ರಾಜಸ್ಥಾನ: ಕಲ್ಯಾಣ ಮಂಟಪದ ಗೋಡೆ ಕುಸಿದು 22 ಸಾವು
ಈ ಪ್ರಾಂತ್ಯದಲ್ಲಿ ಕಳೆದೊಂದು ದಿನದಿಂದ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವುದೇ ಈ ಗೋಡೆ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ.
ಭಾರತ್ ಪುರ (ರಾಜಸ್ಥಾನ), ಮೇ 11: ಮದುವೆ ನಡೆಯುತ್ತಿದ್ದ ಕಲ್ಯಾಣ ಮಂಟಪದ ಗೋಡೆಯೊಂದು ಕುಸಿದು ಬಿದ್ದ ಪರಿಣಾಮ 22 ಮಂದಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಭಾರತ್ ಪುರ ಪ್ರಾಂತ್ಯದಲ್ಲಿ ಬುಧವಾರ (ಮೇ 10) ರಾತ್ರಿ ಸಂಭವಿಸಿದೆ.
ಈ ಘಟನೆಯಲ್ಲಿ 26 ಮಂದಿ ಗಾಯಗೊಂಡಿದ್ದು ಅವರೆಲ್ಲರನ್ನೂ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜಸ್ಥಾನದ ಸಂಪ್ರದಾಯದಂತೆ ಮದುವೆಯ ಅಂಗವಾಗಿ ರಾತ್ರಿ ವೇಳೆ ನಡೆಯುವ ಕೆಲ ಸಡಗರಗಳಲ್ಲಿ ಗಂಡು-ಹೆಣ್ಣಿನ ಕಡೆಯವರು ಸೇರಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಈ ಪ್ರಾಂತ್ಯದಲ್ಲಿ ಕಳೆದೊಂದು ದಿನದಿಂದ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವುದೇ ಈ ಗೋಡೆ ಕುಸಿತಕ್ಕೆ ಕಾರಣವೆಂದು ಹೇಳಲಾಗಿದೆ. ಘಟನೆ ನಡೆದ ಭಾರತ್ ಪುರ ಪ್ರಾಂತ್ಯವು, ರಾಜಸ್ಥಾನದ ರಾಜಧಾನಿ ಜೈಪುರದಿಂದ 389 ಕಿ.ಮೀ. ದೂರದಲ್ಲಿದೆ.












Click it and Unblock the Notifications