ರಂಜಾನ್ ಹಬ್ಬಕ್ಕೆ ಶುಭಾಶಯ ಕೋರಿದ ಮೋದಿ, ಎಚ್ಡಿಕೆ
ನವದೆಹಲಿ, ಜೂನ್ 16: ಮುಸ್ಲಿಂ ಬಾಂಧವರ ಪವಿತ್ರ ಮಾಸವಾದ ರಂಜಾನ್ ಮತ್ತು ಉಪವಾಸ ಅಂತ್ಯವನ್ನು ಸೂಚಿಸುವ ಈದ್ ಅಲ್ ಫಿತರ್ ಹಬ್ಬವನ್ನು ಇಂದು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ದ್ವೇಷ, ಅಸೂಯೆಯನ್ನು ಮರೆತು ಸಾಮರಸ್ಯದಿಂದ ಬದುಕು ಸವೆಸುವ ಸಂಕಲ್ಪದೊಂದಿಗೆ ಆಚರಿಸಲ್ಪಡುವ ಈ ಹಬ್ಬಕ್ಕೆ ದೇಶದಾದ್ಯಂತ ಗಣ್ಯರು ಶುಭಾಶಯ ಕೋರಿದ್ದಾರೆ.
ಎಲ್ಲೆಡೆ ಈದ್ ಸಡಗರ: ದಾನದ ಹಬ್ಬದ ಮಹತ್ವವೇನು ಗೊತ್ತೆ?
ದೇಶದ ಪ್ರಮುಖ ಮಸೀದಿಗಳಲ್ಲಿ ಸಾವಿರಾರು ಮುಸ್ಲಿಂರು ಪ್ರಾರ್ಥನೆ ಸಲ್ಲಿಸಿ ರಂಜಾನ್ ಆಚರಿಸುತ್ತಿದ್ದಾರೆ. ಒಂದು ತಿಂಗಳ ಕಠಿಣ ಉಪವಾಸಕ್ಕೆ ಈ ದಿನ ಅಂತ್ಯ ಸಿಗಲಿದ್ದು, ಹೊಸ ಬಟ್ಟೆಗಳನ್ನು ತೊಟ್ಟು, ತಮ್ಮಿಷ್ಟಿದ ಖಾದ್ಯಗಳನ್ನು ತಯಾರಿಸಿ, ತಿಂದು ಸಂತಸ ಪಡುವುದು ಹಬ್ಬದ ವೈಶಿಷ್ಟ್ಯ.
|
ಒಗ್ಗಟ್ಟು ಮತ್ತು ಸಾಮರಸ್ಯ
ಈದ್ ಮುಬಾರಕ್! ಈ ದಿನ ನಮ್ಮ ಸಮಾಜದ ಒಗ್ಗಟ್ಟು ಮತ್ತು ಸಾಮರಸ್ಯ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸಲಿ ಎಂದು ರಂಜಾನ್ ಶುಭಾಶಯ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೊದಿ.
Array |
ಶಾಂತಿ, ನೆಮ್ಮದಿ ನೆಲೆಸಲಿ
ಈದ್ ಮುಬಾರಕ್! ಆ ದೇವರು ನಿಮಗೆಲ್ಲರಿಗೂ ಶಾಂತಿ, ನೆಮ್ಮದಿ, ಸಂತೋಷ ಮತ್ತು ಉತ್ತಮ ಆರೋಗ್ಯ ನೀಡಿ ಹರಸಲಿ ಎಂದಿದ್ದಾರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.
ವಿಶ್ವಾದ್ಯಂತ ಪವಿತ್ರ ರಂಜಾನ್ ಆಚರಣೆ: ಚಿತ್ರಗಳಲ್ಲಿ ನೋಡಿ
|
ಭ್ರಾತೃತ್ವ ನೆಲೆಗೊಳ್ಳಲಿ
ಈದ್ ಅಲ್ ಫಿತರ್ ನ ಈ ದಿನ ಎಲ್ಲರಿಗೂ ನನ್ನ ಶುಭ ಹಾರೈಕೆಗಳು. ಈ ಹಬ್ಬ ಎಲ್ಲರಿಗೂ ಶಾಂತಿ ನೀಡಲಿ, ಸಮಾಜದಲ್ಲಿ ಭ್ರಾತೃತ್ವ ನೆಲೆಗೊಳ್ಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ.
|
ಸುಖ, ಸಮೃದ್ಧಿ, ನೆಮ್ಮದಿ ತರಲಿ
ರಂಜಾನ್ ಹಬ್ಬವು ನಾಡಿನ ಸಮಸ್ತ ಮುಸ್ಲಿಂ ಬಂಧಿಗಳಿಗೆ ಸುಖ, ಸಮೃದ್ಧಿ ಹಾಗೂ ನೆಮ್ಮದಿಯನ್ನು ತರಲಿ ಎಂದು ಹಾರೈಸಿದ್ದಾರೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ.
|
ಶಾಂತಿ ಸೌಹಾರ್ದತೆ ಮೇಳೈಸಲಿ
ನಾಡಿನ ಜನತೆಗೆ ಈದ್ ಉಲ್ ಫಿತರ್ ನ ಹಾರ್ದಿಕ ಶುಭಾಶಯಗಳು. ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮೇಳೈಸಲು ಈ ಪವಿತ್ರ ಹಬ್ಬದ ಆಶಯ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಮುಸ್ಲಿಂ ಸಹೋದರರಿಗೆ ಶುಭಾಶಯ
ನನ್ನ ಎಲ್ಲಾ ಮುಸ್ಲಿಂ ಸಹೋದರ-ಸಹೋದರಿಯರಿಗೆ ಈದ್ ಉಲ್ ಫಿತರ್ ನ ಶುಭಾಶಯಗಳು. ಈ ಹಬ್ಬ ನಮ್ಮೆಲ್ಲ ಬದುಕಿನಲ್ಲಿ ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ ರಾಜ್ಯ ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್.