ನಾಲ್ಕು ಗಂಟೆಗಳ ಕಾಲ ಕಂಬಿ ಹಿಡಿದೇ ತೂಗಾಡುತ್ತಿದ್ದೆವು; ದುರಂತದಲ್ಲಿ ಬದುಕಿ ಬಂದವರ ಕಥೆ
ಡೆಹ್ರಾಡೂನ್, ಫೆಬ್ರುವರಿ 09: "ಸುರಂಗದ ಬಳಿ ಕೆಲಸ ಮಾಡುತ್ತಿದ್ದ ನಮಗೆ ಇದ್ದಕ್ಕಿದ್ದಂತೆ ಶಬ್ದ ಕೇಳಿಸಿತು. ಜನರ ಕೂಗಾಟವೂ ಕೇಳಿಸುತ್ತಿತ್ತು. ಜನರು ನಮ್ಮನ್ನು ಹೊರಬರುವಂತೆ ಕೂಗಿಕೊಳ್ಳುತ್ತಿದ್ದರು. ಆದರೆ ನೋಡನೋಡುತ್ತಿದ್ದಂತೆ ಬೃಹತ್ ಪ್ರಮಾಣದಲ್ಲಿ ನೀರು ರಭಸವಾಗಿ ನುಗ್ಗುತ್ತಿರುವುದು ಕಂಡುಬಂತು. ನಾವು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಆದರೆ ನಮ್ಮ ಕೈಗಳು ನಮ್ಮ ಜೀವವನ್ನೇ ಕಾಪಾಡಿದವು" ಎಂದು ಹಿಮಪ್ರವಾಹದಲ್ಲಿ ತಾವು ಗೆದ್ದುಬಂದ ಕಥೆಯನ್ನು ವಿವರಿಸಿದ್ದಾರೆ 28 ವರ್ಷದ ರಾಜೇಶ್ ಕುಮಾರ್.
ಹಿಮಪ್ರವಾಹದಿಂದ ಸಮೀಪದ ತಪೋವನ ಹೈಡ್ರೋಎಲೆಕ್ಟ್ರಿಕ್ ಕಾಂಪ್ಲೆಕ್ಸ್ಗೂ ನೀರು ನುಗ್ಗಿತ್ತು. ಅಲ್ಲೇ ಸುರಂಗದಲ್ಲಿ ರಾಜೇಶ್ ಕುಮಾರ್ ಹಾಗೂ ಇನ್ನಿತರ ಕೆಲಸಗಾರರು 300 ಮೀಟರ್ (ಸುಮಾರು 1000 ಅಡಿ) ಒಳಗೆ ಕೆಲಸ ಮಾಡುತ್ತಿದ್ದರು. ಸುರಂಗದಲ್ಲಿ ಸಿಲುಕಿದ್ದ ಅವರೆಲ್ಲರನ್ನೂ ರಕ್ಷಿಸಲಾಗಿದೆ. ಈ ಸಂದರ್ಭ ತಾವು ಪಾರಾದ ಕಥೆಯನ್ನು ರಾಜೇಶ್ ಕುಮಾರ್ ಹೇಳಿಕೊಂಡಿದ್ದಾರೆ. ಮುಂದೆ ಓದಿ...

ಸುರಂಗದಲ್ಲಿ ಸಿಲುಕಿಕೊಂಡಿದ್ದ ಹನ್ನೆರಡು ಮಂದಿ
ಹಿಮ ಪ್ರವಾಹ ಸಂಭವಿಸಿದ ಸಂದರ್ಭ ಸುರಂಗಕ್ಕೂ ನೀರು ಹರಿದು ಬಂದಿದ್ದು, ಅದರಲ್ಲಿ ಸುಮಾರು ಹನ್ನೆರಡು ಮಂದಿ ಸಿಕ್ಕಿಹಾಕಿಕೊಂಡಿದ್ದರು. ನೀರು ರಭಸವಾಗಿ ಬಂದಿದ್ದರಿಂದ ಓಡಿ ಹೋಗಲೂ ಆಗದೇ ಅದರೊಳಗೇ ಸಿಲುಕಿಕೊಂಡಿದ್ದರು. ಕೆಸರು, ನೀರಿನ ನಡುವೆ ಸಿಲುಕಿಕೊಂಡಿದ್ದ ಇವರೆಲ್ಲರನ್ನೂ ಇಂಡೋ-ಟೆಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸೋಮವಾರ ಸಂಜೆ ಚಮೋಲಿ ಜಿಲ್ಲೆಯ ನೆಲಮಾಳಿಗೆ ಸುರಂಗದಿಂದ ರಕ್ಷಿಸಿದ್ದಾರೆ.

"ಹಾಲಿವುಡ್ ಸಿನಿಮಾಗಳಲ್ಲಿ ನೋಡಿದ್ದೆವು"
"ಹೊರಗೆ ಜನರು ಕೂಗುತ್ತಿದ್ದುದನ್ನು ನೋಡಿ ನಾವು ಬೆಂಕಿ ಹತ್ತಿಕೊಂಡಿದೆ ಎಂದು ಭಾವಿಸಿದೆವು. ತಕ್ಷಣವೇ ಓಡಲು ಆರಂಭಿಸಿದೆವು. ಆದರೆ ಅದು ನೀರು ಎಂದು ಸೆಕೆಂಡುಗಳಲ್ಲೇ ಗೊತ್ತಾಯಿತು. ನೋಡನೋಡುತ್ತಿದ್ದಂತೆ ನೀರು ಆವರಿಸಿತ್ತು. ನಾವು ಸುರಂಗದ ಮೇಲ್ಫಾಗದ ಕಂಬಿಯನ್ನೇ ರಕ್ಷಣೆಗೆ ಹಿಡಿದುಕೊಂಡೆವು. ನಮಗೆ ಹಾಲಿವುಡ್ ಸಿನಿಮಾದಂಥ ಅನುಭವವಾಯಿತು" ಎಂದು ಹೇಳಿಕೊಂಡಿದ್ದಾರೆ.
|
"ನಾಲ್ಕು ಗಂಟೆಗಳ ಕಾಲ ಕಂಬಿ ಹಿಡಿದೇ ತೂಗಾಡುತ್ತಿದ್ದೆವು"
"ಸುರಂಗದ ಮೇಲ್ಭಾಗದ ಕಂಬಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರ ಇಟ್ಟುಕೊಂಡಿದ್ದೆವು. ಕಸ, ನೀರಿನ ನಡುವೆ ತಲೆ ಮೇಲಕ್ಕೆ ಎತ್ತಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ನಿಂತಿದ್ದೆವು. ಒಬ್ಬೊರಿಗೊಬ್ಬರು ಧೈರ್ಯ ಹೇಳಿಕೊಳ್ಳುತ್ತಿದ್ದೆವು. ಆ ಧೈರ್ಯವೇ ನಮ್ಮನ್ನು ಕಾಪಾಡಿತು. ಏನೇ ಆಗಲಿ, ನಾವು ಹಿಡಿದುಕೊಂಡಿರುವ ಈ ರಾಡ್ ಗಳನ್ನು ಬಿಡಬಾರದು ಎಂದು ಒಬ್ಬೊರಿಗೊಬ್ಬರು ಹೇಳಿಕೊಳ್ಳುತ್ತಿದ್ದೆವು. ಕೊನೆಗೆ ನಮ್ಮ ಕೈಗಳು ನಮ್ಮ ಜೀವ ಉಳಿಸಿದವು" ಎಂದು ಭಾವುಕರಾದರು.

"ಬದುಕಿ ಬರುತ್ತೇವೆಂಬ ನಂಬಿಕೆಯೇ ಇರಲಿಲ್ಲ"
"ನೀರು, ಕಸ, ಕೆಸರು ಸ್ವಲ್ಪ ತಗ್ಗಿದ ಮೇಲೆ ಎಲ್ಲಿಂದಲೋ ಗಾಳಿ ಸಣ್ಣದಾಗಿ ಬೀಸಿದ ಅನುಭವವಾಯಿತು. ಕತ್ತಲೆ ನಡುವೆ ಮುಂದೆ ಕಂಬಿಗಳನ್ನು ಹಿಡಿದುಕೊಂಡೇ ಸಾಗಿದ ನಮಗೆ ಸಣ್ಣ ಕಿಂಡಿಯೊಂದು ಕಾಣಿಸಿತು. ಆದರೆ ಅದು ಎಲ್ಲಿಗೆ ಹೋಗುತ್ತದೆ ಎಂಬುದು ಮಾತ್ರ ಯಾರಿಗೂ ತಿಳಿದಿರಲಿಲ್ಲ. ನಾವು ಬದುಕಿ ಹೊರ ಹೋಗುತ್ತೇವೆಂಬ ಭರವಸೆಯೂ ಇರಲಿಲ್ಲ. ಆದರೆ ಆ ಕಡೆಗೆ ಹೋದಾಗ ಸ್ವಲ್ಪ ಬೆಳಕು ಕೂಡ ಬಂದಿತ್ತು. ನಮ್ಮಲ್ಲೇ ಒಬ್ಬರಿಗೆ ಮೊಬೈಲ್ ಸಿಗ್ನಲ್ ಸಿಕ್ಕಿತು, ನಮ್ಮ ಜೀವ ಉಳಿದಂತಾಯಿತು. ಚಿಕ್ಕ ರಂಧ್ರದ ಮೂಲಕ ನಮ್ಮನ್ನು ರಕ್ಷಣಾ ಪಡೆ ಹೊರ ಕರೆತಂದರು. ಇದೊಂದು ಭಾವುಕ ಕ್ಷಣವೇ ಆಗಿತ್ತು" ಎಂದು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications