ್ದ.
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications